Tel: 7676775624 | Mail: info@yellowandred.in

Language: EN KAN

    Follow us :


ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

Posted date: 16 Feb, 2024

Powered by:     Yellow and Red

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಶೇ.95.77 ಪ್ರತಿಶತ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಜಿಲ್ಲೆಯ 9 ಮತಗಟ್ಟೆಯಲ್ಲಿ ಶಾಂತಿಯುತ ಮತದಾನವಾಗಿದೆ.

ಜಿಲ್ಲೆಯಲ್ಲಿ 1,447 ಪುರುಷ 

ಮತದಾರರ ಪೈಕಿ 1,388 ಹಾಗೂ 1,085 ಮಹಿಳಾ ಮತದಾರರ ಪೈಕಿ 1,037  ಮತದಾರರು ತಮ್ಮ ಹಕ್ಕು  ಚಲಾಯಿಸಿದ್ದು, ಒಟ್ಟಾರೆ 2,532 ಮತಗಳ ಪೈಕಿ 2,425  ಮತಗಳು ಚಲಾವಣೆಗೊಂಡಿವೆ. ಈ ಮೂಲಕ ಜಿಲ್ಲೆಯಲ್ಲಿ  ಒಟ್ಟಾರೆ ಶೇ. 95.77 ಮತದಾನವಾಗಿದೆ.


*ಮತಗಟ್ಟೆಗಳ ವಿವರ:*

ರಾಮನಗರ ತಾಲ್ಲೂಕಿನಲ್ಲಿ  ತಾಲೂಕು ಆಡಳಿತ  ಸೌಧದಲ್ಲಿರುವ ತಹಶೀಲ್ದಾರ್  ಕಚೇರಿ ಆವರಣದಲ್ಲಿ  ಸ್ಥಾಪಿಸಲಾಗಿದ್ದ 2  ಮತಗಟ್ಟೆಗಳಲ್ಲಿ 654  ಮತದಾರರಿದ್ದು, ಈ ಪೈಕಿ ಒಟ್ಟು 622 ಮತದಾರರು ಹಕ್ಕು  ಚಲಾಯಿಸಿದ್ದಾರೆ. ಅವರಲ್ಲಿ  337 ಪುರಷರು ಹಾಗೂ 285 ಮಹಿಳೆಯರು ತಮ್ಮ ಮತ  ಚಲಾಯಿಸಿದ್ದಾರೆ.


ಮಾಗಡಿ ತಾಲ್ಲೂಕಿನ ಕುದೂರು ಗ್ರಾಮ ಪಂಚಾಯತ್ ಕಚೇರಿ ಹಾಗೂ ತಹಶೀಲ್ದಾರರ  ಕಚೇರಿಯ ಕೋರ್ಟ್  ಆವರಣದಲ್ಲಿ  ಸ್ಥಾಪಿಸಲಾಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಒಟ್ಟು 464 ಮತದಾರರ ಪೈಕಿ 450 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅವರಲ್ಲಿ 273 ಪುರುಷರು ಹಾಗೂ 177 ಮಹಿಳೆಯರು ಮತ ಚಲಾಯಿಸಿದ್ದಾರೆ.


*ಸುದ್ದಿ ಮತ್ತು ಜಾಹಿರಾತಿಗಾಗಿ  ಸಂಪರ್ಕಿಸಿ:ಮೊ. ನಂ: 9742424949*


ಚನ್ನಪಟ್ಟಣ ತಾಲ್ಲೂಕಿನ  ತಾಲ್ಲೂಕು ಆಡಳಿತ ಸೌಧದ  ತಹಶೀಲ್ದಾರ್ ಕಚೇರಿ ಹಾಗೂ ಕೋಡಂಬಳ್ಳಿಯ ನಾಡಕಚೇರಿಯಲ್ಲಿ ರಚಿಸಲಾಗಿರುವ  ಮತಗಟ್ಟೆಯಲ್ಲಿ ಒಟ್ಟು 771  ಮತದಾರರಿದ್ದು. ಅವರ ಪೈಕಿ  729 ಮತದಾರರು ಹಕ್ಕು ಚಲಾಯಿಸಿದ್ದಾರೆ. 406 ಪುರುಷರು ಹಾಗೂ 323 ಮಹಿಳೆಯರು ಸೇರಿದ್ದಾರೆ.

ಹಾರೋಹಳ್ಳಿ ತಾಲೂಕಿನ  ಕೆಪಿಎಸ್ ಜಿಎಚ್‌ಪಿಎಸ್  ಮಾಡಲ್ ಹೈಯರ್ ಪ್ರೈಮರಿ ಸ್ಕೂಲ್‌ನಲ್ಲಿ ಸ್ಥಾಪಿಸಲಾಗಿದ್ದ  ಮತಗಟ್ಟೆ ವ್ಯಾಪ್ತಿಯಲ್ಲಿದ್ದ 126 ಜನ ಮತದಾರರ ಪೈಕಿ 125 ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 74 ಪುರುಷರು ಹಾಗೂ 51 ಮಹಿಳೆಯರು ಮತ  ಚಲಾಯಿಸಿದ್ದಾರೆ.


ಕನಕಪುರ ತಾಲ್ಲೂಕಿನ  ತಾಲ್ಲೂಕು ಆಡಳಿತ  ಸೌಧದಲ್ಲಿರುವ ತಹಶೀಲ್ದಾರ್  ಕಚೇರಿಯಲ್ಲಿ ರಚಿಸಲಾಗಿದ್ದ  ಎರಡು ಮತಗಟ್ಟೆಗಳಲ್ಲಿ 528 ಜನ ಮತದಾರರಿದ್ದರು.  ಅವರಲ್ಲಿ 499 ಜನರು ಹಕ್ಕು  ಚಲಾಯಿಸಿದ್ದಾರೆ. ಪುರುಷರು  298 ಹಾಗೂ 201  ಮಹಿಳೆಯರು ಮತ  ಚಲಾಯಿಸಿದ್ದಾರೆ ಎಂದು  ಬೆಂಗಳೂರು ಶಿಕ್ಷಕರ ಕ್ಷೇತ್ರದ  ಸಹಾಯಕ  ಚುನಾವಣಾಧಿಕಾರಿಯೂ  ಆಗಿರುವ ಜಿಲ್ಲಾ  ಚುನಾವಣಾಧಿಕಾರಿ  ಡಾ. ಅವಿನಾಶ್ ಮೆನನ್  ರಾಜೇಂದ್ರನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139,

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑