ತಾಳೆಯೋಲೆ ೧೭೭:ಅಸೂಯೆ ಒಬ್ಬ ವ್ಯಕ್ತಿಯ ಜೀವನವನ್ನು ಹೇಗೆ ಪತನ ಮಾಡುತ್ತದೆ
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಅಸೂಯೆ ಒಬ್ಬ ವ್ಯಕ್ತಿಯ ಜೀವನವನ್ನು ಹೇಗೆ ಪತನ ಮಾಡುತ್ತದೆ
ಶತ್ರಗಳು ಒಬ್ಬರ ಜೀವನವನ್ನು ನಾಶ ಮಾಡುತ್ತಾರೆ. ಇಲ್ಲವೇ ಒಬ್ಬರಿಗೆ ತೊಂದರೆ ಉಂಟು ಮಾಡುತ್ತಾರೆ, ಆದರೆ ಒಬ್ಬ ವ್ಯಕ್ತಿ ತನ್ನ ಮೇಲೆ ಶತೃತ್ವವನ್ನು ಹೊಂದಿರುವವರ ಮೇಲೆ ದ್ವೇಷವನ್ನು ಬೆಳೆಸಿಕೊಳ್ಳುತ್ತಾನೆ. ಅವರನ್ನು ನೋಡಿ ಅಸೂಯೆಪಡುತ್ತಾನೆ. ಹೀಗೆ ಅಸೂಯೆ ದ್ವೇಷಗಳಿಗೆ ನಮ್ಮ ಮನಸ್ಸಿನಲ್ಲಿ ಸ್ಥಾನ ಕೊಡುವುದು, ನಮ್ಮ ಗುಳಿಯನ್ನು ನಾವೇ ತೆಗೆದುಕೊಂಡಂತಾಗುತ್ತದೆ. ಆದ್ದರಿಂದ *ನಿನ್ನನ್ನು ಶತೃವನ್ನಾಗಿ ಭಾವಿಸಿ ಬಾಧಿಸುವವರನ್ನು ನೀನು ಶಿಕ್ಷಿಸಬೇಕೆಂದು ಅಂದುಕೊಂಡರೆ ನೀನು ಹೇಗೆ ಶಿಕ್ಷಿಸಬಹುದೋ ಶಿಕ್ಷಿಸು. ಶಿಕ್ಷಿಸಿದ ನಂತರ ಅಥವಾ ಶಿಕ್ಷಿಸಲಾರದೆ ಬಿಟ್ಟು ಬಿಟ್ಟರೂ ಅವರ ಬಗ್ಗೆ ನಿನ್ನ ಹೃದಯದಲ್ಲಿ ಯಾವ - ಭಾವನೆ, ದ್ವೇಷ. ಯಾವುದೇ ರೀತಿಯಾದ ವ್ಯತಿರೇಕ, ದ್ವೇಷ ಅಸೂಯೆಗಳು ಇರಬಾರದು. ಅದು ದೇವತಾ ಮನಸ್ತತ್ವವಾಗಿರುವುದು*. ಈ ರೀತಿಯಾದ ಶತ್ರುಗಳು ನಿನ್ನ ಹತ್ತಿರ ದ್ವೇಷವನ್ನು ಮರೆತು, ಸ್ನೇಹವಾಗಿ ಇರಬೇಕೆಂದು ತಿಳಿಯುವ ನೀನು ಅವರನ್ನು ಕ್ಷಮಿಸಿ ಹತ್ತಿರಕ್ಕೆ ಸೇರಿಸಿಕೊಳ್ಳುವ ಗುಣವನ್ನು ಹೊಂದಿರಬೇಕು. *ಆದರೆ ಯಾವಾಗಲೋ ಅವರು ನಿನಗೆ ಮಾಡಿದ ಅನ್ಯಾಯಕ್ಕೆ ಯಾವಾಗಲೂ ರಾಮನಾಮವನ್ನು ಗುರ್ತಿಟ್ಟುಕೊಳ್ಳುವಂತೆ ಗುರ್ತಿಟ್ಟುಕೊಂಡು ದ್ವೇಷವನ್ನು ಹೊಂದಿರುವುದು ನಿನ್ನನ್ನೇ ಪತನಗೊಳಿಸುತ್ತದೆ.*
ಇನ್ನು *ಅಸೂಯೆ ಎನ್ನುವುದು ಬಹಳ ಭಯಂಕರವಾದ ಗುಣ. ಇತರರ ಕ್ಷೇಮವನ್ನೂ , ಲಾಭವನ್ನೂ ನೋಡಿ ಸಹಿಸಲಾರದ ತನವು ಅವನನ್ನೇ ಸುಟ್ಟು ಹಾಕುತ್ತದೆ.* ಪ್ರಪಂಚದಲ್ಲಿ ನಮಗಿಂತ ಉನ್ನತವಾಗಿ ಬಹಳ ಜನರಿರುವರು. ಹಾಗೆಯೇ ನಮಗಿಂತ ಕಡಿಮೆ ಅಂತಸ್ಸಿನಲ್ಲಿ ಎಷ್ಟೋ ಜನರಿರುವರೆನ್ನುವ ವಾಸ್ತವವನ್ನು ಮರೆಯದೆ ಗುಣವನ್ನು ಮಲವೆಂದು ಭಾವಿಸಿ ಬಿಟ್ಟು ಬಿಡಬೇಕು. ಅಸೂಯಾ ದ್ವೇಷಗಳಿಗಾಗಿ ಉಪಯೋಗಿಸುವ ಮಾನಸಿಕ ಸಾಮರ್ಥ್ಯವನ್ನು ಹಾಗೂ ಕಾಲವನ್ನು ತನ್ನ ಉನ್ನತಿಗಾಗಿ ಉಪಯೋಗಿಸಿಕೊಳ್ಳುವುದು ಎಷ್ಟೋ ವಾಸಿ. *ಅಸೂಯೆಯನ್ನು ಹೊಂದಿರುವ ಕಣ್ಣುಗಳು ಪಾಪದ ಕಣ್ಣುಗಳು. ಮನಸ್ಸು ಪಾಪದ ಮನಸ್ಸು* ಎಂದು ಮರೆಯಬಾರದು.
ಪ್ರಗತಿ ಹೊಂದಿದವರನ್ನು ಆದರ್ಶವಾಗಿ ತೆಗೆದುಕೊಳ್ಳಬಹುದು. ಆದರೆ ಅವರ ಪ್ರಗತಿಯನ್ನು ನೋಡಿ ಅಳುವುದು ನಿನ್ನ ಅಲ್ಪತನವನ್ನು ತೋರಿಸುತ್ತದೆ. ಅಭಿವೃದ್ಧಿಯನ್ನು ಹೊಂದುತ್ತಿರುವವರನ್ನು ಕೆಲವರು ಅಸೂಯೆಯಿಂದ ಅವರನ್ನು ಕೆಳಗೆಳೆಯಲು ಸಂಕಲ್ಪಿಸುತ್ತಾರೆ . ಅಂತಹವರು ಜೀವನದಲ್ಲಿ ಬೆಳೆಯುವುದಿಲ್ಲ. ಇತರರನ್ನು ಬೆಳೆಯಲು ಬಿಡುವುದಿಲ್ಲ. ಕೊನೆಗೆ ಇಂತಹವರು - ಘೋರಾತಿ ಘೋರವಾಗಿ ಪತನವಾಗುವರು.
ಸಂಗ್ರಹ ಮತ್ತು ಪ್ರಚಾರ;
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು