Tel: 7676775624 | Mail: info@yellowandred.in

Language: EN KAN

    Follow us :


ರಕ್ತಕೊಡುವುದನ್ನೇ ಉದ್ಯೋಗ ಮಾಡಿಕೊಂಡವರಿಂದ ರಕ್ತ ಸಂಗ್ರಹಿಸಬೇಡಿ- ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ

Posted date: 29 Apr, 2019

Powered by:     Yellow and Red

ರಕ್ತಕೊಡುವುದನ್ನೇ ಉದ್ಯೋಗ ಮಾಡಿಕೊಂಡವರಿಂದ ರಕ್ತ ಸಂಗ್ರಹಿಸಬೇಡಿ- ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ

ಇಂದು ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಜೀವಾಮೃತ ಬ್ಲಡ್ ಬ್ಯಾಂಕ್‌ನ್ನು ರಾಮನಗರ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ ರಾಜೇಂದ್ರ ರವರು ಉದ್ಘಾಟಿಸಿದರು. ರಕ್ತನಿಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಡಾ. ಕೆ. ರಾಜೇಂದ್ರ ಅವರು ರಕ್ತ ಕೊಡುವುದನ್ನೇ ಉದ್ಯೋಗ ಮಾಡಿಕೊಂಡಿರುವವರಿಂದ ರಕ್ತ ಸಂಹ್ರಹಿಸ ಬೇಡಿ ಆರೋಗ್ಯವಂತ ಯುವಕರು ಮತ್ತು ಸಂಘಸಂಸ್ಥೆಗಳ ಸದಸ್ಯರಿಂದ ರಕ್ತ ಸಂಗ್ರಹಿಸಿ ಎಂದು ಸಲಹೆ ನೀಡಿದರು.


ಮುಂದುವರಿದು ಮಾತನಾಡಿದ ಅವರು ಆರೋಗ್ಯವಂತ ಸಾರ್ವಜನಿಕರಿಂದ ರಕ್ತವನ್ನು ಪಡೆಯಿರಿ. ತುಂಬಾ ಅವಶ್ಯಕತೆ ಉಳ್ಳವರಿಗೆ ರಕ್ತವನ್ನು ಕೊಡಿ. ಬೆಂಗಳೂರು ಮಂಡ್ಯ ನಡುವೆ ಒಂದು ಸುಸಜ್ಜಿತ ರಕ್ತ ನಿಧಿ ಕೇಂದ್ರ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹವಾದ ಸಂಗತಿಯಾಗಿದೆ ಎಂದರು.


ಮೂರು ವರ್ಷಗಳ ಹಿಂದೆ  ನನಗೆ ಒಂದು ಸಾರಿ ಡೆಂಗ್ಯೂ ಬಂದಾಗ ರಕ್ತಕ್ಕಾಗಿ ಹಾಗೂ ಪ್ಲೇಟ್‌ಲೆಟ್‌ಗಾಗಿ ಪಟ್ಟ ಬವಣೆಯನ್ನು ಸಭೆಯ ಮುಂದೆ ಪ್ರಸ್ತಾಪ ಮಾಡಿ ನಾನು ಐ.ಎ.ಎಸ್ ಅಧಿಕಾರಿಯಾಗಿಯೇ ಅಷ್ಟೊಂದು ಬವಣೆ ಪಟ್ಟಿರ ಬೇಕಾದರೆ ಇನ್ನು ಜನ ಸಾಮ್ಯಾನರ ಗತಿ ಏನು ಎಂದು ಹೇಳಿ ಈ ಬ್ಲಡ್ ಬ್ಯಾಂಕ್‌ಗೆ ಯಾವುದೇ ಕಳಂಕ ತಟ್ಟದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಸ್ತ ಚಿಕಿತ್ಸಕ ಡಾ. ವಿಜಯ ನರಸಿಂಹ, ಹಾಗೂ ಕೆನರಾ ಬ್ಯಾಂಕಿನ ಮೇನೆಜರ್ ಅಮರ್‌ನಾಥ್ ಅವರು ಶುಭ ಕೋರಿದರು.


ಬ್ಲಡ್ ಬ್ಯಾಂಕಿನ ಸ್ಥಾಪಕರಾದ ಚಂದ್ರು ಅವರು ಮಾತನಾಡಿ ನಾನು ೨೦೧೧ರಿಂದಲೂ ಇಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಪ್ರಯತ್ನ ಪಡುತ್ತಲೇ ಇದ್ದೆ. ಆದರೆ ಕಾಲ ಕೂಡಿಬಂದಿರಲಿಲ್ಲ. ಸೂಕ್ತ ಕಾಲದಲ್ಲಿ ಒಂದು ಬಾಟಲ್ ರಕ್ತ ಸಿಗದೆ ಹೆರಿಗೆ ಸಂದರ್ಭದಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ನೋಡಿದ್ದೇನೆ, ಅಷ್ಟೆ ಅಲ್ಲದೆ ಬೇರೆ ಬೇರೆ ಸಂದರ್ಭಗಳಲ್ಲಿ ರಕ್ತ ಸಿಗದೆ ಸಾವು ನೋವುಗಳನ್ನು ಕಂಡಿದ್ದೇನೆ, ಹಾಗಾಗಿ ಈ ಬ್ಲಡ್ ಬ್ಯಾಂಕ್‌ನ್ನು ಮಾಡಲೇ ಬೇಕು ಎಂಬ ಛಲದಿಂದ ಮಾಡಿದ್ದೇನೆ. ಇದರ ಸದ್ಬಳಕೆಯನ್ನು ಜನರು ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.



ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑