ಮುಂಗಾರು ಮಳೆಗೆ ಚುರುಕುಗೊಂಡ ಬಿತ್ತನೆ ಕಾರ್ಯ. ಮುಂದುವರೆದ ರಸಗೊಬ್ಬರ ಕೊರತೆ
ಚನ್ನಪಟ್ಟಣ:ಆ/13/20/ಗುರುವಾರ. ತಾಲ್ಲೂಕಿನಾದ್ಯಂತ ಮುಂಗಾರು ಮಳೆಯ ನಡುವೆಯೇ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಈಗಾಗಲೇ ರಾಗಿ ಬಿತ್ತನೆ ಮಾಡಿದ ಅನೇಕ ರೈತರು ಅವುಗಳನ್ನು ಬಿಡಿಬಿಡಿಯಾಗಿಸಿ ನಾಟಿ ಮಾಡಿದರೆ ಇನ್ನೂ ಕೆಲ ರೈತರು ಬಿತ್ತಿದ್ದ ರಾಗಿಗೆ ಕುಂಟೆ ಹೊಡೆದು ಬಿಡಿಯಾಗಿಸತೊಡಗಿರುವುದು ಕಂಡು ಬರುತ್ತಿದೆ.
ಈ ಬಾರಿ ಹಿಂಗಾರು ಸ್ವಲ್ಪ ಮುಂದಾಗಿಯೇ ಆರಂಭವಾದ್ದರಿಂದ ಕೆಲ ರೈತರು ತಮ್ಮ ಜಮೀನನ್ನು ಉತ್ತು ಹಸನು ಮಾಡಿಕೊಂಡಿದ್ದರು. ಇನ್ನೂ ಕೆಲ ರೈತರು ಹಿಂಗಾರು ಮಳೆಗೆ ನೆಲಗಡಲೆಯನ್ನು ಬಿತ್ತಿ ಬೆಳೆದಿದ್ದಾರೆ. ಬಹುತೇಕ ರೈತರು ರಾಗಿಯನ್ನು ಬಿತ್ತಿದ್ದು ನಡುನಡುವೆ ಸಾಲುಗಳಾಗಿ ಅವರೆ, ತೊಗರಿ, ಹಲಸಂದೆ ಬೀಜಗಳನ್ನು ಬಿತ್ತುತ್ತಿದ್ದಾರೆ.
ಈ ನಡುವೆ ತಾಲ್ಲೂಕಿನಾದ್ಯಂತ ಇರುವ ವ್ಯವಸಾಯೋತ್ಪನ್ನ ಸೊಸೈಟಿಗಳಲ್ಲಿ ರಸಗೊಬ್ಬರಗಳ ಕೊರತೆ ಕಂಡು ಬರುತ್ತಿದೆ. ಹಿಂಗಾರು ಮಳೆಯಲ್ಲೇ ಬಿತ್ತನೆ ಮಾಡಿರುವ ಬೆಳೆಗೆ ಶೀಘ್ರವಾಗಿ ಯೂರಿಯಾ ಅಗತ್ಯವಿದ್ದು, ಮುಂಗಾರು ಮಳೆಯಲ್ಲಿ ಬಿತ್ತನೆ ಮಾಡುತ್ತಿರುವ ರೈತರು ಸಹ ರಸಗೊಬ್ಬರದ ಕೊರತೆ ಕಂಡು ಈಗಲೇ ದಾಸ್ತಾನು ಮಾಡಿಕೊಳ್ಳುವ ಮುಂದಾಲೋಚನೆಯಿರುವುದರಿಂದ ತಾಲ್ಲೂಕಿನ ಎಲ್ಲಾ ಕೇಂದ್ರಗಳಲ್ಲೂ ರಸಗೊಬ್ಬರ ಕೊರತೆ ಇದೆ.
ಇಡೀ ಜಿಲ್ಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚಿನ ನೀರಾವರಿ ಇರುವುದರಿಂದ ಸಹಜವಾಗಿ ವ್ಯವಸಾಯ ಮುಂದಿದೆ. ನೀರಾವರಿಯ ಜೊತೆಗೆ ಕೊರೊನಾ ಸಂಕಷ್ಟದಿಂದ ನಗರ ಬಿಟ್ಟು ಹಳ್ಳಿಗಳಿಗೆ ಬಂದಿರುವ ಯುವಕರು ಸಹ ಉತ್ಸಾಹದಿಂದ ವ್ಯವಸಾಯದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಲ್ಲಿ ಮಳೆ ಹಾಗೂ ಬೋರ್ ವೆಲ್ ಗಳ ನೀರನ್ನು ನಂಬಿ ವ್ಯವಸಾಯ ಮಾಡಿದರೆ ಚನ್ನಪಟ್ಟಣದಲ್ಲಿ ಶೇಕಡಾ 70 ರಷ್ಟು ಶಾಶ್ವತ ನೀರಾವರಿ ಇರುವುದರಿಂದ ರಸಗೊಬ್ಬರ ಬೇಡಿಕೆ ಇದ್ದು, ಅಧಿಕಾರಿಗಳು ಕಾರಣ ನೀಡದೆ ರೈತರಿಗೆ ರಸಗೊಬ್ಬರ ನೀಡಲು ಕ್ರಮ ಕೈಗೊಳ್ಳಬೇಕಾಗಿದೆ.
ತಾಲ್ಲೂಕಿನಲ್ಲಿ ನೀರಾವರಿಗನುಗುಣವಾಗಿ ವರ್ಷದ 365 ದಿನಗಳು ಸಹ ವ್ಯವಸಾಯ ನಡೆಯುತ್ತಿದೆ. ಮುಂಗಾರು ಮಳೆಯಲ್ಲಿ ಮಳೆಯಾಶ್ರಿತ ರಾಗಿ ಬೆಳೆ ಹೊರತುಪಡಿಸಿ, ಹಿಪ್ಪುನೇರಳೆ, ಬಾಳೆ ಮುಂತಾದ ಬೆಳೆಗಳಿಗೆ ರೈತರು ರಸಗೊಬ್ಬರವನ್ನೇ ನೆಚ್ಚಿಕೊಂಡಿದ್ದಾರೆ. ಹೈನುಗಾರಿಕೆಯನ್ನು ಹೆಚ್ಚು ಅವಲಂಬಿಸಿರುವ ರೈತರು, ಪಶುಗಳಿಗೆ ಬಳಸುವ ಮೇವಿಗಾಗಿ ಬೆಳೆಯುವ ಹುಲ್ಲಿಗೆ ಹೆಚ್ಚು ಯೂರಿಯಾವನ್ನು ಬಳಸುತ್ತಿರುವುದು ಸಹ ಮುಂಗಾರು ಮಳೆಯಲ್ಲಿ ರಸಗೊಬ್ಬರದ ಕೊರತೆಗೆ ಕಾರಣ ಎನ್ನಲಾಗುತ್ತಿದೆ.
ನಮ್ಮ ರೈತರು ಬೆಳೆ ಬೇಗ ಬರಲಿ ಹಾಗೂ ಹೆಚ್ಚು ಹಸಿರಾಗಿರಲಿ ಎಂದು ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಇಡುತ್ತಾರೆ. ಡಿಎಪಿ 17:17: ರಂತಹ ರಸಗೊಬ್ಬರಗಳನ್ನು ಬಳಸಲು ಹಿಂದೇಟು ಹಾಕುತ್ತಾರೆ. ಆದರೆ ಯೂರಿಯಾ ಜೊತೆಗೆ ಬೇರೆ ರೀತಿಯ ರಸಗೊಬ್ಬರಗಳನ್ನು ಬಳಸಿದರೆ ಭೂಮಿ ಸವಕಲಾಗದೆ, ಫಲವತ್ತತೆಯನ್ನು ಕಾಪಾಡುತ್ತದೆ. ನಮ್ಮಲ್ಲಿ ಯೂರಿಯಾ ಸದ್ಯ ಕಡಿಮೆ ಇದ್ದು, ಮಂಡ್ಯ ದ ಪ್ಯಾಕ್ಸ್ ನಿಂದ ತರಿಸಿಕೊಳ್ಳಲಾಗುವುದು. ಇನ್ನೆರಡು ದಿನಗಳಲ್ಲಿ ತಾಲೂಕಿಗೆ ಬೇಕಾದ ರಸಗೊಬ್ಬರ ನಮ್ಮಲ್ಲಿ ದಾಸ್ತಾನು ಇರುತ್ತದೆ.
*ಅಪರ್ಣಾ, ಕೃಷಿ ಅಧಿಕಾರಿ. ಚನ್ನಪಟ್ಟಣ.*
ಗೋ ರಾ ಶ್ರೀನಿವಾಸ...
ಮೊ:9845856139.
Recent news in agriculture »
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ
ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ
ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ
ಪ್ರತಿಕ್ರಿಯೆಗಳು