ಲಸಿಕೆಗಾಗಿ ಮುಗಿಬಿದ್ದ ಜನ. ಅಂತರವಿಲ್ಲದೆ ಅಂಟಿಕೊಂಡ ಮಂದಿ. ನಿಯಂತ್ರಿಸಲು ವಿಫಲ
ಇತ್ತೀಚೆಗೆ ಲಸಿಕೆಗೆ ಬಹಳ ಬೇಡಿಕೆ. ಮೊದಲಿಗೆ ಟೀಕಿಸಿ, ಲಸಿಕೆಯೇ ಬೇಡವೆಂದವರೆಲ್ಲರೂ ಇಂದು ನಾಮುಂದು ತಾಮುಂದು ಎಂದು ಮುಗಿಬಿದ್ದು ಲಸಿಕೆ ಹಾಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಭರದಲ್ಲಿ ಕೊರೊನಾ ಸೋಂಕಿನ ಭಯವಿಲ್ಲದೆ, ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದಿರುವುದು ಅವರ ಅಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ.
ಆರು ಅಡಿ ಇರಲಿ, ಅರ್ಧ ಅಡಿಯಷ್ಟು ಅಂತರವಿಲ್ಲದೆ ಒತ್ತೊತ್ತಾಗಿ ನಗರಸಭೆಯ ಆವರಣದಲ್ಲಿ ನೆರೆದಿದ್ದಾರೆ. ಕೊರೊನಾ ಅಷ್ಟೇ ಅಲ್ಲಾ, ಯಾವುದೇ ರೋಗವಿದ್ದರೂ ಲಸಿಕೆ ಪಡೆದರೆ ಎಲ್ಲಾ ರೋಗಗಳು ನಿರ್ಮೂಲನೆ ಆಗಿ ಬಿಡುತ್ತವೆ, ಎಂಬ ಉಮೇದಿನಿಂದ ಲಸಿಕೆಗಾಗಿ ಮುಗಿಬಿದ್ದಿರುವ ಇವರು, ಸಾಲುಗಟ್ಟಿರುವವರಲ್ಲಿ ಯಾರೋ ಒಬ್ಬರಿಗಿದ್ದರೂ ಅದು ನಮಗೆ ತಗುಲುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ನಿಂತಿರುವುದು ಅಚ್ಚರಿಯಾದರೂ ಸತ್ಯ.
ಇದಕ್ಕೆಲ್ಲಾ ಕಾರಣ ತಾಲ್ಲೂಕು ಆಡಳಿತ ಮತ್ತು ವೈದ್ಯಕೀಯ ಅಧಿಕಾರಿಗಳು. ಲಸಿಕೆ ಎಷ್ಟು ಬಂದಿದೆ, ಎಷ್ಟು ಮಂದಿಗೆ ಲಸಿಕೆ ನೀಡುತ್ತೇವೆ. ಯಾವ ಲಸಿಕೆ ನೀಡುತ್ತೇವೆ. ಮೊದಲ ಅಥವಾ ಎರಡನೇ ಡೋಸ್ ನೀಡುತ್ತೇವೆ. ಎಷ್ಟು ಮಂದಿ ಬರಬೇಕು. ಎಷ್ಟೊತ್ತಿಗೆ ಬರಬೇಕು. ಅಂದಿನ ಲಸಿಕೆ ಮುಗಿದ ನಂತರ ಇಂದು ಕಾದಿದ್ದವರಿಗೆ ನಾಳೆ ಮೊದಲ ಆದ್ಯತೆಯೇ ? ಅಥವಾ ಯಾರು ಮೊದಲು ಬರುತ್ತಾರೋ ಅವರಿಗೆ ಕೊಡುತ್ತೇವೆ ಎಂತಲೋ, ಕೊನೆ ಪಕ್ಷ ಲಸಿಕೆ ನೀಡುವ ಸ್ಥಳದಲ್ಲಿ ಲಸಿಕೆ ಇಲ್ಲದಾಗ ಇಲ್ಲಾ ಎಂದು ಹೇಳಲು, ಒಂದು ಪ್ರಕಟಣೆಯೂ ಇಲ್ಲದಿರುವುದು ಜನರು ಅಂತರವಿಲ್ಲದೆ ಮುಗಿಬಿದ್ದು ಲಸಿಕೆ ಕೊಳ್ಳಲು ನೇರ ಕಾರಣರಗಿದ್ದಾರೆ.
ನಗರದಲ್ಲಿನ ಕುಶಲಕರ್ಮಿ ತರಬೇತಿ ಕೇಂದ್ರದಲ್ಲಿ ಕೋವ್ಯಾಕ್ಷಿನ್ ಲಸಿಕೆ ನೀಡಿದರೆ ನಗರಸಭೆಯ ಆವರಣದಲ್ಲಿ ಕೋವಿಶೀಲ್ಡ್ ಲಸಿಕೆ ನೀಡುತ್ತಾರೆ. ಇದಲ್ಲದೆ ನಗರ ಮತ್ತು ತಾಲ್ಲೂಕಿನಾದ್ಯಂತ ಲಸಿಕೆ ಸಾಂದ್ರತೆಯ ಆದ್ಯತೆ ಮೇರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ನೀಡುತ್ತಾರೆ. ನಗರದಲ್ಲಿ ಪೋಲೀಸರನ್ನು ನೇಮಿಸಿದರೂ ಸಹ ತಿಳಿದುಕೊಳ್ಳದ ಜನರ ಮುಂದೆ ಅಸಹಾಯಕರಾಗಿ ನಿಲ್ಲುವಂತಾಗಿದೆ. ಮುಂದಾದರು ಲಸಿಕೆ ಹಾಕುವಾಗ, ಸಾರ್ವಜನಿಕರಿಗೆ ಮಾಧ್ಯಮದ ಮೂಲಕ ಮಾಹಿತಿ ನೀಡಿದರೆ ಜನರು ಮುಗಿಬೀಳುವುದು ತಪ್ಪುತ್ತದೆ.
ಜಿಲ್ಲಾಡಳಿತವು ಎಷ್ಟು ಲಸಿಕೆ ನೀಡುತ್ತೋ ಅಷ್ಟು ಲಸಿಕೆಯನ್ನು ನಾವು ಪ್ರತಿನಿತ್ಯ ನೀಡುತ್ತೇವೆ. ಇಂದು ನಗರಸಭೆಯ ಆವರಣದಲ್ಲಿ 50 ಮಂದಿಗೆ ನೀಡಿದ್ದೇವೆ. ಮೊದಲೇ 50 ಮಂದಿಗೆ ಎಂದು ಸಿಬ್ಬಂದಿಗಳು ತಿಳಿಸಿದರೂ ಸಹ ಉಳಿದ ಮಂದಿಯೂ ನಿಂತೇ ಇರುತ್ತಾರೆ. ಇಂದು ಲಸಿಕೆ ಇಷ್ಟು ಮಂದಿಗೆ ಮಾತ್ರ ನೀಡಲಾಗುತ್ತದೆ. ಇಂದು ಲಸಿಕೆ ಇಲ್ಲ ಎಂಬ ಮಾಹಿತಿಯನ್ನು ನಗರಸಭೆ ಪೌರಾಯುಕ್ತರು ಮಾಡಬೇಕು. ಇಲ್ಲವಾದರೆ ನಾನೇ ಒಂದು ಪ್ರತಿಯನ್ನು ಅಂಟಿಸಿ ಜನರಿಗೆ ಮಾಹಿತಿ ನೀಡುತ್ತೇನೆ.
ಡಾ ಕೆ ಪಿ ರಾಜು. ತಾ ವೈದ್ಯಾಧಿಕಾರಿ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in corona »
ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆ
ರಾಮನಗರ ಜಿಲ್ಲೆಯಲ್ಲಿ ಕಳೆದ ಏಳು ತಿಂಗಳ ನಂತರ ಇದೇ ಮೊದಲ ಬಾರಿಗೆ ಕೊರೋನಾ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬಿಡದಿ ಬಳಿಯ ಬೈರಮಂಗಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ
ಸೆ.17 ರಂದು ತಪ್ಪದೇ ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ
ರಾಮನಗರ.ಸೆ 17: ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, 318 ಲಸಿಕಾ ತಂಡವನ್ನು ರಚಿಸಲಾಗಿದೆ. ತಂಡಗಳು
ಸೆ.17 ರಂದು ಜಿಲ್ಲೆಯಲ್ಲಿ 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಡಾ: ರಾಕೇಶ್ ಕುಮಾರ್ ಕೆ
ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಮೇಳವನ್ನು ಹಮ್ನಿಕೊಳ್ಳಲಾಗಿದ್ದು, 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರ
ಸೆಪ್ಟೆಂಬರ್ 8 ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ
ರಾಮನಗರ ,ಸೆ.7; ಕೋವಿಡ್-19 ಲಸಿಕಾಕರಣದ ಪ್ರಗತಿ ವೃದ್ದಿಯ ಉಪಕ್ರಮವಾಗಿ ಸೆಪ್ಟೆಂಬರ್ 8 ರಂದು ಜಿಲ್ಲೆಯಾದ್ಯಂತ ಕೋವಿಡ್-19 ಲಸಿಕಾ
ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದತೆ ಮಾಡಿಕೊಳ್ಳಿ ಡಾ ಅಶ್ವಥ್ ನಾರಾಯಣ
ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋ
ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ
ಚನ್ನಪಟ್ಟಣ.ಜು.12: ತಾಲ್ಲೂಕಿನಾದ್ಯಂತ ಇರುವ ಸಂಘಟಿತ ಮತ್ತು ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಇಲಾಖೆ ವತಿಯಿಂದ ದಿನಸಿ ಕಿಟ್ ನೀಡಲಾಗುತ್ತಿದ್ದು, ತಾಲ್ಲೂಕಿನಲ್ಲಿ ಮಂತ್ರಿ ಮತ್ತು ಶಾಸಕರ ನೇತೃತ್
ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ
ಕೊರೊನಾ ದಿಂದ ಜನಸಾಮಾನ್ಯರ ಬದುಕು ಅಧ:ಪತನಕ್ಕಿಳಿದಿರುವುದು ಸತ್ಯ. ಇದಕ್ಕಾಗಿ, ಪಕ್ಷಗಳು, ಸಂಘಸಂಸ್ಥೆಗಳು ಮತ್ತು ಉಳ್ಳವರನೇಕರು ಬಡಬಗ್ಗರಿಗೆ ದಿನಸಿ ಕಿಟ್ ನೀಡುತ್ತಿರುವುದು ಶ್ಲಾಘನೀಯವಾದರೂ ಕೋವಿಡ್
ವಾರಾಂತ್ಯ ಕರ್ಫ್ಯೂ, 6 ರಿಂದ 2. ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ. ಜಿಲ್ಲಾಧಿಕಾರಿ
ರಾಮನಗರ: ವಾರಾಂತ್ಯದ ಕರ್ಫ್ಯೂ ಗೆ ಕಳೆದ ವಾರದಂತೆ ಈ ವಾರವೂ ಸಹ ಬದಲಾವಣೆಗಳೊಂದಿಗೆ ಮಾರ್ಪಡಿಸಿದ್ದು, ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ
ಸಂಭವನೀಯ ಕೋವಿಡ್ 3 ನೇ ಅಲೆ-ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಸಂಭವನೀಯ ಕೋವಿಡ್ 3 ನೇ ಅಲೆಯ ಸಂದರ್ಭದಲ್ಲಿ ಯಾವುದೇ ಮಕ್ಕಳಿಗೆ ತೊಂದರೆಯಾಗದಂತೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ
115 ನೇ ದಿನಕ್ಕೆ ಕಾಲಿಟ್ಟ ಇರುಳಿಗರ ಪ್ರತಿಭಟನೆ
ರಾಮನಗರ: ಕೈಲಾಂಚ ಹೋಬಳಿಯ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಇರುಳಿಗ ಜನಾಂಗದವರು ಹಂದಿಗೊಂದಿ ಅರಣ್ಯ
ಪ್ರದೇಶದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಕೋವಿಡ್ ಎರಡನೇ ಅಲೆ ಹೆ
ಪ್ರತಿಕ್ರಿಯೆಗಳು