ಯುಗಾದಿ ಹಬ್ಬಕ್ಕೆ ಅಡ್ಡಿಯಾಗದ ಚುನಾವಣೆ.
೨೦೧೯ ಚುನಾವಣಾ ಕಣ ರಂಗೇರಿರುವ ಹೊತ್ತಿನಲ್ಲೆ ಬಂದಿರುವಹಿಂದೂಗಳ ಪವಿತ್ರ ಹಬ್ಬ ಹೊಸ ವರ್ಷ ಯುಗಾಗಾದಿಯುಎಲ್ಲೆಡೆಯೂ ವಿಜೃಂಭಣೆಯಿಂದ ಹಾಗೂ ಅಡೆತಡೆ ಇಲ್ಲದೆ ನಡೆಯಿತು.
ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಪತ್ರಿಕಾಗೋಷ್ಟಿ ಕರೆದು ಮಾತನಾಡಿದ ತಾಲ್ಲೂಕು ಚುನಾವಣಾ ಅಧಿಕಾರಿ ಡಾ ಯತೀಶ ಉಲ್ಲಾಳ ರವರು ಚುನಾವಣಾ ದಿನವೇ ಬರುವ ಅಪ್ರಮೇಯ ಸ್ವಾಮಿ ದೇವರ ಜಾತ್ರೆ ಮತ್ತು ಮುನ್ನಾ ಬರುವ ಯುಗಾದಿ ಹಬ್ಬಕ್ಕೆ ಚುನಾವಣಾ ಆಯೋಗ ತಡೆಯೊಡ್ಡುವುದಿಲ್ಲ, ಆದರೆ ನೀತಿ ಸಂಹಿತೆಗೆ ವಿರುದ್ದವಾಗಿ ನಡೆದುಕೊಂಡರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.
ಒಬ್ಬಟ್ಟು ಮಾಂಸದೂಟ ಹೊರತುಪಡಿಸಿ ಬಹುತೇಕ ಎಲ್ಲಾ ಕಡೆಯೂ ಜೂಜು ಎಗ್ಗಿಲ್ಲದೇ ನಡೆಯಿತು, ನಗರದ ಅನೇಕ ಕಡೆ ಪೆಂಡಾಲ್ ಹಾಕಿ ಜೂಜು ಆಡಿದರೆ ಸಂಬಂಧಿಸಿದ ಕ್ಲಬ್ಗಳಲ್ಲಿ ಬೈಕ್ ಮತ್ತು ಕಾರುಗಳು ನಿಲ್ಲಿಸಲು ಸಹ ಜಾಗವಿರದಷ್ಟು ದೊಡ್ಡ ಮಂದಿ ಜೂಜಾಟದಲ್ಲಿ ಪಾಲ್ಗೊಂಡಿದ್ದರು.
ನಗರವೂ ಸೇರಿದಂತೆ ತಾಲ್ಲೂಕಿನ್ಯಾದಂತ ಇರುವ ಎಲ್ಲಾ ಎಟಿಎಂ ಗಳಲ್ಲೂ ಭಾನುವಾರ ಹನ್ನೆರಡು ಗಂಟೆಗಳ ತನಕ ಜನಗಳು ಕ್ಯೂ ನಿಂತು ಹಣ ಪಡೆದುಕೊಂಡಿದ್ದು ಕಂಡು ಬಂತು, ತರುವಾಯ ಹಣ ಮುಗಿದಿದ್ದರಿಂದ ಎಲ್ಲಾ ಎಟಿಎಂ ಗಳು ಬಾಗಿಲು ಬಂದ್ ಮಾಡಿದ್ದವು.
ಒಟ್ಟಾರೆ ಚುನಾವಣೆ ನೀತಿ ಸಂಹಿತೆ ಐವತ್ತು ಮಂದಿ ಜೂಜುದಾರರೂ ಕೂಡಿ ಹಾಡಿದರು ಸಹ ತಟ್ಟದಿದ್ದು ಮೋಜು ಮಸ್ತಿ ಮಾಡುವವರಿಗೆ ವರದಾನವಾಗಿತ್ತು.
ಗೋ ರಾ ಶ್ರೀನಿವಾಸ...
ಮೊ: 9845856139.
ಪ್ರತಿಕ್ರಿಯೆಗಳು