ನೀಟ್ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆಗೆ ಪ್ರಥಮ ರಾಜ್ಯಕ್ಕೆ ೩೧ ನೇ ಸ್ಥಾನ ಪಡೆದ ಸೇವಂತ್ ಸಾಗರ್
ಮೇ ೦೫ ರಂದು ನಡೆದ ನೀಟ್ ಮತ್ತು ಸಿಇಟಿ (NEET & CET) ಪರೀಕ್ಷೆಯಲ್ಲಿ ಸೇವಂತ್ ಸಾಗರ್ (೧೭) ಮೆಡಿಕಲ್ ನಲ್ಲಿ ರಾಜ್ಯಕ್ಕೆ ೩೧ ನೇ ಹಾಗೂ ರಾಮನಗರಕ್ಕೆ ಪ್ರಥಮ ಸ್ಥಾನ ಗಳಿಸಿದ್ದು ಪೋಷಕರು ಮತ್ತು ಕೇಂಬ್ರಿಡ್ಜ್ ಶಾಲಾ ಆಡಳಿತ ಮಂಡಳಿ ಸೇರಿದಂತೆ ತಾಲ್ಲೂಕಿನ ಗಣ್ಯರು ಅಭಿನಂದಿಸಿದ್ದಾರೆ.
ಸೇವಂತ್ ಸಾಗರ್ ರಾಜ್ಯ ಮಟ್ಟದಲ್ಲಿ ಮೆಡಿಕಲ್ (ನೀಟ್) ನಲ್ಲಿ ೩೧ ನೇ ರ್ಯಾಂಕ್ ಪಡೆದರೆ ಸಿಇಟಿ ನಲ್ಲಿ ಪಶು ವೈದ್ಯಕೀಯ ೬೭, ಬಿ ಎನ್ ವೈ ಎಸ್ ೭೨, ಬಿ ಫಾರ್ಮ ೧೩೫ ಮತ್ತು ಇಂಜಿನಿಯರಿಂಗ್ ನಲ್ಲಿ ೫೨೧ ನೇ ರ್ಯಾಂಕ್ ಪಡೆದಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಸೇವಂತ್ ಸಾಗರ್ ತಾಲ್ಲೂಕಿನ ವೈದ್ಯಾಧಿಕಾರಿಗಳಾಗಿದ್ದ, ಹಾಲಿ ಅಕ್ಕೂರು ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ ಮುತ್ತುರಾಜು ಮತ್ತು ಸೌಂದರ್ಯ ತಜ್ಞೆ ಪದ್ಮಾವತಿ ಯವರ ಪುತ್ರನಾಗಿದ್ದು ಮೆಡಿಕಲ್ ಕ್ಷೇತ್ರ ಆಯ್ಕೆ ಮಾಡಿಕೊಂಡು ಯಶಸ್ವಿ ವೈದ್ಯನಾಗಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು