ಸದ್ಯದಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಅತ್ಯವಶ್ಯ. ಲಾಕ್ ಡೌನ್ ಕ್ರಮ ಹೀಗಿರಲಿ
ಕೊರೊನಾ (ಕೋವಿಡ್-೧೯) ರಾಜ್ಯಾದ್ಯಂತ ಗಣನೀಯವಾಗಿ ಏರಿಕೆಯಾಗುತ್ತಿರುವುದು ಹಾಗೂ ಮಕ್ಕಳು, ಯುವಕರು, ಮುದುಕರೆನ್ನದೆ ಬಲಿ ಪಡೆಯುತ್ತಿರುವುದು ದಿನ ನಿತ್ಯವೂ ವರದಿಯಾಗುತ್ತಲೇ ಇವೆ. ಮುದ್ರಣ ಮಾಧ್ಯಮ ಹೊರತುಪಡಿಸಿದರೆ ದೃಶ್ಯ ಮಾಧ್ಯಮಗಳಲ್ಲಂತೂ ರೋಗ ಮತ್ತು ಸಾವಿನ ದೃಶ್ಯಗಳನ್ನು ದೊಡ್ಡ ಗಂಟಲಿನಿಂದ ಕಿರುಚಿ, ಚಿತ್ರವಿಚಿತ್ರವಾಗಿ ತೋರಿಸುವುದರ ಮೂಲಕ ಮನೆಮಂದಿಯನ್ನು ಭಯದಿಂದಲೇ ಸಾಯುವಂತೆ ಮಾಡುತ್ತಿರುವುದು ಮತ್ತೊಂದು ದುರಂತವೇ ಸರಿ.
ಲಾಕ್ಡೌನ್ ಎಂದಾಕ್ಷಣ ಜೀವನವೇ ಮುಗಿದು ಹೋಯಿತೇನೋ ಎನ್ನುವುದು ಜನರ ಕಣ್ಮುಂದೆ ಬರುವಂತೆ ಈ ದೃಶ್ಯ ಮಾಧ್ಯಮಗಳು ಬಿಂಬಿಸುತ್ತಿರುವುದು ಅಬಾಲ ವೃದ್ಧರನ್ನು ಅರ್ಧ ಜೀವಕ್ಕೆ ಇಳಿಸುತ್ತಿವೆ. ಇನ್ನೂ ಸರ್ಕಾರ ಘೋಷಿಸುವ ಲಾಕ್ಡೌನ್ ಮಾತ್ರ ಹಾಸ್ಯಾಸ್ಪದ ಎನಿಸುತ್ತಿದೆ.
ಅಗತ್ಯ ವಸ್ತುಗಳು ಪ್ರತಿ ಮನೆಗೂ, ಪ್ರತಿ ವ್ಯಕ್ತಿಗೂ ಅವಶ್ಯವಾಗಿ ಬೇಕಾಗಿರುವುದೇನೋ ನಿಜ. ಅದರಲ್ಲೂ ದಿನಗೂಲಿ ಕಾರ್ಮಿಕರು, ಕೆಲ ವಲಸಿಗರು ಬಿಟ್ಟರೆ ಬೇರೆಯವರಿಗೆ ಜೀವನ ಅಂತಹ ಕಷ್ಟವೇನೂ ಆಗುವುದಿಲ್ಲ. ಮಧ್ಯಮ ವರ್ಗದವರು ಮಿಸುಕಾಡುತ್ತಾರೆ ಎನ್ನುವುದನ್ನು ಬಿಟ್ಟರೆ ಹೇಗೋ ಸಂಭಾಳಿಸಿ ಬಿಡುತ್ತಾರೆ. ಇನ್ನೂ ಶ್ರೀಮಂತ ವರ್ಗದವರಿಗೆ ಈ ಲಾಕ್ಡೌನ್ ಏನೇನೂ ಅಲ್ಲ. ಇಲ್ಲ ನಮಗೂ ಕಷ್ಟ ಆಗುತ್ತೇ ಎನ್ನುವುದಾದರೆ ಆಗಲಿ ಬಿಡಿ ಬಡವನ ಕಷ್ಟ ಅವನಿಗೂ ಗೊತ್ತಾಗಲಿ ಅಲ್ಲವೇ ! ಜೀವ ಇದ್ದರೆ ಜೀವನವಲ್ಲವೇ ? ದಿನಕ್ಕೊಪ್ಪತ್ತು ಉಪವಾಸವಿದ್ದರೆ ಆರೋಗ್ಯದ ಜೊತೆಗೆ ಆಡಳಿತಗರ ಸಂಪತ್ತು ವೃದ್ಧಿಯಾಗುತ್ತದೆ ಅಲ್ಲವೇ.
ಕಳೆದ ತಿಂಗಳ ಮೊದಲು ಎರಡು ತಿಂಗಳ ಕಾಲ ಲಾಕ್ಡೌನ್ ಆದಾಗ ಯಾರಿಗೂ ಅಂತಹ ಸಮಸ್ಯೆ ಆಗಲಿಲ್ಲ. ಉಳ್ಳವರ ಜೊತೆಗೆ ಅನೇಕ ಯುವ ಉತ್ಸಾಹಿಗಳು ಬಡವರ ನೆರವಿಗೆ ಧಾವಿಸಿ ಬಡವರ ಹಸಿವನ್ನು ನೀಗಿಸುವುದರ ಜೊತೆಗೆ ನಿಮ್ಮೊಡನೆ ನಾವಿದ್ದೇವೆ ಎಂದು ಭರವಸೆ ನೀಡುವ ಮೂಲಕ ಮಾನವೀಯತೆ ಮೆರೆದರು. ಇನ್ನೊಂದು ಬಾರಿ ಲಾಕ್ಡೌನ್ ಆದರೆ ಹಿಂದೆ ಸಹಾಯ ಮಾಡಿದವರು ಸ್ಪಂದಿಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನ್ಯಾಯ ಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಿಸುವ ಮೂಲಕ ಸ್ಪಂದಿಸುವುದರಿಂದ ಜೀವನ ಕಷ್ಟವೇನು ಆಗುವುದಿಲ್ಲ.
*ಲಾಕ್ಡೌನ್ ಕ್ರಮ ಹೀಗಿರಲಿ;*
ನಮಗೂ ಸೋಂಕು ತಗುಲಬಹುದು ಎಂಬ ಮುನ್ನೆಚ್ಚರಿಕೆಯಿಂದ ಸಣ್ಣ ಪುಟ್ಟ ಕ್ಲಿನಿಕ್ ಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದೆ ಬರುತ್ತಿಲ್ಲ. ಎಷ್ಟೋ ಕಡೆ ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳು ಸಹ ಆಗಾಗ್ಗೆ ಸೀಲ್ಡೌನ್ ಆಗುತ್ತಲೇ ಇವೆ. ಇಂತಹ ಸಮಯದಲ್ಲಿ ಗಂಭೀರ ಖಾಯಿಲೆ ಹಾಗೂ ತುರ್ತು ಚಿಕಿತ್ಸೆ ಹೊರತುಪಡಿಸಿದರೆ ಬೇರೆ ಮದ್ದು ನೀಡುತ್ತಿಲ್ಲ.
ಹಾಗಾಗಿ ತಾಲ್ಲೂಕಿನ ಜನಗಣತಿಯ ಪ್ರಕಾರವಾಗಿ ದಿನನಿತ್ಯದ ಸಾಮಾನು ಸರಂಜಾಮುಗಳಿಗಾಗಿ ಕನಿಷ್ಠ ಒಂದರಿಂದ ಎರಡು ಗಂಟೆಗಳ ಕಾಲ ಕೊಂಡುಕೊಳ್ಳಲು ಸಮಯ ನಿಗದಿ ಮಾಡಬೇಕು. ಇದನ್ನು ಗ್ರಾಮ ಪಂಚಾಯತಿ ಹಾಗೂ ಪ್ರತಿ ಗ್ರಾಮಗಳಿಗೂ ಸಹ ಕಡ್ಡಾಯಗೊಳಿಸಬೇಕು. ಜೊತೆಗೆ ಇಲ್ಲೂ ಸಹ ಮಾಸ್ಕ್, ಅಂತರ ಮತ್ತು ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಸ್ಥಳೀಯ ಆಡಳಿತ, ಟಾಸ್ಕ್ ಫೋರ್ಸ್ ಸಮಿತಿ ಖುದ್ದು ಹಾಜರಿದ್ದು ನಿರ್ವಹಣೆ ಮಾಡಬೇಕೆಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.
ತುರ್ತು ಚಿಕಿತ್ಸೆಗಾಗಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಹಾಗೂ ನಗರದ ಜನಗಣತಿಗನುಗುಣವಾಗಿ ಒಂದು ಅಥವಾ ಎರಡು ಆ್ಯಂಬುಲೆನ್ಸ್ ಗಳನ್ನು ನಿಯೋಜಿಸಬೇಕು. ಗ್ರಾಮ ಪಂಚಾಯತಿಗೊಂದರಂತೆ ಮೆಡಿಕಲ್ ಬಾಗಿಲು ತೆಗೆಯಬೇಕು. ಇನ್ನೂ ಪೆಟ್ರೋಲ್ ಬಂಕ್ ಗಳನ್ನು ನಗರದಲ್ಲಿ ಮಾತ್ರ ಪ್ರತಿ ದಿನ ಒಂದರಂತೆ ಮಾತ್ರ ತೆರೆಯಬೇಕು. ಸರ್ಕಾರದ ವಾಹನಗಳು, ಅಗತ್ಯ ವಸ್ತುಗಳ ಪೂರೈಕೆದಾರರು, ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಮಾಧ್ಯಮದ ವರದಿಗಾರರಿಗೆ ಜಿಲ್ಲಾ ಅಥವಾ ತಾಲ್ಲೂಕು ಆಡಳಿತ ಪಾಸ್ ನೀಡುವ ಮೂಲಕ ನಿರ್ವಹಿಸಬೇಕು. ಈ ರೀತಿಯ ಲಾಕ್ಡೌನ್ ಮಾಡಿದಾಗ ಮಾತ್ರ ಕೊರೊನಾ ಸೋಂಕನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
ಅಗತ್ಯ ವಸ್ತುಗಳು ಮತ್ತು ವಾರಿಯರ್ಸ್ (Essential) ಎಂಬ ಹೆಸರಿನ ಅಡಿಯಲ್ಲಿ ಶೇಕಡಾ ೭೦ ಕ್ಕೂ ಹೆಚ್ಚು ಮಂದಿಗೆ ಓಡಾಡಲು ರಹದಾರಿ ಕೊಟ್ಟು, ಸೋಂಕಿತರನ್ನು ಹೆಚ್ಚು ಮಾಡಿ ಬೊಬ್ಬೆ ಹೊಡೆಯುವ ಆಡಳಿತವು ಕನಿಷ್ಠ ಎರಡು ವಾರ ಅಥವಾ ಒಂದು ತಿಂಗಳು ಕಟ್ಟುನಿಟ್ಟಿನ ಲಾಕ್ಡೌನ್ ಮಾಡಿದರೆ ಸೋಂಕಿತರು ಕಡಿಮೆಯಾಗುವರು. ಮುಂದಿನ ದಿನಗಳಲ್ಲಿ ಆಡಳಿತವು ಚುರುಕಾಗುವುದರಲ್ಲಿ ಅನುಮಾನವಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ.
ಲಕ್ಷ್ಮಿ ಗೋ ರಾ ಶ್ರೀನಿವಾಸ...
ಜಿ ಜಿ ದೊಡ್ಡಿ. ಚನ್ನಪಟ್ಟಣ.
ಸಾಂಸ್ಕೃತಿಕ ಕಲಾವಿದರು ಹಾಗೂ ಹವ್ಯಾಸಿ ಬರಹಗಾರರು.
ಮೊ:9740001666.
Recent news in corona »
ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆ
ರಾಮನಗರ ಜಿಲ್ಲೆಯಲ್ಲಿ ಕಳೆದ ಏಳು ತಿಂಗಳ ನಂತರ ಇದೇ ಮೊದಲ ಬಾರಿಗೆ ಕೊರೋನಾ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬಿಡದಿ ಬಳಿಯ ಬೈರಮಂಗಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ
ಸೆ.17 ರಂದು ತಪ್ಪದೇ ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ
ರಾಮನಗರ.ಸೆ 17: ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, 318 ಲಸಿಕಾ ತಂಡವನ್ನು ರಚಿಸಲಾಗಿದೆ. ತಂಡಗಳು
ಸೆ.17 ರಂದು ಜಿಲ್ಲೆಯಲ್ಲಿ 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಡಾ: ರಾಕೇಶ್ ಕುಮಾರ್ ಕೆ
ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಮೇಳವನ್ನು ಹಮ್ನಿಕೊಳ್ಳಲಾಗಿದ್ದು, 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರ
ಸೆಪ್ಟೆಂಬರ್ 8 ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ
ರಾಮನಗರ ,ಸೆ.7; ಕೋವಿಡ್-19 ಲಸಿಕಾಕರಣದ ಪ್ರಗತಿ ವೃದ್ದಿಯ ಉಪಕ್ರಮವಾಗಿ ಸೆಪ್ಟೆಂಬರ್ 8 ರಂದು ಜಿಲ್ಲೆಯಾದ್ಯಂತ ಕೋವಿಡ್-19 ಲಸಿಕಾ
ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದತೆ ಮಾಡಿಕೊಳ್ಳಿ ಡಾ ಅಶ್ವಥ್ ನಾರಾಯಣ
ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋ
ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ
ಚನ್ನಪಟ್ಟಣ.ಜು.12: ತಾಲ್ಲೂಕಿನಾದ್ಯಂತ ಇರುವ ಸಂಘಟಿತ ಮತ್ತು ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಇಲಾಖೆ ವತಿಯಿಂದ ದಿನಸಿ ಕಿಟ್ ನೀಡಲಾಗುತ್ತಿದ್ದು, ತಾಲ್ಲೂಕಿನಲ್ಲಿ ಮಂತ್ರಿ ಮತ್ತು ಶಾಸಕರ ನೇತೃತ್
ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ
ಕೊರೊನಾ ದಿಂದ ಜನಸಾಮಾನ್ಯರ ಬದುಕು ಅಧ:ಪತನಕ್ಕಿಳಿದಿರುವುದು ಸತ್ಯ. ಇದಕ್ಕಾಗಿ, ಪಕ್ಷಗಳು, ಸಂಘಸಂಸ್ಥೆಗಳು ಮತ್ತು ಉಳ್ಳವರನೇಕರು ಬಡಬಗ್ಗರಿಗೆ ದಿನಸಿ ಕಿಟ್ ನೀಡುತ್ತಿರುವುದು ಶ್ಲಾಘನೀಯವಾದರೂ ಕೋವಿಡ್
ವಾರಾಂತ್ಯ ಕರ್ಫ್ಯೂ, 6 ರಿಂದ 2. ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ. ಜಿಲ್ಲಾಧಿಕಾರಿ
ರಾಮನಗರ: ವಾರಾಂತ್ಯದ ಕರ್ಫ್ಯೂ ಗೆ ಕಳೆದ ವಾರದಂತೆ ಈ ವಾರವೂ ಸಹ ಬದಲಾವಣೆಗಳೊಂದಿಗೆ ಮಾರ್ಪಡಿಸಿದ್ದು, ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ
ಸಂಭವನೀಯ ಕೋವಿಡ್ 3 ನೇ ಅಲೆ-ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಸಂಭವನೀಯ ಕೋವಿಡ್ 3 ನೇ ಅಲೆಯ ಸಂದರ್ಭದಲ್ಲಿ ಯಾವುದೇ ಮಕ್ಕಳಿಗೆ ತೊಂದರೆಯಾಗದಂತೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ
115 ನೇ ದಿನಕ್ಕೆ ಕಾಲಿಟ್ಟ ಇರುಳಿಗರ ಪ್ರತಿಭಟನೆ
ರಾಮನಗರ: ಕೈಲಾಂಚ ಹೋಬಳಿಯ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಇರುಳಿಗ ಜನಾಂಗದವರು ಹಂದಿಗೊಂದಿ ಅರಣ್ಯ
ಪ್ರದೇಶದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಕೋವಿಡ್ ಎರಡನೇ ಅಲೆ ಹೆ
ಪ್ರತಿಕ್ರಿಯೆಗಳು