ಭೀಮನ ಅಮವಾಸ್ಯೆ ಪ್ರಯುಕ್ತ ಸಾರ್ವಜನಿಕರಿಗೆ ಜೈನ್ ಸಂಘದ ವತಿಯಿಂದ ಉಚಿತ ಉಪಹಾರ
ಚನ್ನಪಟ್ಟಣ: ಭೀಮನ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕು *ಜೈನ ಸಂಘದ* ವತಿಯಿಂದ ನಗರದ ಜಯಚಾಮರಾಜೇಂದ್ರ ಒಡೆಯರ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ೬೦೦ ಮಂದಿ ಸಾರ್ವಜನಿಕರಿಗೆ ಉಚಿತವಾಗಿ ಟೋಕನ್ ನೀಡಿ ಉಪಹಾರ ನೀಡುವ ಮೂಲಕ ದೈತ್ಯ ಭೀಮನ ಅಮವಾಸ್ಯೆ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಮೊದಲೇ ಇಂದಿರಾ ಕ್ಯಾಂಟೀನಿನಲ್ಲಿ ೬೦೦ ಟೋಕನ್ ಗಳನ್ನು ಖರೀದಿಸಿದ ಸಂಘದ ಪದಾಧಿಕಾರಿಗಳು ಬೆಳಿಗ್ಗೆ ೦೭ ಗಂಟೆಯಿಂದ ೦೯ ಗಂಟೆಯವರೆಗೂ ಬೆಳಗಿನ ತಿಂಡಿಗೆ ಬರುವ ಎಲ್ಲಾ ಸಾರ್ವಜನಿಕರಿಗೂ ಉಚಿತವಾಗಿ ಟೋಕನ್ ನೀಡಿ ತಿಂಡಿ ಕೊಡಿಸಲು ನೆರವಾದರು.
ಇದೇ ವೇಳೆ ಮಾತನಾಡಿದ ಕಸ್ತೂರ್ ಚಂದ್ (ಕೆಕೆ) ರವರು ಇನ್ನು ಮುಂದೆಯೂ ಸಹ ಹಬ್ಬ ಹರಿದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಜೈನ್ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದರು.
ಕಮಲ್ ಸಿಂಗ್, ನೇಮಿಚಂದ್, ವಿಜಯಕುಮಾರ್ ಗುಲೇಚಾ (ರಾಜು) ಅಶೋಕ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು