ಹೊಂಗನೂರು ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾದ ಎಸ್ ಚಿಕ್ಕರಾಜು
ಹೊಂಗನೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆರವಾಗಿದ್ದ ಪದಾಧಿಕಾರಿಗಳ ಆಯ್ಕೆಗೆ ಚುನಾವಣಾಧಿಕಾರಿ ಸಿಡಿಓ ಶ್ರೀಧರ್ ರವರ ನೇತೃತ್ವದಲ್ಲಿ ಇಂದು ಚುನಾವಣೆ ನಡೆಯಿತು.
ಈ ಹಿಂದೆ ಇದ್ದ ಅಧ್ಯಕ್ಷ ರಾದ ಮಂಚೇಗೌಡ ಮತ್ತು ಉಪಾಧ್ಯಕ್ಷೆ ಪಾರ್ವತಮ್ಮ ನವರನ್ನು ಅವಿಶ್ವಾಸ ಮಂಡನೆಯ ಮೂಲಕ ತೆರವುಗೊಳಿಸಲಾಗಿತ್ತು.
ತೆರವಾಗಿದ್ದ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಎಸ್ ಚಿಕ್ಕರಾಜು, ಉಪಾಧ್ಯಕ್ಷರಾಗಿ ಸಿದ್ದಯ್ಯ, ಆಯ್ಕೆಯಾದರೇ, ನಿರ್ದೇಶಕರಾಗಿ ಹೆಚ್ ವಿ ಚಂದ್ರು, ಟಿ ಶ್ರೀನಿವಾಸ, ಎನ್ ವೆಂಕಟೇಶ್, ಸೈಯದ್ ಸಿಬಕ್ ತುಲ್ಲಾ, ಕಾಡಮ್ಮ ನವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿಯಾಗಿದ್ದ ಶ್ರೀಧರ್ ರವರು ಘೋಷಿಸಿದರು.
ಕಾರ್ಯ ನಿರ್ವಹಣಾ ಅಧಿಕಾರಿ ಕುಮಾರ ರಾಜೇ ಅರಸು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು