ರೀಲರ್ ಗಳ ವಿರುದ್ಧ ಹೂಂಕರಿಸಿದ ಪೋಲೀಸ್ ಅಧಿಕಾರಿ ಓಂಪ್ರಕಾಶ್
ಚನ್ನಪಟ್ಟಣ:ಏ/೦೭/೨೦/ಮಂಗಳವಾರ. ನಿಮ್ಮ ಅಭಿಪ್ರಾಯ ಏನಿದ್ದರೂ ಹರಾಜು ಆದ ನಂತರ ಮಾಡಿ, ನೀವು ಬರೋವರೆಗೂ ಹರಾಜು ಆಗಲ್ಲ ಅಂದರೆ ಏನರ್ಥ, ರೈತರ ಕಷ್ಟ ನಿನಗೇನು ಗೊತ್ತು, ನಿಮ್ಮ ಆರ್ಭಟ, ನಿನ್ನ ನಾಯಕತ್ವ, ಮನವಿ ಏನಿದ್ದರೂ ಸಂಬಂಧಿಸಿದ ಅಧಿಕಾರಿ ಮತ್ತು ಇಲಾಖೆಯ ಬಳಿ ಮಾಡಿಕೊಳ್ಳಿ. ಕಷ್ಟ ಕಾಲದಲ್ಲಿ ರೈತರ ಬಳಿ ಖರೀದಿಸಿ ಸಹಾಯ ಮಾಡೋದು ಕಲಿಯಿರಿ. ನಿನ್ನ ನಾಯಕತ್ವವನ್ನು ರೈತರಿಗೆ ಸಹಾಯ ಮಾಡುವ ಮೂಲಕ ಸಾಬೀತು ಪಡಿಸು. ಇಲ್ಲವಾದರೆ ಒಳಗಿರುವ ಲಾಠಿ ಹೊರಗೆ ಬರುತ್ತವೆ ಎಂದು ರೇಷ್ಮೆ ರೀಲರ್ ಅಧ್ಯಕ್ಷ ಜಬಿವುಲ್ಲಾ ಖಾನ್ ಘೋರಿ ಗೆ ಖಡಕ್ ಎಚ್ಚರಿಕೆ ಯನ್ನು ಪೋಲೀಸ್ ಉಪ ಅಧೀಕ್ಷಕ ಓಂಪ್ರಕಾಶ್ ನೀಡುವ ಮೂಲಕ ಎಲ್ಲಾ ರೀಲರ್ ಗಳಿಗೆ ಬಿಸಿ ಮುಟ್ಟಿಸಿದರು.
ನಿನ್ನೆ ಚನ್ನಪಟ್ಟಣಕ್ಕೆ ಬಂದಿದ್ದ ಶಾಸಕ ಕುಮಾರಸ್ವಾಮಿ ಯವರಿಗೆ ತಮ್ಮ ಅಳಲನ್ನು ತೋಡಿಕೊಳ್ಳಲು ಅನುಮತಿಸಲಿಲ್ಲ ಎಂದು ಹಲವಾರು ರೀಲರ್ ಗಳು ಹರಾಜು ಕೂಗದೆ ಗುಂಪುಗೂಡಿದ್ದರು. ಇದನ್ನು ಮನಗಂಡ ರಾಮನಗರ ಜಿಲ್ಲೆಯ ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಬಸವರಾಜು ಆಗಮಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದರಾದರು ಸಫಲವಾಗಲಿಲ್ಲ. ಜಬಿವುಲ್ಲಾ ಬಂದ ನಂತರ ಹರಾಜು ಕೂಗುವುದಾಗಿ ಉಳಿದ ರೀಲರ್ ಗಳು ಪಟ್ಟು ಹಿಡಿದು ಗುಂಪುಗೂಡಿದರು.
ಬೆಳಿಗ್ಗೆ ೧೦:೩೦ ಮತ್ತು ೧೧:೧೫ ಕ್ಕೆ ಎರಡು ಬಾರಿ ಹರಾಜು ಆಗಬೇಕಾಗಿದ್ದ ಗೂಡು ಹನ್ನೆರಡು ಗಂಟೆಯಾದರು ಆರಂಭಗೊಳ್ಳದ್ದರಿಂದ ಕಂಗಲಾದ ರೈತರು ಸಹ ಮಾರುಕಟ್ಟೆ ಯನ್ನು ಮುಚ್ಚಲು ಮುಂದಾದ ಘಟನೆಯು ನಡೆಯಿತು. ಬೆಳಿಗ್ಗೆ ಯಿಂದ ಕುಡಿಯಲು ನೀರು ಇಲ್ಲದೆ, ಕಾಫಿ-ಟೀ, ತಿಂಡಿಯೂ ಇಲ್ಲದೆ ಹಸಿವೆಯಿಂದ ಬಳಲಿದ ರೈತರು ಅಧಿಕಾರಿಗಳ ವಿರುದ್ಧ ಮುಗಿಬಿದ್ದರು.
ನಾನಿಲ್ಲದೆ ಮಾರುಕಟ್ಟೆಯೇ ನಡೆಯದು ಎಂಬ ಹುಮ್ಮಸ್ಸಿನಿಂದ ತಡವಾಗಿ ಬಂದ ಜಬಿವುಲ್ಲಾ, ಅಧಿಕಾರಿಗಳಿಗೆ ಅವರ ಸಮಸ್ಯೆಗಳನ್ನು ಮಾತ್ರ ಹೇಳಿಕೊಂಡು, ನಾವು ಗೂಡು ಖರೀದಿಸುತ್ತೇವೆ. ಆದರೆ ನಮ್ಮ ರೇಷ್ಮೆಯನ್ನು ಯಾರೂ ಖರೀದಿಸಿತ್ತಿಲ್ಲ. ಹಣ ಎಲ್ಲಿಂದ ತರಲಿ, ಎಂದು ಸಮಜಾಯಿಷಿ ನೀಡಲು ಮುಂದಾದಾಗ ಪೋಲೀಸ್ ಅಧಿಕಾರಿ ಓಂಪ್ರಕಾಶ್ ರವರು ತರಾಟೆಗೆ ತೆಗೆದುಕೊಂಡರು.
ನಮ್ಮ ಸಂಘದ ವತಿಯಿಂದ ಮೊದಲು ಚನ್ನಪಟ್ಟಣದಲ್ಲಿ ಮೊದಲು ಬಂದ್ ಮಾಡಿ ಎಂಬ ಸಲಹೆ ನೀಡಿದ್ದಾರೆ ಎಂಬ ಜಬಿವುಲ್ಲಾ ಮಾತಿಗೆ ಪ್ರತ್ಯುತ್ತರ ನೀಡಿದ ಓಂಪ್ರಕಾಶ್ ರವರು ನಮ್ಮ ಚನ್ನಪಟ್ಟಣದಲ್ಲಿ ಮಾರುಕಟ್ಟೆ ಆರಂಭವೇ ಹೊರತು ಅಂತೊಮವಲ್ಲ. ಇಲ್ಲಿ ಮಾರುಕಟ್ಟೆ ಸತತವಾಗಿ ನಡೆಯುತ್ತದೆ, ನಡೆಯಲೇಬೇಕು. ಎಂಬ ಖಡಕ್ ಎಚ್ಚರಿಕೆ ನೀಡಿ ಹರಾಜು ಕೂಗುವಂತೆ ಆದೇಶಿದಿದರು.
ಎಲ್ಲಾ ಮಾರುಕಟ್ಟೆ ಗಳಲ್ಲಿ ಏಕ ರೀತಿಯಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ನಮ್ಮ ಚನ್ನಪಟ್ಟಣ ಈ ರೀತಿ ಆಗುವುದು ಬೇಡ. ನಿಮ್ಮ ಹಿತಾಸಕ್ತಿಗೋಸ್ಕರ ತಡೆ ಹಿಡಿಯುವುದು ಬೇಡ. ಚನ್ನಪಟ್ಟಣ ರೇಷ್ಮೆ ಗೂಡಿನ ಮಾರುಕಟ್ಟೆ ರಾಜ್ಯಕ್ಕೆ ಮಾದರಿಯಾಗಲಿ ಎಂದು ಜಿಲ್ಲಾ ಉಪ ನಿರ್ದೇಶಕ ಬಸವರಾಜು ಸೂಚಿಸಿದರು.
*ಮಾರುಕಟ್ಟೆಗೆ ಬಂದ ದಾಖಲೆಯ ಗೂಡು*
ಕನಿಷ್ಠ ಮೂರು ಸಾವಿರದಿಂದ ನಾಲ್ಕು ಸಾವಿರ ಕಿಲೋ ಗೂಡು ಮಾರುಕಟ್ಟೆಗೆ ಬರುತ್ತಿದ್ದು, ಇಂದು ೧೫೪ ಲಾಟುಗಳು ಬಂದಿದ್ದು ಬರೋಬ್ಬರಿ ೬,೦೮೧ ಕಿಲೋ ರೇಷ್ಮೆ ಗೂಡು ಮಾರುಕಟ್ಟೆ ಗೆ ಬಂದಿದ್ದು ದಾಖಲೆ ನಿರ್ಮಿಸಿತು.
ಪ್ರತಿ ಕಿಲೋ ಗೆ ಗರಿಷ್ಠ ೩೧೭ ರೂಪಾಯಿಗಳಾದರೆ ಕನಿಷ್ಠ ೧೪೭ ರೂಪಾಯಿಗಳಾಗಿದ್ದು ಸರಾಸರಿ ೨೭೮ ರೂಪಾಯಿಗೆ ಹರಾಜು ನಡೆಯಿತು.
ರಾಮನಗರ ಉಪ ನಿರ್ದೇಶಕ ಬಸವರಾಜು, ಚನ್ನಪಟ್ಟಣ ಸಹಾಯಕ ನಿರ್ದೇಶಕ ಹೊಂಬಾಳೆಗೌಡ, ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರವೀಂದ್ರ ಮತ್ತಿತರರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in agriculture »
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ
ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ
ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ
ಪ್ರತಿಕ್ರಿಯೆಗಳು