Tel: 7676775624 | Mail: info@yellowandred.in

Language: EN KAN

    Follow us :


ಎಂ. ರಾಜು ರವರ ಭೂಶಾಂತಿ ಕಾರ್ಯಕ್ಕೆ ಆಗಮಿಸುವಂತೆ, ಕುಟುಂಬದವರ ಮನವಿ

Posted date: 12 Mar, 2024

Powered by:     Yellow and Red

ಎಂ. ರಾಜು ರವರ ಭೂಶಾಂತಿ ಕಾರ್ಯಕ್ಕೆ ಆಗಮಿಸುವಂತೆ, ಕುಟುಂಬದವರ ಮನವಿ

ಚನ್ನಪಟ್ಟಣ: ತಾಲ್ಲೂಕಿನ ಮತ್ತಿಕೆರೆ-ಶೆಟ್ಟಿಹಳ್ಳಿ ನಿವಾಸಿ, ರಾಮನಗರ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾಗಿದ್ದ, ದಿವಂಗತ ಎಂ. ರಾಜು ರವರ ಉತ್ತರ ಕ್ರಿಯಾದಿ ಭೂಶಾಂತಿ ಕಾರ್ಯಕ್ರಮವು ದಿ:14.03.2024 ನೇ ಗುರುವಾರ 11.00 ಗಂಟೆಗೆ ಸ್ವಗ್ರಾಮ, ಬೆಳೆಕೆರೆ ಗ್ರಾಮದ ಕೃಷ್ಣೇಗೌಡರ ತೋಟದಲ್ಲಿ ಏರ್ಪಡಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಲು ರಾಜು ರವರ ಹಿತೈಷಿಗಳು, ಬಂಧು-ಬಾಂಧವರು ಇದನ್ನೇ ಆಹ್ವಾನವೆಂದು ತಿಳಿದು ಭಾಗವಹಿಸಬೇಕೆಂದು ಎಂ. ರಾಜುರವರ ಕುಟುಂಬದವರು  ಮಾಡಿದ್ದಾರೆ. 


  ಎಂ. ರಾಜು ರವರು ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕೆಲಸ ಆರಂಭಿಸಿ, ಹಂತ ಹಂತವಾಗಿ ಬಡ್ತಿ ಪಡೆದು, ರಾಮನಗರ ಜಿಲ್ಲೆಯ ಸಹಾಯಕ ನಿರ್ದೇಶಕರಾಗಿ ಉತ್ತಮ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದರು. ಇವರ ಅಧಿಕಾರಾವಧಿಯಲ್ಲಿ ಕಲಾವಿದರಿಗೆ ಹಲವಾರು ಯೋಜನೆಗಳ ಮೂಲಕ ಸಹಾಯ ನೀಡಿದ್ದರು. ಬಹುತೇಕ ಕಲಾವಿದರಿಗೆ ಇಲಾಖೆ ವತಿಯಿಂದ ಅನುಕೂಲಗಳನ್ನು ಕಲ್ಪಿಸಿದ್ದರು. ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಹಾರೋಹಳ್ಳಿ ಮತ್ತು ಬಿಡದಿ ಸೇರಿದಂತೆ, ಆಯಾಯ ತಾಲ್ಲೂಕಿನ ಹಾಗೂ ನಗರ ವಾಸಿ ಕಲಾವಿದರನ್ನು ಹಾಗೂ ಕಲೆಗಳನ್ನು ಪ್ರೋತ್ಸಾಹಿಸಿದರು.

 

*ಸುದ್ದಿ ಮತ್ತು ಜಾಹಿರಾತಿಗಾಗಿ  ಸಂಪರ್ಕಿಸಿ: ಮೊ. ನಂ: 9742424949.*


ರಾಮನಗರ ಜಿಲ್ಲಾದ್ಯಂತ ಹಲವಾರು ಕಲಾ ಬಳಗಗಳ ಕಲಾವಿದರುಗಳು, ಅವರ ಅಭಿಮಾನಿಗಳು, ಸ್ನೇಹಿತರು ಭೂಶಾಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಎಂ. ರಾಜು ರವರಿಗೆ ಚಿರ ಶಾಂತಿ ಕೋರಬೇಕೆಂದು ಮೃತರ ಧರ್ಮಪತ್ನಿ ಸುಧಾ ಪಿ., ಮಕ್ಕಳಾದ ಶ್ರೀಮತಿ. ನಿತ್ಯಾ ಆರ್. ಮತ್ತು ಕು. ಸೇವಂತಿನಿ ಆರ್. ಮತ್ತು ಕುಟುಂಬ ವರ್ಗದವರು ಮನವಿ ಮಾಡಿದ್ದಾರೆ. 


ಗೋ. ರಾ. ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑