ರಾಮನಗರ ಮ್ಯಾರಥಾನ್
ರಾಮನಗರ ಮ್ಯಾರಥಾನ್ ಮಾಹಿತಿ ಒಳಗೊಂಡ ಕರಪತ್ರ ಹಾಗೂ ಓಟಗಾರರ ಟಿ - ಶರ್ಟ್ಸ್ ಮಾದರಿಯನ್ನು ರಾಮನಗರ ಜಿಲ್ಲಾಧಿಕಾರಿಗಳಾದ ಡಾ।। ಬಿ ಆರ್ ಮಮತಾ ರವರು ಅನಾವರಣಗೊಳಿಸಿದರು
ಯೆಲ್ಲೋ ಆಂಡ್ ರೆಡ್ ಫೌಂಡೇಷನ್ಸ್ ಇದೇ ಫೆಬ್ರವರಿ ೧೧ ನೇ, ಭಾನುವಾರ ೨೦೧೮ ರಂದು ರಾಮನಗರದಲ್ಲಿ ರೋಟರಿ ಸಿಲ್ಕ್ ಸಿಟಿ ರಾಮನಗರ ಮತ್ತು ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಕ್ಲಬ್ ರವರ ಸಹಭಾಗಿತ್ವದಲ್ಲಿ ರಾಮನಗರ ಮ್ಯಾರಥಾನ್ ಆಯೋಜಿಸಲಾಗುತ್ತಿದೆ.
ಈ ಕಾರ್ಯಕ್ರಮದ ಸಿದ್ದತೆಯ ಪೂರಕವಾಗಿ ದಿನಾಂಕ ೨೯/೦೧/೨೦೧೮ ರಂದು ಮ್ಯಾರಥಾನ್ ಮಾಹಿತಿ ಒಳಗೊಂಡ ಕರಪತ್ರ ಹಾಗೂ ಓಟಗಾರರ ಟಿ - ಶರ್ಟ್ಸ್ ಮಾದರಿಯನ್ನು ರಾಮನಗರ ಜಿಲ್ಲಾಧಿಕಾರಿಗಳಾದ ಡಾ।। ಬಿ ಆರ್ ಮಮತಾ ರವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನಿಟ್ಟುಕೊಂಡು ಮಾಡುತ್ತಿರುವ ಈ ಮ್ಯಾರಥಾನ್ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ನಾನು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆಂದು ಉತ್ಸಾಹದ ಮಾತುಗಳನ್ನಾಡಿದರು ಹಾಗೂ ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಯೆಲ್ಲೋ ಆಂಡ್ ರೆಡ್ ಸರ್ವೀಸ್ ಪ್ರೈ.ಲಿ. ನ ವ್ಯವಸ್ಥಾಪಕ ನಿರ್ದೇಶಕರಾದ ಆನಂದಾಶಿವಾ, ಯೆಲ್ಲೋ ಆಂಡ್ ರೆಡ್ ಫೌಂಡೇಷನ್ಸ್ನ ಅಧ್ಯಕ್ಷರಾದ ಅಮಿತ್ ರಾಜ್ ಶಿವಾ ಸದಸ್ಯರುಗಳಾದ ನಯನ, ಸುನೀತಾ, ಶೋಭಾ ಹಾಗೂ ರೋಟರಿ ಸಿಲ್ಕ್ ಸಿಟಿ ರಾಮನಗರ ಸದಸ್ಯರಾದ ಅನುರಾಧ ರವರು ಹಾಜರಿದ್ದರು.
It is a very good move in ramanagar all the best to everyone who involved in this.