Tel: 7676775624 | Mail: info@yellowandred.in

Language: EN KAN

    Follow us :


ಬಿರುಸುಗೊಳ್ಳದ ಬೆಂಗಳೂರು ಲೋಕಸಭಾ ಕ್ಷೇತ್ರ

Posted date: 02 Apr, 2019

Powered by:     Yellow and Red

ಬಿರುಸುಗೊಳ್ಳದ ಬೆಂಗಳೂರು ಲೋಕಸಭಾ ಕ್ಷೇತ್ರ

೨೦೧೯ ರ ಬೆಂಗಳೂರು ಲೋಕಸಭಾ ಚುನಾವಣೆ ಬಿಸಿಲಿನ ಬೇಗೆಗೋ, ಕಾರ್ಯಕರ್ತರ ನಿರುತ್ಸಾಹದಿಂದಲೋ ಕಳೆಗುಂದುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ, ಪಕ್ಕದ ಮಂಡ್ಯ ಜಿಲ್ಲೆಗೆ ಹೋಲಿಸಿ‌ ನೋಡಿದರೇ ಶೇಕಡಾ ಹತ್ತರಷ್ಟು ಜಿದ್ದಾಜಿದ್ದಿ ಇಲ್ಲದಿರುವುದು‌ ಮೇಲ್ನೋಟಕ್ಕೆ ಕಂಡುಬರುತ್ತಿದೆ.


ಅಭ್ಯರ್ಥಿಗಳು ಯಾರೆಂದೂ ಘೋಷಣೆ ಆಗುವ ಮುನ್ನಾ ಇದ್ದ ಖದರು ಉತ್ಸಾಹ ಅಭ್ಯರ್ಥಿ ಘೋಷಣೆಯ ನಂತರ ಕಾರ್ಯಕರ್ತರಲ್ಲಿ‌ ಇಲ್ಲವಾಗಿದೆ, ಪಕ್ಷ ಹಾಗೂ ರಾಜಕೀಯ ನಾಯಕರ ಮೇಲೆ ಊಹಾಪೋಹಗಳು ಹರಿದಾಡುತ್ತಿವೆ, ಪ್ರಚಾರ ಎನ್ನುವುದು ಸಾಮಾಜಿಕ ಜಾಲತಾಣಗಳಿಗಷ್ಟೇ ಸೀಮೀತವಾಗಿದೆ ಎಂಬುದರಲ್ಲಿ ಅನುಮಾವೇ ಇಲ್ಲದಂತಾಗಿದೆ.


ಮೈತ್ರಿ ಪಕ್ಷದಿಂದ ಡಿ ಕೆ ಸುರೇಶ್ ಖಚಿತವಾಗಿದ್ದರೂ ಸಹ ಬಿಜೆಪಿಯಿಂದ ಯಾರೂ ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು, ಚನ್ನಪಟ್ಟಣ ಸೇರಿದಂತೆ ಕೆಲವು ವಿಧಾನಸಭೆ ಕ್ಷೇತ್ರದಲ್ಲಿ ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ರವರೇ ಅಭ್ಯರ್ಥಿ ಎಂದು ಬಿಂಬಿತವಾದರೂ ಸಹ ಒಳಗೊಳಗೆ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್, ಮಾಜಿ ಶಾಸಕಿ ತೇಜಶ್ವಿನಿಗೌಡ ಸೇರಿದಂತೆ ಆಕಾಂಕ್ಷಿಗಳು ವರಿಷ್ಠರಿಗೆ ದುಂಬಾಲು ಬಿದ್ದಿದ್ದರ ಜೊತೆಗೆ ಸಿ ಪಿ ಯೋಗೇಶ್ವರ್ ತನ್ನ ತಂತ್ರವನ್ನು ಬಳಸಿ ಮಗಳು ನಿಶಾ ಗೆ ಟಿಕೆಟ್ ಕೊಡಿಸಲು ಮುಂದಾಗಿದ್ದರು.


ಈ ಎಲ್ಲಾ ಗೊಂದಲಗಳನ್ನು ಸರಿಸಿ ಬಿಜೆಪಿ ವರಿಷ್ಠರು ಅಶ್ವಥ್ ನಾರಾಯಣ ರವರಿಗೆ ಟಿಕೆಟ್ ಘೋಸಿಸಿದ ನಂತರ ಸಿ ಪಿ ಯೋಗೇಶ್ವರ್ ಮತ್ತು ರುದ್ರೇಶ್ ರವರು ಏನೋ ಪಕ್ಷದ ಪರ ಪ್ರಚಾರ ಮಾಡಬೇಕು ಮಾಡೋಣ ಎಂಬಂತೆ ಕಾಟಚಾರಕ್ಕೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ಅಲ್ಲೊಂದು ಇಲ್ಲೊಂದು ಸುದ್ದಿಗೋಷ್ಠಿ ಬಿಟ್ಟರೆ ಎರಡೂ ಪಕ್ಷದ ಅಭ್ಯರ್ಥಿಗಳು ಪ್ರಚಾರಕ್ಕಿಳಿಯದೇ ಇರುವುದು ಕಾರ್ಯಕರ್ತರಲ್ಲಿ ಅಚ್ಚರಿಯ ಗೊಂದಲ ಉಂಟುಮಾಡುತ್ತಿದೆ.


ಯೋಗೇಶ್ವರ್ ಅಭ್ಯರ್ಥಿಯಾಗಿದ್ದರೆ ಡಿ ಕೆ ಸುರೇಶ್ ಗೆ ಪ್ರಬಲ ಪ್ರತಿಸ್ಪರ್ಧಿ ಆಗಿರುತ್ತಿದ್ದರು, ಈಗ ಅಶ್ವಥ್ ನಾರಾಯಣ ರವರಿಗೆ ಮೋದಿ ಹೆಸರು ಮತ್ತು ಹಿಂದೂ ಪರ ಯುವಕರ ಮತ ಮಾತ್ರ ಸಿಗುವ ಅವಕಾಶವಿದ್ದು ಮೂಲ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮತಗಳನ್ನು ಸೆಳೆಯಲು ವಿಫಲವಾಗುತ್ತಿದೆ. ಬೆಂಗಳೂರಿನ ಉತ್ತರಹಳ್ಳಿ, ರಾಜರಾಜೇಶ್ವರಿ ನಗರ ಮತ್ತು ಆನೇಕಲ್ ಗಳಲ್ಲಿ ಬಿಜೆಪಿ ಹೆಚ್ಚು ಮತಗಳಿಸಿಕೊಳ್ಳಬಹುದೇ ವಿನಹ ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಹೆಚ್ಚು ಮತಗಳಿಕೆ ಮಾಡಿಕೊಳ್ಳುವಲ್ಲಿ ಮುಂದಿದ್ದಾರೆ, ಕುಣಿಗಲ್ ಕ್ಷೇತ್ರ ಎರಡಕ್ಕೂ ಸಮ ಸಮ ಬರಬಹುದು ಎಂದು ಅಲ್ಲಿಯ ದಾಯಾದಿ ನಾಯಕರ ಒಗ್ಗಟ್ಟಿನಿಂದ ಗೋಚರಿಸುತ್ತದೆ.


ಸಿ ಪಿ ಯೋಗೇಶ್ವರ್ ಈ ಬಾರಿ ಚುನಾವಣಾ ಕಣದಿಂದ ದೂರ ಸರಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ನ ನಾಯಕರೇ ಕಾರಣ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ, ಒಂದು ಮೂಲದ ಪ್ರಕಾರ ಸ್ವಾಮೀಜಿ ಯೊಬ್ಬರ ಕಡೆಯಿಂದ ಹೇಳಿಸಿದರೆ ಕಾಂಗ್ರೆಸ್ ಪಕ್ಷದ ವರಿಷ್ಠ ರೇ ಎಂ ಎಲ್ ಸಿ ಮಾಡುವುದಾಗಿ ಭರವಸೆ ನೀಡಿರುವುದರಿಂದ ತಟಸ್ಥವಾಗಿದ್ದಾರೆ ಎಂಬ ಮಾತು ಚಾಲ್ತಿಯಲ್ಲಿದೆ.


ಏನೇ ಆಗಲಿ ಅಭ್ಯರ್ಥಿ ಘೋಷಣೆ ಆಗುವ ಮುನ್ನಾ ಕಾರ್ಯಕರ್ತರಲ್ಲಿದ್ದ ಹುಮ್ಮಸ್ಸು ಈಗ ಇಲ್ಲದಿರುವುದು ಸಹ ಕೆಲ ಮತದಾರರಲ್ಲಿ ಆತಂಕ ಮೂಡಿಸಿದೆ !?


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑