Tel: 7676775624 | Mail: info@yellowandred.in

Language: EN KAN

    Follow us :


ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ

Posted date: 13 Feb, 2020

Powered by:     Yellow and Red

ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ

ಚನ್ನಪಟ್ಟಣ:ಫೆ/೧೩/೨೦/ಗುರುವಾರ.


ರೈತರ ರಕ್ಷಣೆಯನ್ನು ಕಾಯುವ ಬದಲು ಅವರ ಭಕ್ಷಣೆಗಾಗಿಯೇ ನಿಂತಿರುವ ಬೀಜಕಾಯಿದೆ, ಗುತ್ತಿಗೆ ಕೃಷಿ ಹೆಸರಿನಲ್ಲಿ ರೈತರ ಒಕ್ಕಲೆಬ್ಬಿಸುವ ಹುನ್ನಾರ, ರಾಮನಗರ ಜಿಲ್ಲೆ ನುಂಗಿ ನೀರು ಕುಡಿದು ತನ್ನ ಬೇಳೆ ಬೇಯಿಸಿಕೊಳ್ಳಲು ನಿಂತಿರುವ ನವಬೆಂಗಳೂರು ಎಂಬ ರಾಕ್ಷರರು, ಮೂಲನಿವಾಸಿಗಳಿಗೆ ಆತಂಕ ತಂದಿಟ್ಟಿರುವ ಸಿಎಎ/ಎನ್ಆರ್ಸಿ, ಎನ್ನಾರ್ಪಿ ಎಂಬ ಭೂತಗಳಂತಹ ಅನೇಕ ಸಮಸ್ಯೆಗಳು ಗುರುವಾರ ನಡೆದ  ರೈತಸಂಘದ ಜನ ಜಾಗೃತಿ ಸಮಾವೇಶದಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದ ವಿಚಾರಗಳು.


ಸಮಾವೇಶದ ಅಂಗವಾಗಿ ಪ್ರಚಲಿತವಾಗಿ ಚಾಲ್ತಿಯಲ್ಲಿರುವ ನಾಲ್ಕು ಕಾಯಿದೆಗಳ ಬಗ್ಗೆ ರಾಜ್ಯದ ಸಂಪನ್ಮೂಲ ವ್ಯಕ್ತಿಗಳು ವಿಚಾರ ಮಂಡನೆ ಮಾಡಿದರು. ಬಳಿಕ ರೈತಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಕೆಲ ಪ್ರಮುಖ ನಿರ್ಣಯಗಳನ್ನು ಇದೇ ವೇಳೆ ತೆಗೆದು ಕೊಳ್ಳಲಾಯಿತು.


*ರೈತರ ಬದುಕು ಮತ್ತು ಬೀಜದ ಹಕ್ಕುಗಳನ್ನು ಕಸಿದುಕೊಳ್ಳುವ ಕಾಯಿದೆ:*


ಸಮಾವೇಶದಲ್ಲಿ ವಿಚಾರ ಮಂಡನೆ ಮಾಡಿದ ಸಹಜ ಸಾಗುವಳಿ ಪತ್ರಿಕೆಯ ಸಂಪಾದಕಿ ಸಂಸ್ಥೆಯ ವಿ.  ಗಾಯತ್ರಿ, ಕೇಂದ್ರ ಸರ್ಕಾರ ರೂಪಿಸಿರುವ ಬೀಜಕಾಯಿದೆ -ಕಾಯಿದೆ ಬಗ್ಗೆ ಮಾತನಾಡಿ, ಹಲವಾರು ಗೊಂದಲಗಳಿಂದ ಕೂಡಿರುವ ಈ ಕಾಯಿದೆ ಯಲ್ಲಿ ಸರ್ಕಾರದ ಬೀಜನಿಗಮ ಮತ್ತು ರೈತರ ಬೀಜ ಉತ್ಪಾದಿಸುವ ಹಕ್ಕನ್ನು ಕಸಿದು ಬೀಜಕಂಪನಿಗಳಿಗೆ ನೀಡುವ ಹುನ್ನಾರ ನಡೆದಿದೆ. ಕಾಯಿದೆಯಲ್ಲಿ ಕೆಲ ಅಂಶಗಳು ರೈತರಿಗೆ ಪರವಾಗಿರುವಂತೆ ಮೇಲ್ನೋಟಕ್ಕೆ ಕಾಣುತ್ತವೆಯಾದರೂ ಆಳಕ್ಕಿಳಿದು ಚಿಂತನೆ ನಡೆಸಿರುವ ರೈತರಿಗೆ ಇದರಿಂದ ಯಾವುದೇ ಲಾಭವಿಲ್ಲ ಇದನ್ನು ನೀವು ಅಂದಿನ ಬೀಜ-ರಾಜ ಹಾಗೂ ಇಂದಿನ ಖಾಸಗಿ ಕಂಪೆನಿಗಳ ಬೀಜಗಳ ವ್ಯತ್ಯಾಸಗಳಲ್ಲಿ ಕಂಡುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದರು.


ಈಗಾಗಲೇ ಹೈಬ್ರಿಡ್ ಬೀಜಗಳು ರೈತರನ್ನು ದಿಕ್ಕು ತಪ್ಪಿಸಿವೆ. ರೈತರ ಬಳಿಯಿದ್ದ ಬೀಜಗಳ ಸಂಗ್ರಹವನ್ನು ಕೊಂಡು, ತಮ್ಮದೇ ಕಳಪೆ ಬೀಜ ಕೊಟ್ಟು ಹಾಳುಮಾಡುತ್ತಿವೆ. ಹೊಸಕಾಯಿದೆ ಪ್ರಕಾರ ರೈತರ ಬೀಜದ ಹಕ್ಕು ಮತ್ತು ಬೀಜ ನಿಗಮಗಳನ್ನು ಬಲಿಷ್ಟ ಮಾಡುತ್ತದೆ ಎಂದು ನಂಬಲಾಗಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿವೆ. ಇಂತಹ ಅಪಾಯ ದಿಂದ ರೈತರನ್ನು ಆಳುವ ಸರ್ಕಾರಗಳು ಕಾಪಾಡಬೇಕಿದ್ದು, ಯಾವುದೇ ಕಾರಣಕ್ಕೂ ಬೀಜಕಾಯಿದೆ ಜಾರಿಗೆ ಬರದಂತೆ ರೈತಸಂಘವೂ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.


*ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ:*


ಸಮಾವೇಶದಲ್ಲಿ ವಿಚಾರ ಮಂಡಿಸಿದ ಡಾ.ಎಚ್.ವಾಸು ರವರು ಕೇಂದ್ರ ಸರ್ಕಾರ ೨೦೧೬ ರಲ್ಲಿ ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತರಲು ಮುಂದಾಗಿತ್ತು. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೀಗ ಭೂಮಿ ಗುತ್ತಿಗೆ ಕಾಯಿದೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಕಾಯಿದೆ ರೈತರ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿಗಳ ತೆಕ್ಕೆಗೆ ನೀಡಲು ನಡೆಸುತ್ತಿರುವ ಹುನ್ನಾರವಾಗಿದ್ದು, ಕಂಪನಿಗಳು, ಕೆಲ ಬಂಡವಾಳಸ್ಥರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಯಿದೆಯಲ್ಲಿ ಕೆಲ ಅಂಶಗಳನ್ನು ಸೇರಿಸಲಾಗಿದೆ. ಇದನ್ನು ರೈತ ಮುಖಂಡರು ಮತ್ತು ಸಂಘಸಂಸ್ಥೆಗಳ ಮುಖ್ಯಸ್ಥರು ಕೂಲಂಕುಷವಾಗಿ ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳಬೇಕು, ಇಲ್ಲವಾದರೆ ರೈತರು ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.


ರಾಜ್ಯದಲ್ಲಿ ಸರಾಸರಿ ಭೂಮಿ ಪ್ರತಿಯೊಬ್ಬ ವ್ಯಕ್ತಿಗೆ ೧೯ ಗುಂಟೆ ಇದೆ. ರೈತರಿಂದ ಬೇಸಾಯ ಮಾಡಲು ಸಾಧ್ಯವಿಲ್ಲ, ಖಾಸಗಿ ಕಂಪನಿಗಳಿಂದ ಬೇಸಾಯ ಮಾಡಿಸುತ್ತೇವೆ, ಅವರಿಂದ ಹೆಚ್ಚು ಲಾಭ ಕೊಡಿಸುತ್ತೇವೆ ಎಂದು ಭ್ರಮೆ ಸೃಷ್ಟಿಸಿ ರೈತರ ಭೂಮಿಯನ್ನು ವಾಮಮಾರ್ಗದಲ್ಲಿ ಅಂಬಾನಿ, ಅದಾನಿಗಳ ಕೈಗೆ ನೀಡುವ ಹುನ್ನಾರ ಈ ಕಾಯಿದೆಯಲ್ಲಿ ಅಡಕವಾಗಿದೆ. ರೈತರಿಗೆ ಯಾವುದೇ ರಕ್ಷಣೆ ನೀಡದೆ ಅವರ ಜಮೀನಿನ್ನು ಹಿಂಬಾಗಿಲಿನಿಂದ ಕಬಳಿಸುವ ಈ ಕಾಯಿದೆ ಭವಿಷ್ಯದಲ್ಲಿ ಕೃಷಿ ಕ್ಷೇತ್ರಕ್ಕೆ ಅಪಾಯ ತಂದೊಡ್ಡಲಿದೆ ಎಂದು ಎಚ್ಚರಿಸಿದರು.


*ನವಬೆಂಗಳೂರು ಎಂಬ ರಕ್ಕಸ ನಮಗೆ ಬೇಡ:*


ಚನ್ನಪಟ್ಟಣ ಜಿಲ್ಲೆಯಾಗಬೇಕು ಎಂಬ ಕನಸು ಕಂಡಿದ್ದ ಇಂದಿನ ಜಿಲ್ಲೆಯ ಜನತೆಗೆ ರಾಮನಗರ ಜಿಲ್ಲೆ ನಿರ್ಮಾಣವಾಗಿದ್ದು, ಈ ಭಾಗದ ಜನತೆಗೆ ಆಡಳಿತ ಯಂತ್ರ ಹತ್ತಿರವಾಗಲಿ ಎಂಬ ಉದ್ದೇಶದಿಂದ. ಆದರೆ ಜಿಲ್ಲೆಗೆ ನವಬೆಂಗಳೂರು ಎಂದು ನಾಮಕರಣ ಮಾಡುವ ಹುನ್ನಾರವನ್ನು ಕೆಲ ರಿಯಲ್‍ ಎಸ್ಟೇಟ್ ರಾಜಕಾರಣಿಗಳು ಮುಂದು ಮಾಡಿದ್ದು, ಇದರಿಂದಾಗಿ ಜಿಲ್ಲೆಯ ಸಂಸ್ಕೃತಿ ಮತ್ತು ಕೃಷಿಕರಿಗೆ ಅಪಾಯ ಎದುರಾಗಲಿದೆ ಎಂದು ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ಎಚ್ಚರಿಸಿದರು.

ಬೃಹತ್ ಬೆಂಗಳೂರಿನ ಎಲ್ಲಾ ಕಸ ಮತ್ತು ರಾಸಾಯನಿಕಗಳನ್ನು ಇಲ್ಲಿ ತಂದು ಸುರಿಯಲು ಹಾಗೂ ಬಡ ರೈತರ ಜಮೀನನ್ನು ಕವಡೆ ಕಾಸಿಗೆ ಕೊಂಡು ಆಗರ್ಭ ಶ್ರೀಮಂತರಾಗಲು ರಾಜಕಾರಣಿಗಳು ಅವಣಿಸುತ್ತಿದ್ದಾರೆ. ಇದಕ್ಕೆ ರೈತರು ಅವಕಾಶ ನೀಡಬಾರದು ಎಂದು ರೈತರಿಗೆ ಕರೆ ನೀಡಿದರು.


ಸಮಾವೇಶದಲ್ಲಿ ನವಬೆಂಗಳೂರು ಬಗ್ಗೆ ವಿಚಾರ ಮಂಡನೆ ಮಾಡಿದ ಅವರು, ಹೆಸರು ಬದಲಾವಣೆಯಿಂದ ಅಭಿವೃದ್ಧಿಯಾಗುತ್ತದೆ ಎಂಬುದು ಕೇವಲ ಭ್ರಮೆ. ನವಬೆಂಗಳೂರಿನ ಹೆಸರಿನಲ್ಲಿ ನಗರದ ಅಪಸವ್ಯಗಳನ್ನು ಈ ಜಿಲ್ಲೆಗೆ ಹೇರುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಯಾವುದೇ ಅವಕಾಶ ನೀಡಬಾರದು ಎಂದರು.


ಸಿಎಎ, ಎನ್ನಾರ್ಸಿ ಬಗ್ಗೆ ಡಾ ಹೆಚ್ ವಾಸು ಮಾತನಾಡಿ ದೇಶ ಮುನ್ನಡೆಸಬೇಕಾದ ಪ್ರಧಾನಿ ಮತ್ತು ತಂಡ ಬೇಡದ ವಿಷಯಗಳನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅದರಲ್ಲಿ ಸಿಎಎ ಯಂತಹ ಕಾಯಿದೆ ಒಂದಾಗಿದ್ದು ಮೂಲ ನಿವಾಸಿಗಳಿಗೆ ಆತಂಕ ತಂದೊಡ್ಡಿದ್ದಾರೆ ಎಂದರು.


ಚರ್ಚಾ ಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ, ಎಂ ರಾಮು, ಎಂ ಮಲ್ಲಯ್ಯ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑