ತಾಳೆಯೋಲೆ ೧೭೮: ಯಾರ ಸಂಪದ ಸ್ಥಿರವಾಗಿ ನಿಲ್ಲುತ್ತದೆ
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಯಾರ ಸಂಪದ ಸ್ಥಿರವಾಗಿ ನಿಲ್ಲುತ್ತದೆ
ಒಬ್ಬ ವ್ಯಕ್ತಿ ತನ್ನ ಮಕ್ಕಳಿಗಾಗಿ ಮತ್ತು ಮುಂದಿನ ತಲೆಮಾರಿನವರೆಗೆ ಸಂಪಾದಿಸಿದ ಸಿರಿ ಸಂಪದಗಳು ಶಾಶ್ವತವಾಗಿ ನಿಂತು ತನ್ನವರಿಗೆ ಸುಖ ಸೌಖ್ಯಗಳನ್ನು ನೀಡಬೇಕೆಂದು ಅಪೇಕ್ಷಿಸುವುದು ಸಾಮಾನ್ಯ. ಎಚ್ಚರಿಕೆಯಿಂದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾ ಸಮಯಾನುಕೂಲ ವಾಗಿ ಬುದ್ಧಿವಂತಿಕೆಯಿಂದ ಪ್ರವರ್ತಿಸುತ್ತಿದ್ದರೆ ಎಷ್ಟೋ ಅಷ್ಟು ಸಿರಿಯನ್ನು ಸ್ವಂತ ಮಾಡಿಕೊಳ್ಳಿಬಹುದು.
*ಆದರೆ ಆರ್ಜಿಸುವ ಧನವು ನ್ಯಾಯ ಸಮ್ಮತವಾಗಿರಬೇಕು. ನಾನಾ ವಿಧವಾದ ಮೋಸ ಮಾಡಿ, ಇತರರನ್ನು ವಂಚಿಸಿ, ದೌರ್ಜನ್ಯ ಮಾಡಿಯೂ ಸಹ ಕೆಲವರು ಸಿರಿ ಸಂಪದಗಳನ್ನು ಸಂಪಾದಿಸುವುದಕ್ಕೆ ಹಿಂಜರಿಯುವುದಿಲ್ಲ. ಆದರೆ ಹೀಗೆ ಅಕ್ರಮವಾಗಿ ಸಂಪಾದಿಸಿದ ಧನವು ವಿಷತುಲ್ಯವೆಂದು ಅವರಿಗೆ ನಿಜವಾಗಿ ತಿಳಿಯದು. ಆ ರೀತಿಯ ಧನವು ಮುಂದಿನ ಪೀಳಿಗೆಯವರಿಗೆ ನಿಲ್ಲದೆ, ಅವರ ಕುಟುಂಬವನ್ನು ನಾನಾ ರೀತಿಯಾಗಿ ವಿಶ್ವಧರ್ಮ ನಾಶ ಮಾಡುತ್ತದೆ . ಪರರ ಸೊತ್ತು ಪಾಷಾಣದಂತೆ ಎಂಬುದನ್ನು ನಾವು ಮರೆಯಬಾರದು.*
ಯಾರಿಗೂ ಅನ್ಯಾಯ ಮಾಡದೆ ತನ್ನ ಶಕ್ತಿ ಸಾಮರ್ಥ್ಯಗಳಿಂದ ಗಳಿಸಿದ ಧನವೇ ತನಗೆ, ತನ್ನ ಕುಟುಂಬಕ್ಕೆ ಮತ್ತು ಮುಂದಿನ ಪೀಳಿಗೆಯವರಿ ಶುಭವನ್ನುಂಟು ಮಾಡುತ್ತದೆ. ಅನ್ಯಾಯವಾಗಿ ಧನವನ್ನು ಸಂಪಾದಿಸುವುದು ಸ್ವಲ್ಪ ಸುಲಭವೇ. ಆದರೆ ಪ್ರತಿ ಒಳ್ಳೆಯ ವಿಷಯವನ್ನು ಸಾಧನೆ ಮಾಡುವುದು ಕಷ್ಟವೇ, *ಅನ್ಯಾಯ ಸುಲಭವಾದರೂ, ಕೊನೆಗೆ ಪತನವನ್ನುಂಟು ಮಾಡುತ್ತದೆ. ನ್ಯಾಯ ಮಾರ್ಗವು ಕಷ್ಟವಾದರೂ ಕೊನೆಗೆ ಒಳ್ಳೆಯ ಫಲಿತವನ್ನು ಕೊಡುತ್ತದೆ. ಇದು ವಿಶ್ವಧರ್ಮ,*
ಇತರರನ್ನು ಪೀಡಿಸಿ ಲಂಚ ತೆಗೆದುಕೊಳ್ಳುವುದು, ಪರರನ್ನು ಕಣ್ಣೀರು ಪಾಲು ಮಾಡಿ ಅವರ ಹಣವನ್ನು ದೋಚುವುದು, ಸಂಘ ವಿದೋಹಕ ಕೆಲಸಗಳನ್ನು ಮಾಡಿ ಸಂಪಾದಿಸುವುದು ಮುಂತಾದ *ಅಕ್ರಮ ಮಾರ್ಗಗಳಲ್ಲಿ ಸಂಪಾದಿಸಿದ ಹಣವು ಮೊದಲು ಸುಖವನ್ನು ನೀಡಿದರೂ, ನಂತರ ಅದರ ಕೆಟ್ಟ ಪರಿಣಾಮದಿಂದ ನಾನಾ ವಿಧವಾಗಿ ಪೀಡಿಸುತ್ತದೆ.* ಒಬ್ಬರನ್ನು ಹೊಡೆದು ಹತ್ತು ಮಂದಿಗೆ ಹಾಕಬಹುದು. ಅದು ಪಾಪವಲ್ಲ. ಆದರೆ ಹತ್ತು ಮಂದಿಯನ್ನು ಹೊಡೆದು ( ಮೋಸ ಮಾಡಿ ) ತಾನೊಬ್ಬನೇ ಬದುಕುವುದು ಪಾಪ. ಆದ್ದರಿಂದ ಪಾಪಕರ್ಮಗಳಿಗೆ ದೂರವಿದ್ದು , ಸತ್ಕರ್ಮಗಳ ಮುಖಾಂತರ ಧನವನ್ನು ಸಂಪಾದಿಸಿ ಶಾಶ್ವತವಾಗಿ ಸುಖವನ್ನು ಹೊಂದಿರಿ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು