ಗರಕಹಳ್ಳಿ ಸಿದ್ದೇಶ್ವರ ನಿಗೆ ಮಹಾಮಂಡಳೋತ್ಸವ
ಕಳೆದ ಪೆಬ್ರವರಿ ಎಂಟರಂದು ಉದ್ಘಾಟನೆಗೊಂಡಿದ್ದ ಗರಕಹಳ್ಳಿ ಸಿದ್ದೇಶ್ವರ ಸ್ವಾಮಿಗೆ ದಿನಾಂಕ ೨೭/೦೩/೨೦೧೯ ರ ಗುರುವಾರದಂದು ಮಹಾ ಮಂಡಳೋತ್ಸವ ನಡೆಯಲಿದೆ ಎಂದು ಗರಕಹಳ್ಳಿ ಸಿದ್ದೇಶ್ವರ ದೇವಾಲಯದ ಪುನರ್ ನಿರ್ಮಾಣ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮದ ಹೊರವಲಯದ ಬೆಟ್ಟದ ಮೇಲೆ ನೆಲೆಸಿರುವ ಬೆಟ್ಟದ ಸಿದ್ದೇಶ್ವರ ಸ್ವಾಮಿ ಯ ದೇವರಗುಡಿಯು ಗ್ರಾಮದಲ್ಲಿ ಇದ್ದು ತುಂಬಾ ಶಿಥಿಲಗೊಂಡಿದ್ದರಿಂದ ದೇವಾಲಯ ಪುನರ್ನಿರ್ಮಾಣ ಹಾಗೂ ವಿಗ್ರಹ ಪ್ರತಿಷ್ಟಾಪನೆ ಮಾಡಲಾಗಿತ್ತು.
ನಾಳೆ ಅಂದರೆ ನಲವತ್ತೆಂಟು ದಿನಗಳಿಗೆ ಮಹಾಮಂಡಳೋತ್ಸವದ ಜೊತೆಗೆ ಹಲವು ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಂಡಿದ್ದು, ಬರುವ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮತ್ತು ನಾಟಕವನ್ನು ಹಮ್ಮಿಕೊಳ್ಳಲಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಬೇಕು ಎಂದು ಸಮಿತಿಯ ಪರವಾಗಿ ಮುಖಂಡ ಗರಕಹಳ್ಳಿ ಕೃಷ್ಣೇಗೌಡರು ಮನವಿ ಮಾಡಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು