ಕಲಾವಿದರ ಹಕ್ಕುಗಳನ್ನು ಕಸಿದುಕೊಳ್ಳಬೇಡಿ ಒಕ್ಕೂಟ ಮನವಿ
ಚನ್ನಪಟ್ಟಣ: ಭಾರತವು ಸಾಂಸ್ಕೃತಿಕ ದೇಶವಾಗಿದ್ದು, ಸಾಂಸ್ಕೃತಿಕ ಕಲೆಗಳನ್ನು ಉಳಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕರ್ನಾಟಕದ ಕಲಾವಿದರು ಪರಿಶ್ರಮ ಪಡುತ್ತಿದ್ದಾರೆ, ಸಾಂಸ್ಕೃತಿಕ ರಾಜ್ಯಕ್ಕೆ ಎಂಟು ಜ್ಞಾನ ಪೀಠ ಪ್ರಶಸ್ತಿಗಳು ಬಂದಿರುವುದು ನಮ್ಮ ಸಂಸ್ಕೃತಿಯ ಬಿಂಬವಾಗಿದೆ, ಇಂತಹ ಸಂಸ್ಕೃತಿಗಳನ್ನು ವಿಶ್ವದಲ್ಲೇ ಮೇಲ್ಮಟ್ಟಕ್ಕೆ ಕರೆದೊಯ್ಯುತ್ತಿರುವ ಕಲಾವಿದರಿಗೆ ಶಾಸಕಾಂಗ ಮತ್ತು ಕಾರ್ಯಾಂಗಗಳು ಅನ್ಯಾಯ ಎಸಗುತ್ತಿದ್ದು ಈ ಮೊದಲು ಇದ್ದ ಮಾರ್ಗಸೂಚಿ ಮೂಲಕವೇ ಇಲಾಖೆ ಕಾರ್ಯ ನಿರ್ವಹಿಸಬೇಕು ಎಂದು ತಾಲ್ಲೂಕಿನ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಪದಾಧಿಕಾರಿಗಳು ಇಂದು ತಾಲ್ಲೂಕು ಶಿರಸ್ತೇದಾರ ಮಹದೇವಯ್ಯ ರವರಿಗೆ ಮನವಿ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ ಒಕ್ಕೂಟದ ಪದಾಧಿಕಾರಿಗಳು ಚರ್ಚಿಸಿ ನಂತರ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಘೋಷಣೆ ಗಳನ್ನು ಕೂಗಿ ಪ್ರತಿಭಟಿಸಿದರು.
ರಾಜ್ಯದಲ್ಲಿ ಸಂಸ್ಕೃತಿ ಇಲಾಖೆ ಹುಟ್ಟಿನಿಂದಲೂ ಗ್ರಾಮೀಣ ಕಲಾವಿದರ ಏಳಿಗೆಗೆ ಶ್ರಮಿಸುತ್ತಿತ್ತು, ಇಲಾಖೆ ಹುಟ್ಟಿನಿಂದ ಕಳೆದ ವರ್ಷದ ತನಕ ಬಂದ ಹಲವಾರು ಮಂತ್ರಿಗಳು, ಅಧಿಕಾರಿಗಳು ಬಂದು ಹೋಗಿದ್ದಾರೆ, ಆದರೆ ಇಂದಿನ ಕೆಲವು ಅಧಿಕಾರಿಗಳು ಮತ್ತು ಇಲಾಖೆಯ ಮಂತ್ರಿಗಳು ಕಲಾವಿದರ ಮತ್ತು ಕಲಾ ಸಂಸ್ಥೆಗಳ ಹಕ್ಕುಗಳನ್ನೇ ಕಿತ್ರುಕೊಳ್ಳಲು ಹೊರಟಿರುವುದು ದುರದೃಷ್ಟಕರ ಎಂದು ದೂರಿದರು.
*ಹಿನ್ನೆಲೆ*
ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಡಿ ಕೆ ಶಿವಕುಮಾರ್ ರವರು ಸಂಘ ಸಂಸ್ಥೆಗಳಿಗೆ ಅನುದಾನ ಸ್ಥಗಿತಗೊಳಿಸಿ ಪ್ರತಿ ತಾಲ್ಲೂಕಿನಲ್ಲಿ *ಕರ್ನಾಟಕ ಸಂಸ್ಕೃತಿ* ಹೆಸರಿನಲ್ಲಿ ಕಾರ್ಯಕ್ರಮ ಮಾಡಿ ಸ್ಥಳೀಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದ್ದರು. ಜೊತೆಗೆ ಈ ವಿಷಯಗಳ ಬಗ್ಗೆ ಸಾರ್ವಜನಿಕರು, ಜನಪ್ರತಿನಿಧಿಗಳು ಮತ್ತು ಸಂಘಸಂಸ್ಥೆಗಳಿಂದಲೂ ಸಲಹೆ ನೀಡಲು ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಜಾನಪದ ಕಲಾವಿದರ ಒಕ್ಕೂಟವು ಮನವಿ ಸಲ್ಲಿಸಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು