ಕುರಿಗಾಹಿ ಉರುಳಿಗೆ ಚಿರತೆ ಬಲಿ
ಹಿಂದೊಮ್ಮೆ ಚಿರತೆಯೊಂದು ಕುರಿ ಕೊಟ್ಟಿಗೆಗೆ ಬಂದು ಕುರಿಯನ್ನು ಕೊಂದು ತಿಂದಿತ್ತು ಎಂಬ ಕಾರಣಕ್ಕೆ ಕುರಿ ಕೊಟ್ಟಿಗೆಯ ಬಳಿ ಮೋಟರ್ ಬೈಕ್ ನ ಎಕ್ಸಲೇಟರ್ ತಂತಿಯ ಉರುಳನ್ನು ಮಾಡಿ ಇಟ್ಟಿದ್ದ ಉರುಳಿಗೆ ಚಿರತೆಯೊಂದು ಸಿಲುಕಿ ಒದ್ದಾಡಿ ಪ್ರಾಣ ಬಿಟ್ಟಿರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ತಾಲ್ಲೂಕಿನ ಭೈರನಾಯಕನಹಳ್ಳಿ ಗ್ರಾಮದ ಅಮ್ಮಳ್ಳಿಗೌಡ ಬಿನ್ ವೀರಭದ್ರಯ್ಯ ಎಂಬುವವರು ಉರುಳು ಹಾಕಿದ್ದು ನಿನ್ನೆ ರಾತ್ರಿ ವೇಳೆಯಲ್ಲಿ ಬಂದ ಚಿರತೆ ಉರುಳಿಗೆ ಸಿಕ್ಕಿ ಸಾವಿಗೀಡಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಾಧಿಕಾರಿಗಳು ಪರೀಕ್ಷಿಸಿ ಮರಣೋತ್ತರ ವರದಿ ನೀಡಿದ ನಂತರ ಅಪರಾಧಿಯ ವಿರುದ್ಧ ಕಾನೂನು ಕ್ರಮ ಜರುಗುಸಲಾಗುತ್ತದೆ ಎಂದು ವಲಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು