ಭೀಮ ಪ್ರಭುಗೆ ನಮಿಸೊಣ ಬನ್ನಿರೊ
ಅಣ್ಣಾ ತಮ್ಮಾ ಬನ್ನಿರೊ
ಅವ್ವ ಅಯ್ಯ ಬನ್ನಿರೋ
ಜಗದ ಬೆಳಕ ಬೆಳಗಿದ
ಜೈಬೀಮನ ಜನುಮದಿನಕೆ ಬನ್ನಿರೋ
ಬಡಜನರ ಬೆವರಿಗೆ
ಬೆಲೆ ತಂದ ಬಾಬಾಸಾಹೇಬರಿಗೆ
ಜೈ ಜೈ ಎನ್ನಿರೊ
ಜಾತಿಯತೆಯ ತೊಲಗಿಸಲು
ನೀತಿವಂತರಾಗಿ ಬಾಳಲು
ಬದುಕ ಕಟ್ಟಿಕೊಟ್ಟ
ಬಾರತಿಸುತನ
ನೆನೆಯೋಣ ಬನ್ನಿರೋ
ದುಷ್ಟಜನಕೆ ಶಿಷ್ಟತೆ
ಕಾನೂನು ಹೇಳಿಕೊಟ್ಟ
ಬೀಮಪ್ರಭುಗೆ
ನಮಿಸೋಣ ಬನ್ನಿರೋ
ನೊಂದಮನಗಳಿಗೆ ಬೆಂದ
ಜೀವಗಳಿಗೆ ಜ್ನಾನಸುಧೆಯ
ಅಮೃತ ಉಣಿಸಿದ
ಭಾರತರತ್ನ ಬೀಮದೊರೆಗೆ
ನವಭಾರತದ ಮನುರಾಯನಿಗೆ
ನಮಿಸೋಣ ಬನ್ನೀರೊ
ಬನ್ನಿರೋ ಬೀಮಜನುಮದಿನಕೆ ಬನ್ನಿರೋ ಸೋದರರೇ
ಸಾಗಿಬನ್ನೀ ಮಾನವತೆಯ
ದೀಪ ಹಿಡಿಯ ಬನ್ನಿ.
---ಭಾಸ್ಕರ್ ಆರೂಢಿ
ಪ್ರತಿಕ್ರಿಯೆಗಳು