Tel: 7676775624 | Mail: info@yellowandred.in

Language: EN KAN

    Follow us :


ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

Posted date: 26 Jan, 2024

Powered by:     Yellow and Red

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ ಯಶಸ್ಸಿಗೆ ಸಹಕರಿಸಲು ಇಓ.ಶಿವಕುಮಾರ್ ಮನವಿ ಮಾಡಿದರು.


ಭಾರತವು ಸಂವಿಧಾನ ಅಂಗೀಕರಿಸಿ ಕೊಂಡು ೭೫ನೇ ವರ್ಷದ ಆಚರಣೆಯ ಪ್ರಯುಕ್ತ ‘ ಸಂವಿಧಾನ ಜಾಗೃತಿ ಜಾಥಾ’ ಎಂಬ ವಿನೂತನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವು ಹಮ್ಮಿಕೊಂಡಿದ್ದು, ಜ.೨೬ ರಿಂದ ಫೆ.೨ರ ವರೆಗೆ ತಾಲ್ಲೂಕಿನಾದ್ಯಂತ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನೊಳಗೊಂಡ ಸ್ತಬ್ಧ ಚಿತ್ರವು ತಾಲ್ಲೂಕು ಕೇಂದ್ರ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ತಾಲ್ಲೂಕಿಗೆ ಆಗಮಿಸಿದೆ. 


ರಾಮನಗರ ಮಾರ್ಗವಾಗಿ  ಕೆಂಗಲ್‌ ಗ್ರಾಮಕ್ಕೆ ಆಗಮಿಸಿದಾಗ ತಹಶೀಲ್ದಾರ್ ಮಹೇಂದ್ರ ಎ.ಹೆಚ್., ತಾ.ಪಂ. ಇಓ ಹಾಗೂ ತಾಲ್ಲೂಕು ಮಟ್ಟದ ಸಂವಿಧಾನ ಜಾಗೃತಿ ಜಾಥಾ ಸಮಿತಿ ಅಧ್ಯಕ್ಷರು ಆದ ಶಿವಕುಮಾರ್, ಕಾರ್ಯದರ್ಶಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸರೋಜಮ್ಮ, ವೃತ್ತ ನಿರೀಕ್ಷಕಿ ಶೋಭಾ.ಎಸ್.ಐ ಹರೀಶ್, ಜಿ.ಪಂ. ಎಇಇ ಶಂಕರಪ್ಪ, ಅಕ್ಷರ ದಾಸೋಹ ಅಧಿಕಾರಿ ಸಿದ್ದರಾಜು, ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಮತ್ತು ದಲಿತ ಮುಖಂಡರಾದ ಶೇಖರ್, ಕುಮಾರ್, ಅಪ್ಪಗೆರೆ ಶಿವಮೂರ್ತಿ, ಶ್ರೀನಿವಾಸ್, ಹನಮಂತಯ್ಯ, ರಾಮಕೃಷ್ಣ, ಶಿವಕುಮಾರ್,ಗುರುಮೂರ್ತಿ, ಲಕ್ಷ್ಮಿಪತಿ ಮಂಗಳವಾರಪೇಟೆ, ಕೋಟೆ ಮುಕುಂದ, ಆರ್.ಐ.ಲೋಕೇಶ್, ವಂದಾರಗುಪ್ಪೆ ರಾಜೇಶ್, ಅಪ್ಪು ಬ್ರಿಗೇಡ್ ಮಂಜು, ಹೊಂಗನೂರು ತೀರ್ಥಪ್ರಸಾದ್,  ವೆಂಟೇಶ್ (ಸೇಟು), ಪ್ರದೀಪ್, ಹರೀಶ್ ಸೇರಿದಂತೆ ಹಲವರು ಹಾಜರಿದ್ದು,


ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮತ್ತು ಜಾಥಾಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಕರ್ನಾಟಕ ಅಹಿಂದ ರಕ್ಷಣಾ ವೇದಿಕೆ ವತಿಯಿಂದ ಸಿಹಿಯನ್ನು ವಿತರಿಸಲಾಯಿತು.

ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಶಿವಕುಮಾರ್ ಅವರು ಮಾತನಾಡಿ, ಭಾರತ ಸಂವಿಧಾನ ಅಂಗೀಕರಿಸಿಕೊಂಡು ೭೫ನೇ ವರ್ಷದ ಆಚರಣೆಯ ಪ್ರಯುಕ್ತ ಸರ್ಕಾರದ ನಿರ್ದೇಶನದಂತೆ ಸಂವಿಧಾನ ಜಾಗೃತಿ ಜಾಥಾ ಸ್ಥಬ್ಧ ಚಿತ್ರವು ಇಂದಿನಿಂದ ಫೆ.೨ರ ವರೆಗೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಸಂವಿಧಾನದ ಮೌಲ್ಯಗಳು ಮತ್ತು ಆಶಯ, ಪರಿಕಲ್ಪನೆ, ಸಂವಿಧಾನದಿಂದ ಸಿಕ್ಕಿರುವ ಬದುಕಿನ ಸುರಕ್ಷತೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಜಾಥಾದ ಉದ್ದೇಶವಾಗಿದೆ. ಸ್ತಬ್ಧ ಚಿತ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಸಂವಿಧಾನದ ಪರಿಕಲ್ಪನೆ, ಅವರ ಪ್ರತಿಮೆ, ಪ್ರಮುಖ ವ್ಯಕ್ತಿಗಳ ಮಾಹಿತಿ, ಸಾಹಿತ್ಯ, ಕಲೆ ಸಂಸ್ಕೃತಿ ಮತ್ತು ಸರ್ಕಾರ ಐದು ಯೋಜನೆಗಳನ್ನು ಅಳವಡಿಸಿ ಜೊತೆಗೆ ಕರಪತ್ರಗಳನ್ನು ವಿತರಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಜಾಥಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.


ಸಂವಿಧಾನ ಜಾಗೃತಿ ಜಾಥಾ ಕೆಂಗಲ್ ಮಾರ್ಗವಾಗಿ ಆಗಮಿಸಿ ವಂದಾರಗುಪ್ಪೆ ಮತ್ತು ತಗಚಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿದಾಗ ಅದ್ದೂರಿ ಸ್ವಾಗತ ನೀಡಲಾಯಿತು. ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಓದಿ ಸಂವಿಧಾನ ಪೀಠಿಕೆ ಪತ್ರ, ಕರಪತ್ರವನ್ನು ಜನತೆಗೆ ವಿತರಿಸಿ ಜನಜಾಗೃತಿ ಮೂಡಿಸಲಾಯಿತು.  


ಜಾಥಾದ ಮಾರ್ಗ: ತಾಲ್ಲೂಕಿಗೆ ಆಗಮಿಸಿರುವ ಸಂವಿಧಾನ ಜಾಗೃತಿ ಜಾಥಾವು  ಜ.೨೭ರಂದು ಶನಿವಾರ ತಗಚಗೆರೆಯಿಂದ ಹೊರಟು ನೀಲಸಂದ್ರ, ಹೊಂಗನೂರು, ವಿರುಪಾಕ್ಷಿಪುರ. ಬಿ.ವಿಹಳ್ಳಿ, ಭೂಹಳ್ಳಿ, ಸಿಂಗರಾಜಪುರ ಗ್ರಾಮ ಪಂಚಾಯಿತಿ ಹಾಗೂ ಜ.೨೮ರಂದು ಭಾನುವಾರ ಕೋಡಂಬಹಳ್ಳಿ, ಜೆ.ಬ್ಯಾಡರಹಳ್ಳಿ, ಎಲೆತೋಟದಹಳ್ಳಿ, ಇಗ್ಗಲೂರು ಹಾರೋಕೊಪ್ಪ ಗ್ರಾಮ ಪಂಚಾಯಿತಿ, ಜ.೨೯ರಂದು ಸೋಮವಾರ ಸೋಗಾಲ, ಬಾಣಗಹಳ್ಳಿ, ಅಕ್ಕೂರು, ಸುಳ್ಳೇರಿ, ಮಳೂರು ಪಟ್ಟಣ ಗ್ರಾಮ ಪಂಚಾಯಿತಿ, ಜ.೩೦ರಂದು ಮಂಗಳವಾರ ಕೂಡ್ಲೂರು,ಮಳೂರು,ಚಕ್ಕೆರೆ, ಮತ್ತೀಕೆರೆ ಮುದಗೆರೆ ಗ್ರಾಮ ಪಂಚಾಯಿತಿ, ಜ.೩೧ರಂದು ಬುಧವಾರ ಹೆಚ್.ಬ್ಯಾಡರಹಳ್ಳಿ, ಎಂ.ಬಿ.ಹಳ್ಳಿ, ಬೇವೂರು, ಮಾಕಳಿ, ನಾಗವಾರ ಗ್ರಾ. ಪಂ., ಫೆ೧ರಂದು ಗುರುವಾರ  ದಶವಾರ, ಮೈಲನಾಯಕಹಳ್ಳಿ, ತಿಟ್ಟಮಾರನಹಳ್ಳಿ,ರಾಂಪುರ, ಮಧ್ಯಾಹ್ನ ಚನ್ನಪಟ್ಟಣ ನಗರಸಭೆ, ಫೆ.೨ರಂದು ಮಧ್ಯಾಹ್ನ ೧೨ ಗಂಟೆಗೆ ನಗರಸಭೆಯಿಂದ ವಿಭೂತಿಕರೆ ಮಾರ್ಗವಾಗಿ ಸಂಚರಿಸಲಿದೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಹಾಜರಿದ್ದು ಸಹಕರಿಸಬೇಕು ಎಂದು ಸಮಾಜ ಕಲ್ಯಾಣ ಅಧಿಕಾರಿ ಸರೋಜಮ್ಮ ಅವರು ಮನವಿ ಮಾಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑