Tel: 7676775624 | Mail: info@yellowandred.in

Language: EN KAN

    Follow us :


ಅಯ್ಯಪ್ಪ ಭಕ್ತರಿದ್ದ ಮಿನಿ ಬಸ್ ಉರುಳಿ ಇಬ್ಬರು ಸಾವು*

Posted date: 03 Jan, 2019

Powered by:     Yellow and Red

ಅಯ್ಯಪ್ಪ ಭಕ್ತರಿದ್ದ ಮಿನಿ ಬಸ್ ಉರುಳಿ ಇಬ್ಬರು ಸಾವು*

ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿಗೆ ತೆರಳಲು ಮಾಲೆ ಧರಿಸಿದ ಭಕ್ತರು ಇಂದು ಅದೇ ಗ್ರಾಮದ ಬೆಟ್ಟದಲ್ಲಿ ನೆಲೆಸಿರುವ ಬೆಟ್ಟದ ತಿಮ್ಮಪ್ಪ ಸ್ವಾಮಿಯ ದರ್ಶನ ಮಾಡಿ ಪ್ರಸಾದ ಸೇವಿಸಿ ಹಿಂದಿರುಗುವ ವೇಳೆ ವಾಹನ ಉರುಳಿದ್ದು ಇಬ್ಬರು ಸ್ಥಳದಲ್ಲಿಯೇ ಅಸುನೀಗಿ ಐದಾರು ಮಂದಿಗೆ ಗಾಯಗಳಾಗಿವೆ.


ಬೆಟ್ಟದ ಮೇಲೆ ತೆರಳಿ ಪ್ರಸಾದ ಸೇವಿಸಿದ ನಂತರ ಎಲ್ಲರೂ ವಾಹನವೇರಿದ್ದಾರೆ, (ಕೆಎ ೩೪ ಎ ೦೬೭೫ ನಂಬರಿನ ಸ್ವರಾಜ್ ಮಜ್ಡಾ) ವಾಹನ ಚಾಲನೆಗೊಳ್ಳುತ್ತಲೇ ಮುಂದಿದ್ದ ದೊಡ್ಡ ಕಲ್ಲಿನ ಮೇಲೆ ಚಕ್ರ ಉರುಳಿ ಆಯತಪ್ಪಿ ಸ್ಥಳದಲ್ಲಿಯೇ ಮಗುಚಿಕೊಂಡಿದ್ದು ಪಕ್ಕದಲ್ಲಿಯೇ ನಿಂತಿದ್ದ ಬೇವೂರು ಗ್ರಾಮದ ಸಂಜೀವಮ್ಮ (೫೦) ಮತ್ತು ಕುಣಿಗಲ್ ತಾಲ್ಲೂಕಿನ ತಿಮ್ಮಯ್ಯ (೬೫) ಎಂಬುವವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ ಉಳಿದಂತೆ ಐದಾರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲು‌ ಮಾಡಿ ಎಂ ಕೆ ದೊಡ್ಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದೇವೆ ಎಂದು ಗ್ರಾಮಾಂತರ ಪೋಲಿಸ್ ವೃತ್ತ ನಿರೀಕ್ಷಕ ಎ ಪಿ ಕುಮಾರ್ ಪತ್ರಿಕೆಗೆ ಮಾಹಿತಿ ನೀಡಿದರು.

ಗೋ ರಾ ಶ್ರೀನಿವಾಸ...

ಮೊ:9845856139.






ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑