Tel: 7676775624 | Mail: info@yellowandred.in

Language: EN KAN

    Follow us :


ಮೂಲ ಆಶಯಗಳನ್ನು ಬದಿಗೊತ್ತಿ ಬಾಡಿಗೆಗೆ ಸೀಮಿತವಾದ ಶತಮಾನೋತ್ಸವ ಭವನ

Posted date: 17 May, 2019

Powered by:     Yellow and Red

ಮೂಲ ಆಶಯಗಳನ್ನು ಬದಿಗೊತ್ತಿ ಬಾಡಿಗೆಗೆ ಸೀಮಿತವಾದ ಶತಮಾನೋತ್ಸವ ಭವನ

ಚನ್ನಪಟ್ಟಣ: ಬೆಂಗಳೂರು ಮೈಸೂರು ನಡುವಿನ ಚನ್ನಪಟ್ಟಣದಲ್ಲಿ ಶತಮಾನದ ಹಿಂದೆಯೇ ಸರ್ಕಾರಿ ಬಾಲಕರ ಪ್ರೌಢಶಾಲೆ ಸ್ಥಾಪನೆಯಾಗಿದ್ದು, ಇಂದಿನ ಹಲವಾರು ಗಣ್ಯ ವ್ಯಕ್ತಿಗಳು ಆ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ, ಕ್ರಿ ಶ ೧೮೯೯ ರಲ್ಲಿ ಪ್ರಾರಂಭವಾದ ಈ ಶಾಲೆಯ ಶತಮಾನೋತ್ಸವದ ನೆನಪಿಗಾಗಿ ತಡವಾಗಿಯಾದರೂ ಎಚ್ಚೆತ್ತುಕೊಂಡ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳ ಸಂಘ (ರಿ) ಕಟ್ಟಿಕೊಂಡು ಅದೇ ಆವರಣದಲ್ಲಿ ಹಲವು ಮಹತ್ತರ ಆಶಯಗಳನ್ನು ಇಟ್ಟುಕೊಂಡು ಶತಮಾನೋತ್ಸವ ಭವನವನ್ನು ೨೦೧೫ ನಿರ್ಮಿಸಿದ್ದು ತಾಲ್ಲೂಕಿಗೆ ಹಿರಿಮೆಯ ಸಂಗತಿ ಎನ್ನಲಡ್ಡಿಯಿಲ್ಲ.


ಹಿರಿಯ ವಿದ್ಯಾರ್ಥಿಗಳು ಸಂಘ ಸ್ಥಾಪನೆಯ ಸಂದರ್ಭದಲ್ಲಿ ಬೈಲಾ ಬರೆಸಿದ್ದು, ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಅಂತಹ ಮಕ್ಕಳಿಗೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ನೇರ ತಲುಪಿಸುವ ಪ್ರಯತ್ನ, ಕೆಎಎಸ್, ಐಎಎಸ್‌ ಮತ್ತು ಐಪಿಎಸ್ ನಂತಹ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮಕ್ಕಳಿಗೆ ಉಚಿತ ವಾಗಿ ತರಗತಿ ನಡೆಸುವುದು, ಶಾಲೆಗೆ ಕೊಡುಗೆ ನೀಡಿದ ಶಿಕ್ಷಕರಿಗೆ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಗೌರಾವಾರ್ಪಣೆ, ಇದೇ ಶಾಲೆಯಲ್ಲಿ ಓದಿ ಹೊರ ರಾಜ್ಯ, ಹೊರ ದೇಶಗಳಲ್ಲಿ ಬದುಕು ಕಟ್ಟಿಕೊಂಡಿರುವವರನ್ನು ಹುಡುಕಿ ಒಂದೆಡೆ ಸೇರಿಸುವ ಪ್ರಯತ್ನ ಸೇರಿದಂತೆ ಅನೇಕ ಆಶಯಗಳನ್ನು ಮುಂದಿಟ್ಟುಕೊಂಡು ಸಂಘ ಮತ್ತು ಭವನ ಸ್ಥಾಪನೆ ಆಗಿದ್ದು ಯಾವುದೇ ರೀತಿಯ ಚಟುವಟಿಕೆಗಳು ನಡೆಯದೇ ಕೇವಲ ಬಾಡಿಗೆ ಕಟ್ಟಡವಾಗಿ ಮಾರ್ಪಾಡಾಗಿರುವುದು ದುರಂತವೇ ಸರಿ.


ಕ್ರಿ ಶ ೧೮೯೯ ರಲ್ಲಿ ಪ್ರಾರಂಭವಾದ ಶಾಲೆಗೆ ೧೯೯೯ ಕ್ಕೆ ನೂರು ವರ್ಷ ತುಂಬಿದರೇ, ೨೦೦೮ ರಲ್ಲಿ ಸಂಘ ಉದ್ಘಾಟನೆಗೊಂಡಿತು, ೨೦೧೧ ರಲ್ಲಿ ಶತಮಾನೋತ್ಸವ ಭವನ ಕಟ್ಟಲು ಅಡಿಗಲ್ಲು ಹಾಕಿ ಕೆಲಸ ಪ್ರಾರಂಭಿಸಿದ ಪದಾಧಿಕಾರಿಗಳು ೨೦೧೫ ಕ್ಕೆ ಪೂರ್ಣಗೊಳಿಸಿ ೨೩/೧೧/೨೦೧೫ ರಂದು ಅಂದಿನ ಅನ್ನದಾನೇಶ್ವರನಾಥ ಸ್ವಾಮೀಜಿ, ಎಸ್ ಎಂ ಕೃಷ್ಣ, ಸಿ ಪಿ ಯೋಗೇಶ್ವರ್, ಸಂಘದ ಪದಾಧಿಕಾರಿಗಳು ಹಾಗೂ ಅಧಿಕಾರಸ್ತರು ಮತ್ತು ಮಾಜಿ ಗಳಾದಿಯಾಗಿ ಎಲ್ಲರೂ ಸೇರಿ ೧೬ ವರ್ಷಗಳ ತಡವಾಗಿ ಆದರೂ ಶತಮಾನೋತ್ಸವ ಭವನ ತಲೆ ಎತ್ತುವಂತಾಗಿದ್ದು ಶ್ರಮಿಸಿದ ಎಲ್ಲರಿಗೂ ತಾಲ್ಲೂಕಿನ ಜನತೆ ಋಣಿಗಳಾಗಿದ್ದಾರೆ.


೨೦೦೮ ರಿಂದ ೨೦೧೨ ರ ಅವಧಿಯಲ್ಲಿ ಸಿ ಪಿ ಯೋಗೇಶ್ವರ್ ಮತ್ತು ರವಿಕುಮಾರಗೌಡ ಅಧ್ಯಕ್ಷ ಮತ್ತು ಕಾರ್ಯದರ್ಶಿ ಮತ್ತಿತರರು ಪದಾಧಿಕಾರಿಗಳಾಗಿದ್ದರೆ ೨೦೧೨ ರಿಂದ ೨೦೧೫ ರ ಅವಧಿಯಲ್ಲಿ ಯೋಗೇಶ್ವರ್ ಜೊತೆಗೆ ಬಹುತೇಕ ಎಲ್ಲಾ ಪದಾಧಿಕಾರಿಗಳು ಬದಲಾವಣೆಗೊಂಡು ಸಂಘ ಕುಂಠಿತವಾಗಲು ಕಾರಣವಾಗಿರಬಹುದು.


ಒಂದೂವರೆ ಕೋಟಿ ರೂಪಾಯಿಗಳನ್ನು ಸರ್ಕಾರದ ಹಲವಾರು ಮಂತ್ರಿಗಳು ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ, ನಗರಸಭೆ ಸೇರಿದಂತೆ ಕೆಲವು ಇಲಾಖೆಗಳ ಮೂಲಕ ಸಂಗ್ರಹವಾದರೆ ಹದಿಮೂರುವರೆ ಲಕ್ಷ ರೂಪಾಯಿಗಳು ದಾನಿಗಳಿಂದ ಸಂಗ್ರಹವಾಗಿ ಕಟ್ಟಡ ನಿರ್ಮಾಣಗೊಂಡಿದೆ.


ಶತಮಾನೋತ್ಸವ ಭವನದಲ್ಲಿ ಇನ್ನೂ ಅನೇಕ ಕೆಲಸಗಳು ನಿಧಾನವಾಗಿ ನಡೆಯುತ್ತಿವೆ, ಮುಂಬಾಗಿಲು ಸೇರಿದಂತೆ ಎಲ್ಲಾ ಬಾಗಿಲುಗಳು ಪ್ಲೇವುಡ್ ಶೀಟ್ ಗಳಾಗಿದ್ದು ಬಿಸಿಲು ಮತ್ತು ಮಳೆಗೆ ಹಾಳಾಗುತ್ತಿವೆ, ಎ ಸಿ ಕೆಲಸ ಸಂಪೂರ್ಣವಾಗಿ ಮುಗಿದಿಲ್ಲ, ಕೆಲವು ಕಾರ್ಯಕ್ರಮಗಳು ಐದಾರು ಗಂಟೆಗಳ ಕಾಲ ನಡೆಯುವುದರಿಂದ ಮಧ್ಯ ಭಾಗದಲ್ಲಿ ಕಾಫಿ ತಿಂಡಿ ವ್ಯವಸ್ಥೆ ಇರುತ್ತದೆ, ಆದರೆ ಕುಳಿತು ತಿನ್ನಲು ಯೋಗ್ಯವಾದ ವ್ಯವಸ್ಥೆ ಇಲ್ಲ, ಭವನದ ಎಡಭಾಗದಲ್ಲಿ ನಿಂತು ತಿನ್ನಲು ಸ್ವಲ್ಪ ಜಾಗವಿದ್ದು ಮಳೆ ಬಂದರೆ ಅದೂ ಆಗದು, ಕಕ್ಕಸು ಮನೆಗೆ ಹೋಗಲು ಮಳೆಗಾಲದಲ್ಲಿ ಆಗುವುದೇ ಇಲ್ಲ, ಯಾಕೆಂದರೆ ಅದು ಭವನದ ಹಿಂದೆ ಇರುವುದರಿಂದ ಉದ್ದಕ್ಕೂ ಮೇಲ್ಛಾವಣಿಯ ಅವಶ್ಯಕತೆ ಇದೆ, ಕಸ ಹಾಕಲು ಸೂಕ್ತವಾದ ತೊಟ್ಟಿ ಇಲ್ಲದೆ ಎಲ್ಲೆಂದರಲ್ಲಿ ಹರಡಿದೆ, ಸೌಂಡ್ ಸಿಸ್ಟಂ ಇನ್ನೂ ಆಧುನೀಕರಣಗೊಳ್ಳಬೇಕಾಗಿದೆ, ವೇದಿಕೆಯಲ್ಲಿ ಕುಳಿತುಕೊಳ್ಳುವ ಗಣ್ಯರಿಗಾಗಿ ಸೂಕ್ತ ಕುರ್ಚಿಗಳೂ ಇಲ್ಲದಿರುವುದು ಶೋಚನೀಯ.


(ಶತಮಾನೋತ್ಸವ ಭವನಕ್ಕೆ ಯಾವುದೇ ರೀತಿಯ ಹಣ ಬರುತ್ತಿಲ್ಲ, ಸದ್ಯ ಎಸಿ ನಿರ್ಮಾಣ ಹಂತದಲ್ಲಿದೆ, ಅದು ಸಂಪೂರ್ಣವಾಗಲು ಹೆಚ್ಚು ಹಣ ಬೇಕಾಗಿರುವುದರಿಂದ ದಾನಿಗಳ ಮೂಲಕ ಪಡೆದು ಮುಂದಿನ ಕೆಲಸ ಮಾಡುತ್ತೇವೆ, ಮುಂದಿನ ತಿಂಗಳಿಂದ ಚನ್ನಪಟ್ಟಣದಲ್ಲೇ ಇದ್ದು ಸಮಿತಿಯ ಎಲ್ಲರನ್ನೂ ಸೇರಿಸಿಕೊಂಡು ಕೆಲಸ ಮಾಡುತ್ತೇನೆ.


ಸಿ ಪಿ ಯೋಗೇಶ್ವರ್ ಮಾಜಿ ಶಾಸಕರು


(೨೦೦೮ ರಿಂದ ೨೦೧೨ ರ ತನಕ ಅಂದರೆ ಸದಾನಂದಗೌಡ ಮತ್ತು ರಾಮಚಂದ್ರೇಗೌಡರ ಅನುದಾನ ಬರುವ ತನಕ ಮಾತ್ರ ನನ್ನನ್ನು ಕಾರ್ಯಾಧ್ಯಕ್ಷರನ್ನಾಗಿ ದುಡಿಸಿಕೊಂಡು ರಾಜಕೀಯ ಚಿತಾವಣೆಯಿಂದ ನನ್ನನ್ನು ತೆಗೆದು ಹಾಕಲಾಯಿತು, ಒಟ್ಟಾರೆ ಸಕ್ರಿಯ ಸಮಿತಿ ಮಾಡಿ, ಬಾಡಿಗೆಯನ್ನು ಹೆಚ್ಚು ಮಾಡಿ ರಾಜಕೀಯ ಹಿತಾಸಕ್ತಿ ಬದಿಗೊತ್ತಿ ಕೆಲಸ ಮಾಡಿದರೆ ಬೈಲಾ ದಲ್ಲಿ ಇರುವ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಬಹುದು.


ರವಿಕುಮಾರಗೌಡ ಮಾಜಿ ಕಾರ್ಯಾಧ್ಯಕ್ಷರು


ಹಳೆಯ ವಿದ್ಯಾರ್ಥಿಗಳ ಸಂಘವು ಈಗ ಅಸ್ತಿತ್ವದಲ್ಲಿಲ್ಲ ಎಂದೇ ಭಾವಿಸಬೇಕಾಗಿದೆ, ಅದು ನವೀಕೃತ ಗೊಂಡಿಲ್ಲ, ಎರಡು ವರ್ಷಗಳ ಹಿಂದೆ ಕ್ರೋಢೀಕರಿಸಿದ ನಾಲ್ಕು ಲಕ್ಷ ಹಣವನ್ನು ಎಸಿ ಅಳವಡಿಸಲು ಕೊಟ್ಟಿದೆ, ಹಣ ಇಲ್ಲದ್ದರಿಂದ ಕೆಲಸ ನಿಂತುಹೋಗಿದೆ, ನಿರ್ವಹಣೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯಿಂದಲೇ ನಿರ್ವಹಿಸಲಾಗುತ್ತಿದೆ, ಸಂಘವು ಸಕ್ರಿಯವಾದರೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ.


ಸಿದ್ದರಾಜೇಗೌಡ ಪ್ರಾಂಶುಪಾಲರು ಬಾ ಪ ಪೂ ಕಾಲೇಜು


(ಹಳೆಯ ವಿದ್ಯಾರ್ಥಿಗಳ ಸಂಘವನ್ನು ಪುನರುಜ್ಜೀವನಗೊಳಿಸಿ, ಕಾಲೇಜಿನ ಪ್ರಾಂಶುಪಾಲರು, ಸಕ್ರಿಯ ಹಳೆಯ ವಿದ್ಯಾರ್ಥಿಗಳು, ಇನ್ನಿತರರನ್ಮು ಸೇರಿಸಿಕೊಂಡು ನಿರ್ವಹಣಾ ಸಮಿತಿ ಮಾಡಿ ಮೂಲಭೂತ ಸೌಕರ್ಯಗಳನ್ನು ನೀಡುವ ಮೂಲಕ ಬೈಲಾ ದಲ್ಲಿ ಉಲ್ಲೇಖಿಸಿರುವ ಎಲ್ಲಾ ಔಚಿತ್ಯ ಪೂರ್ಣ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗುತ್ತದೆ.


ಶಿವರಾಮೇಗೌಡ ನಾಗವಾರ ನಿವೃತ್ತ ಪ್ರಾಂಶುಪಾಲರು ಮತ್ತು ಶತಮಾನದ ಸಿರಿ ಸ್ಮರಣ ಸಂಚಿಕೆ ಯ ಪ್ರಧಾನ ಸಂಪಾದಕರು


(ಸಂಘ ಸಕ್ರಿಯವಾಗಿಲ್ಲ, ಮೊದಲು ಎಲ್ಲರನ್ನೂ ಒಗ್ಗೂಡಿಸಿ ಸಭೆ ನಡೆಸಬೇಕು, ಮೂಲ ಉದ್ದೇಶಗಳನ್ನು ಅವಲೋಕಿಸಿ ಕಾರ್ಯರೂಪಕ್ಕೆ ತರಬೇಕು, ಈ ಬದ್ದತೆ ಬಹುತೇಕ ಯಾರಲ್ಲೂ ಇಲ್ಲದಿರುವುದರಿಂದ ಮೂಲ ಆಶಯಗಳು ಹಾಗೆಯೇ ಉಳಿದು ಬಿಡುವ ಸಾಧ್ಯತೆ ಇದೆ.


ಮಾದಯ್ಯ, ಮಾಜಿ ಕಾರ್ಯಾಧ್ಯಕ್ಷರು


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑