Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಶಿಸ್ತಿನ ಪಾಠ ಮಾಡಿದ ಇಓ

Posted date: 20 Jun, 2019

Powered by:     Yellow and Red

ಚನ್ನಪಟ್ಟಣ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಶಿಸ್ತಿನ ಪಾಠ ಮಾಡಿದ ಇಓ

ಸಮಸ್ಯೆಗಳನ್ನು ಹಿಡಿದು ಜಗ್ಗಾಡಿದ ಸದಸ್ಯರು

ಚನ್ನಪಟ್ಟಣ: ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆಯು ಒಂದು ಗಂಟೆ ತಡವಾಗಿ ಆರಂಭಗೊಂಡಿತ್ತು ಈ ಸಭೆಗೆ ಬಹುತೇಕ  ಗ್ರಾಮ ಪಂಚಾಯತಿಗಳ ಮಹಿಳಾ ಅಧ್ಯಕ್ಷರಗಳು ಬಂದಿದ್ದು ವಿಶೇಷ ಎನಿಸಿತ್ತು.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಅವರು ನನ್ನ ಕಚೇರಿಗೆ ಬಂದ ಯಾವುದೇ ಅರ್ಜಿ ೨೪ ಗಂಟೆಗಳಲ್ಲಿ ಇತ್ಯರ್ಥ ಆಗಬೇಕು, ಕಳೆದ ಬಾರಿ ಮುಖ್ಯಮಂತ್ರಿ ಭೇಟಿ ಸಮಯದಲ್ಲಿ ನೂರಾರು ಅರ್ಜಿಗಳು ಮಾತ್ರ ಬಂದಿದ್ದು ಈ ಬಾರಿ ಜನತಾ ದರ್ಶನದಲ್ಲಿ ೨,೪೦೦ ಅರ್ಜಿಗಳು ಬಂದಿವೆ. ಅಂದರೆ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡಿ ದ್ದೀರಿ ಎಂದು ತಿಳಿಯುತ್ತದೆ. ಸರಿಯಾಗಿ ಕೆಲಸ ಮಾಡಿದರೆ ಮಾಡಿ ಇಲ್ಲವಾದರೆ ಬೇರೆಡೆ ಹೋಗಿ, ನನಗೆ ಮಾನಸಿಕವಾಗಿ ಹಿಂಸೆ ಆಗಿದೆ, ಎಂದು  ಗರಂ ಆಗಿ ಹೇಳಿದರು.


ಮುಖ್ಯಮಂತ್ರಿ ಭೇಟಿ ಸಮಯದಲ್ಲಿ ಚರಂಡಿ ಸಮೇತ ಯಾವುದೇ ಸ್ವಚ್ಚತೆ ಇರಲಿಲ್ಲ, ಮುಖ್ಯಮಂತ್ರಿ ಗಳು ಕಿಡಿ ಕಿಡಿಯಾದರು.

ಇ-ಸ್ವತ್ತು ಕಂಪ್ಲೇಟ್ ಗಳು ಹೆಚ್ಚಾಗಿವೆ

ಒಂದೊಂದು ಅರ್ಜಿ ವರ್ಷವಾದರೂ ವಿಲೇವಾರಿ ಆಗಿಲ್ಲ ಯಾಕೆ ? ಹತ್ತು ದಿನಗಳಲ್ಲಿ ಇ ಸ್ವತ್ತು ಮಾಡಬಹುದು, ನೀವು ಅದಕ್ಕೆ ಒಂದು ಡೈರಿ ಇಟ್ಟು ಒಂದು ತಿಂಗಳೊಳಗಾಗಿ ಇ ಸ್ವತ್ತು ಮಾಡಿಕೊಡಿ ಎಂದು ತಾಲ್ಲೂಕು ಪಂಚಾಯತ್ ಅಧ್ಯಕ್ಷ ರಾಜಣ್ಣ ಸೂಚಿಸಿದರು.


ಅಂಧರ ಶಾಲೆ ಬಿಟ್ಟು ಎಲ್ಲಾ ಖಾಸಗಿ ಶಾಲೆಗಳು ಆಯಾಯ ಪಂಚಾಯತಿಗಳಿಗೆ ತೆರಿಗೆ ಕಟ್ಟಬೇಕು, ನೀರಿನ ತೆರಿಗೆ ಕ್ರಮಬದ್ಧವಾಗಿ ಸಂಗ್ರಹಿಸಬೇಕು, ಪಂಚಾ ಯತಿಗೆ ಯಾವ್ಯಾವ ಮೂಲ ಗಳಿಂದ ತೆರಿಗೆ ಸಂಗ್ರಹ ಮಾಡಬಹುದು ಎಂದು ತಿಳಿದುಕೊಂಡು ತೆರಿಗೆ ಸಂಗ್ರಹಿಸಿ ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿ ಆದಾಯ ಹೆಚ್ಚಿಸಿ ಎಂದು ಅವರು ಖಡಕ್ ಆಗಿ ಸೂಚಿಸಿದರು.


*ಸ್ವಚ್ಛತಾ ಕಾರ್ಯಕ್ಕೆ ಕಾರ್ಮಿಕರನ್ನುನೇಮಿಸಿ ಕೊಳ್ಳಲು ಸೂಚನೆ*


ಪ್ರತಿ ಗ್ರಾಮಪಂಚಾಯತಿಯಲ್ಲಿ ಇಬ್ಬರು ಸ್ವಚ್ಚತಾ ಕಾರ್ಮಿಕರನ್ನು ನೇಮಿಸಿಕೊಳ್ಳಿ, ಹದಿನೈದು ಸಾವಿರ ರೂ ಸಂಬಳ ನಿಗದಿ ಮಾಡಿ, ಹದಿನಾಲ್ಕನೇ ಹಣಕಾಸುಯೋಜನೆ ಅಡಿಯಲ್ಲಿ ಅವರಿಗೆ ಸಂಬ ಳ ನೀಡಿ, ಒಂದುಪಂಚಾಯ್ತಿ ಯಲ್ಲಿ ಐದ ರಿಂದ ಆರು ಹಳ್ಳಿಗಳಿ ಇರುತ್ತವೆ, ಪ್ರತಿ ಗ್ರಾಮಕ್ಕೂ ವಾರದಲ್ಲಿ ಒಂದು ದಿನ ಅವರು ಸ್ವಚ್ಚತೆ ಮಾಡಲಿ.

ಇದು ನಮ್ಮ ತಾಲ್ಲೂಕಿ ನಲ್ಲೇ ಪ್ರಥಮವಾಗಲಿ ಎಂದು ಗ್ರಾಮ ಪಂಚಾಯತಿ ಅಧಿಕಾರಿ ಗಳು ಮತ್ತು ಅಧ್ಯಕ್ಷ ರಿಗೆ ರಾಜಣ್ಣ ಸಲಹೆ ನೀಡಿದರು.


ನೀಲಕಂಠನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಭರತ್ ಮನವಿ ಮಾಡಿ, ಪರಿಶಿಷ್ಟ ಜಾತಿಯಲ್ಲಿ ಮರಣ ಹೊಂದಿದ್ದ ವ್ಯಕ್ತಿಗೆ ಶವ ಸಂಸ್ಕಾರಕ್ಜೆ ೫,೦೦೦ ರೂ ಕೊಡಬೇಕೆಂದು ಸರ್ಕಾರದ ಸುತ್ತೋಲೆ ಇದೆ, ಆದರೆ ಇದು ಪಾಲನೆ ಆಗುತ್ತಿಲ್ಲ, ಗಮನಹರಿಸಿ ಎಂದು ಮನವಿ ಮಾಡಿದರು.


ಮಳೂರುಪಟ್ಟಣ ತಾ ಪಂ ಸದಸ್ಯ ಸಿದ್ದರಾಮಯ್ಯ ಮನವಿ ಮಾಡಿ,ಪಿಡಿಓ ಗಳು ವಾರಕ್ಕೊಮ್ಮೆಯಾದರೂ ಗ್ರಾಮಗಳಿಗೆ ಭೇಟಿ ನೀಡಲಿ ಗ್ರಾಮಸಭೆ ಮತ್ತು ಸಾಮಾನ್ಯ ಸಭೆಗಳಲ್ಲಿ ಗ್ರಾಮದ ರಸ್ತೆ ಮತ್ತು ಸ್ವಚ್ಛತೆ ಬಗ್ಗೆಅರಿವುಮೂಡಿಸಿ ಎಂದರು.

ನಗರದ ಕೋಳಿ ಅಂಗಡಿ ಕಸಗಳೆಲ್ಲವೂ ಗ್ರಾಮದ ರಸ್ತೆ ಬದಿಗಳಲ್ಲಿ ಮತ್ತು ಕೆರೆ ಏರಿಗಳ ಮೇಲೆ ಬಂದು ಬೀಳುತ್ತಿದೆ, ನಗರ ಸಭೆಗೆ ಎಚ್ಚರಿಕೆ ನೀಡ ಬೇಕೆಂದು ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಸಭೆಗೆ ಮನವಿ ಮಾಡಿದರು.


ಹೀಗೆ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯು ಈ ಸಾರಿ ಸ್ವಲ್ಪ ಚುರುಕಿನಿಂದ ಸಂವಹನ ಗೊಂಡಿತ್ತು. ಸಂದರ್ಭದಲ್ಲಿ ಇಓ ಪ್ರತಿಕ್ರಿಯಿಸಿ  ಪಿ.ಎಂ. ಐ.ಜಿ.ಡಿ ಯೋಜನೆಯಡಿ ೧೨೧೫ಮನೆಗಳು ಮಂಜೂ ರಾಗಿದ್ದು ಹಂಚಲು ಸಮಸ್ಯೆ ಯಾಗಿದೆ,ಜಾನುವಾರಗಳಿಗೆ  ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಗೆ ಸಂಬಂ ಧಿಸಿದಂತೆ ಉತ್ತರಿಸಲು ಅಧಿಕಾರಿಗಳೇ ಬಂದಿರಲಿಲ್ಲ.


ತಾಲ್ಲೂಕಿನಾದ್ಯಾಂತ ೧೫೪ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ಸಿದ್ದ ವಾಗಿದೆ ಎಂದು ಅವರು ಪ್ರಕಟಿಸಿದರು. ನಂತರ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ನೌಕರರರ ಕೊರತೆ ಇದ್ದು ಆದಷ್ಟು ಬೇಗ ನೇಮಕಾತಿಯ ಮೂಲಕ ಸಮಸ್ಯೆ ಬಗೆ ಹರಿಸಲು ಮುಖ್ಯಮಂತ್ರಿ ಗಳಲ್ಲಿ ಮನವಿ ಮಾಡಲಾಗಿದೆ. ಇದೇ ವೇಳೆ ಇಲಾಖೆಯ ಹಲವಾರು ಕಾಮಗಾರಿಗಳನ್ನು ಅನುಮೋದನೆ ಮಾಡಲಾಯಿತು. ಸಮಯಕ್ಕೆ ಸರಿಯಾಗಿ ಅನುದಾನ ಬಳಸ ಲಾಗದೆ ಹಿಂದಿರುಗಿಸ ಲಾಗಿದೆ ಎಂದು ಇಓ ಅವರು ವಿಷಾದದಿಂದನುಡಿದರು.


ಸಭೆಯಲ್ಲಿ ಉಪಾಧ್ಯಕ್ಷೆ ಸಾಕಮಾದಮ್ಮ, ತಾಲ್ಲೂಕು ಪಂಚಾಯ್ತಿ ಸದಸ್ಯರು,  ಗ್ರಾಮ ಪಂಚಾಯ್ತಿ ಯ ಅಧ್ಯಕ್ಷರು ಹಾಗೂ ಉಪಾ ಧ್ಯ ಕ್ಷರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.



ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑