ತಾಳೆಯೋಲೆ ೧೮೧: ಅನ್ನದಾನವೇ ಉನ್ನತವೆಂದು ಏಕೆ ಹೇಳುವರು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಅನ್ನದಾನವೇ ಉನ್ನತವೆಂದು ಏಕೆ ಹೇಳುವರು ?
ಹಸಿವಿನಿಂದ ಕಂಗಾಲಾಗಿರುವವನಿಗೆ ಅನ್ನ ನೀಡುವುದನ್ನು ಅನ್ನದಾನ ಎಂದು ಹೇಳುವರು. ಅತ್ಯುನ್ನತ ದಾನಗಳಲ್ಲಿ ಅನ್ನದಾನವೂ ಒಂದು ಎಂದು ಪುರಾಣಗಳು, ಇತಿಹಾಸಗಳು ಹೇಳಿರುವವು. ಭಕ್ತರಿಗೆ ಹಾಗೂ ಅತಿಥಿಗಳಿಗೆ ಭೋಜನ ನೀಡದೆ ಮಾಡುವ ಯಾವ ಯಜ್ಞವಾದರೂ ಅದು ಅಸಂಪೂರ್ಣವೆಂದು ಹೇಳುವರು. ದೇವಾಲಯಗಳಲ್ಲಿ ಹಾಗೂ ಆಶ್ರಮಗಳಲ್ಲಿ ಅನ್ನ ದಾನ ಮಾಡುವುದು ಅನಾದಿಯಿಂದ ಬರುತ್ತಿರುವ ಆಚಾರ. ಈ ರೀತಿಯಾದ ಅನ್ನ ದಾನ ಕಾರ್ಯಕ್ರಮಗಳ ಮುಖಾಂತರ ಭಗವಂತನು ಹೆಚ್ಚಾಗಿ ಪ್ರಸನ್ನ ವಾಗುವನೆಂದು ಹೇಳಲಾಗಿದೆ.
ಭಾರತೀಯರು *ಅನ್ನವನ್ನು ಪರಬ್ರಹ್ಮದೊಂದಿಗೆ ಹೋಲಿಸುತ್ತಾ ' ಅನ್ನಂ ' ಪರಬ್ರಹ್ಮ ಸ್ವರೂಪಂ ' ಎಂದು ಭಾವಿಸಿದ್ದರು.* ಅನ್ನದ ಕಾರಣದಿಂದಾಗಿಯೇ ನಮ್ಮ ಜೀವನ ನಾಟಕ ಭೂಮಿಯ ಮೇಲೆ ಸಾಗುತ್ತಿದೆ. *ಜೀವನದಲ್ಲಿ ಒಂದು ವ್ಯಕ್ತಿಗೆ ಏನಿಲ್ಲವೆಂದರೂ ಬದುಕುಬಲ್ಲ. ಆದರೆ ಅನ್ನ ವಿಲ್ಲದಿದ್ದರೆ ಬದುಕಲಾರ.* ಆದ್ದರಿಂದ ಅನ್ನದಾನ ಮಹೋನ್ನತವಾದುದು. ಅನ್ನ ಇಲ್ಲದವನಿಗೆ ನೀಡಿದ ಅನ್ನವೇ ಅನ್ನ ದಾನವಾಗುತ್ತದೆಂದು ನಾವು ಇಲ್ಲಿ ಅರ್ಥ ಮಾಡಿಕೊಳ್ಳಬೇಕು. *ಅನ್ನ ದಾನದಲ್ಲಿ ಪಾಲ್ಗೊಂಡರೆ ಪುಣ್ಯ ಬರುತ್ತದೆಂದು, ಇರುವವನು ಸಹ ಊಟ ಮಾಡುವುದಕ್ಕೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವರು. ಇದು ಸರಿಯಾದುದಲ್ಲ.* *ಅನ್ನ ದಾನದಲ್ಲಿ ಅನ್ನವನ್ನು ಸ್ವೀಕರಿಸಿದ ವರು ನೆಲದ ಮೇಲೆ ಎಂಜಲು ಅಗುಳುಗಳನ್ನು ಹಾಗೂ ಊಟ ಮಾಡಿದ ಎಲೆಯನ್ನು ಆತನೇ ತೆಗೆದು ಹಾಕಬೇಕು, ಆದರೆ ಅನ್ನ ನೀಡಿದವರ ಕೈಯಲ್ಲಿ ಆ ಕೆಲಸ ಮಾಡಿಸಬಾರದು.* ಹಾಗೆಯೇ ಅನ್ನ ನೀಡಿದವರು ಈ ಕೆಲಸವನ್ನು ಮಾಡಬಾರದು , ಹಾಗೆ ಮಾಡಿದರೆ ತಿಂದವನಿಗೆ ಹಾನಿಕರ ಎಂದು ಹೇಳಲಾಗಿದೆ.*
ಇದಕ್ಕೆ ವಿರುದ್ಧವಾಗಿ ಬಂಧು ಮಿತ್ರರಿಗೆ, ಸಾಧು ಸನ್ಯಾಸಿಗಳಿಗೆ ಹಾಗೂ ಮಹಾತ್ಮರಿಗೆ ಅನ್ನ ನೀಡಿದವನು ಅವರ ಅಗಳುಗಳನ್ನು ಪಾತ್ರೆಗಳನ್ನು ಎತ್ತಿ ಹಾಕುವುದು, ತಟ್ಟೆಗಳನ್ನು ತೊಳೆಯುವುದು, ಶುಚಿ ಮಾಡುವುದು ಸರಿಯಾದುದು, ಅತಿಥಿಗಳ ಕೈಯಲ್ಲಿ ಮಾಡಿಸಿದರೆ ಅತಿಥೇಯರಿಗೆ ಹಾನಿಕರ ಎಂದು ಹೇಳಲಾಗಿದೆ.
*'ಅನ್ನವೋ ರಾಮಚಂದ್ರ " ಎನ್ನುವವರೇ ನಮ್ಮ ದೇಶದಲ್ಲಿ ಹೆಚ್ಚಿನದಾಗಿ ಇರುವರು.* ಆದ್ದರಿಂದ ಅಂತಹವರಿಗೆ ಅನ್ನ ನೀಡಲು ಹಿಂದೆ ಹೋಗ -ಬಾರದು. *ಒಂದೇ ದಿನ ಗುಂಪುಗಳಾಗಿ ಜನರನ್ನು ಕರೆದು ರಾಶಿ ರಾಶಿಯಾಗಿ ಅನ್ನ ನೀಡುವುದೇ ಅನ್ನದಾನ ಎಂದು ಭಾವಿಸಬಾರದು.* ಮೊದಲು ಮನೆಯ ಮುಂದೆ ಬಂದ ಭಿಕ್ಷುಕನಿಗೆ ಒಬ್ಬ ವ್ಯಕ್ತಿ ತಿನ್ನುವಷ್ಟು ಅನ್ನವನ್ನು ದಾನ ಮಾಡಿರಿ. ಹಾಗೆ ಮನುಷ್ಯರಿಗೆ ಅಲ್ಲದೆ ನಾಯಿಗಳು, ಕಾಗೆಗಳು, ಮಕ್ಕಳು, ಇರುವೆಗಳು, ಪಕ್ಷಿಗಳು ಮುಂತಾದ ಅನೇಕವುಗಳಿಗೂ ಸಹ ಆಹಾರ ನೀಡುವುದು ಒಂದು ಯಜ್ಞವೇ ಆಗುತ್ತದೆ. ' ಸಾಧುಗಳಿಗೆ ಭಕ್ತರಿಗೆ ಹಾಗೂ ಸಾಧಕರಿಗೆ ಊಟ ನೀಡುವುದು ಬಹಳ ಫಲಯುಕ್ತವಾದ ಕೆಲಸ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು