Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೮೨: ದೇವರಿಗೆ ದೀಪವನ್ನು ಬೆಳಗಿಸುವ ವಿಧಾನವೇನು ?

Posted date: 17 Mar, 2020

Powered by:     Yellow and Red

ತಾಳೆಯೋಲೆ ೧೮೨: ದೇವರಿಗೆ ದೀಪವನ್ನು ಬೆಳಗಿಸುವ ವಿಧಾನವೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ದೇವರಿಗೆ ದೀಪವನ್ನು ಬೆಳಗಿಸುವ ವಿಧಾನವೇನು ?


ದೇವರ ವಿಗ್ರಹಕ್ಕೆ ಇಲ್ಲವೆ ಪಟಕ್ಕೆ ಧೂಪ ದೀಪ ವೇದ್ಯಗಳನ್ನು ಸಮರ್ಪಿಸುವುದು ನಮ್ಮ ಆರಾಧನಾ ಪದ್ಧತಿ. ಉದಯದಲ್ಲಿ ಬೆಳಗಿಸುವ ದೀಪಕ್ಕಿಂತ ಪ್ರದೋಷ ಕಾಲದಲ್ಲಿ ಬೆಳಗಿಸುವ ದೀಪ ಅತ್ಯಂತ ಮಂಗಳಕರವಾಗಿರುವುದೆಂದು ಹಿರಿಯರು ಹೇಳಿರುವರು. ಪೂಜೆಯಲ್ಲಿ ಅತ್ಯಂತ ಮುಖ್ಯವಾದುದು ದೀಪ. ಆನಂತರ ಧೂಪ | ಹೂವು, ಹರಿಷಿಣ ಕುಂಕುಮ , ಗಂಧ , ಚಂದನ ಮತ್ತು ವಿಭೂತಿ.


ತೆಂಗಿನ ಕಾಯಿ, ಬಾಳೆಹಣ್ಣು, ಅಡಿಕೆ ವೀಳ್ಯದೆಲೆ , ಮಂಗಳದಾರತಿ ಮುಂತಾದುವ ಕ್ರಮವಾಗಿ ಪ್ರಧಾನ್ಯತೆಯನ್ನು ಹೊಂದಿರುವವು. *ಈ ಪೂಜಾ ದ್ರವ್ಯಗಳೆಲ್ಲವೂ ಔಷಧೀಯ ಗುಣವನ್ನು ಹೊಂದಿರತಕ್ಕಂತಹವು.* ಆದ್ದರಿಂದ ಅವುಗಳ ಮೇಲೆ ಅನುಕೂಲ ಶಕ್ತಿ ಪ್ರಭಾವವು ತಕ್ಷಣ ಬೀಳುತ್ತದೆ. ಅಷಟೋತ್ತರಗಳು ಹಾಗೂ ಶ್ಲೋಕಗಳು ನಮ್ಮಲ್ಲಿ ಅಡಗಿರುವ ದೈವೀ ಶಕ್ತಿಗಳನ್ನು ಎಚ್ಚರಿಸಿ ನಮಗೆ ಮಾನಸಿಕ ಶಾರೀರಕ ಶುಭವನ್ನುಂಟು ಮಾಡುತ್ತವೆ. ಈ ರೀತಿ ನಾವು ಮಾಡುವ ಪೂಜೆ ದೇವರನ್ನು ಪ್ರಸನ್ನನಾಗಿ ಮಾಡಿಕೊಂಡು ಆತನ ಆಶೀರ್ವಾದಗಳನ್ನು ಹೊಂದುವ ಹಾಗೆ ಮಾಡುವುದಲ್ಲದೆ ಪೂಜೆಗಾಗಿ ನಾವು ಮಾಡುವ ಕ್ರಿಯೆಗಳೆಲ್ಲವೂ ನಮಗೆ ಶುಭವನ್ನುಂಟು ಮಾಡುತ್ತವೆ.


*ದೀಪವನ್ನು ನೆಲದ ಮೇಲೆ ಏನೂ ಇಲ್ಲದೆ ಇಟ್ಟು ಬೆಳಗಬಾರದೆಂದು ಹೇಳಲಾಗಿದೆ. ಬಾಳೆ ಎಲೆಯನ್ನಾಗಲೀ ತಟ್ಟೆಯನ್ನಾಗಲೀ ನೀರಿನಿಂದ ಶುಭ್ರ ಮಾಡಿದ ನೆಲದ ಮೇಲೆ ದೀಪವನ್ನು ಬೆಳಗಬಹುದು.* ಇನ್ನು ಮನೆಯಲ್ಲಿ ದೈವತಾರಾಧನೆಗೆ ನಾವು ಪ್ರತ್ಯೇಕ ಸ್ಥಾನವನ್ನು ಏರ್ಪಾಟು ಮಾಡಿಕೊಳ್ಳುತ್ತೇವೆ. ಆ ಸ್ಥಾನವು ನೆಲದಿಂದ ಸ್ವಲ್ಪ ಮೇಲಿರುವಂತೆ ನೋಡಿಕೊಳ್ಳಬೇಕು. ನೆಲಕ್ಕೆ ತಾಕುವ ಹಾಗೆ ಪೂಜಾ ದ್ರವ್ಯಗಳನ್ನು ಹಾಗೂ ಪವಿತ್ರ ಗ್ರಂಥಗಳನ್ನು ಇರಿಸಬಾರದೆಂದು ಹೇಳಲಾಗಿದೆ.


*ದೀಪಕ್ಕೆ ಹಸುವಿನ ತುಪ್ಪವಾಗಲಿ ಇಲ್ಲವೆ ಕಪ್ಪೆಳ್ಳಿನ ಎಣ್ಣೆಯನ್ನು ಬಳಸುವುದು ಸರ್ವ ಶ್ರೇಷ್ಠ , ಉದಯದಲ್ಲಿ ಪೂಜೆ ಮಾಡುವಾಗ ದೀಪದ ಮುಖವು ಪೂರ್ವಾಭಿಮುಖವಾಗಿರಬೇಕು. ಸಂಜೆ ಪೂಜೆಯಲ್ಲಿ ಪಶ್ಚಿಮಾಭಿಮುಖವಾಗಿರಬೇಕು. ಮೂರು ಬತ್ತಿಗಳ ದೀಪವನ್ನು ಬೆಳಗಿದರೆ ಪೂರ್ವ, ಪಶ್ಚಿಮ ಮತ್ತು ಉತ್ತರಾಭಿ ಮುಖವಾಗಿ ಬತ್ತಿಗಳನ್ನು ಬೆಳಗಬೇಕು. ಇನ್ನು ಐದು ಬತ್ತಿಗಳನ್ನು ಬೆಳಗಿಸಿದರೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಈಶಾನ್ಯಾಭಿಮುಖವಾಗಿ ಬೆಳಗಿಸಬೇಕು.* ಮೊದಲ ದೀಪವನ್ನು ಮುಂದಿನ ಗಡಿಯಾರದ ದಿಕ್ಕಿಗೆ ಬೆಳಗಿಸಿ ನಂತರ ಗಡಿಯಾರದ ಮುಳ್ಳು ತಿರುಗುವ ಹಾಗೆ ಬಲಗಡೆಯಿಂದ ಎಡಗಡೆಗೆ ಬೆಳಗಿಸಿಕೊಂಡು ಬರಬೇಕು.


ಈ ರೀತಿ ಬೆಳಗಿಸಿದ ದೀಪವನ್ನು ನಂದಿಸುವ ಪ್ರಮೇಯ ಉಂಟಾದಲ್ಲಿ ಬಾಯಿಂದ ದೀಪವನ್ನು ಆರಿಸಬಾರದು. ಬತ್ತಿಯನ್ನು ಎಣ್ಣೆಯೊಳಗೆ ಜಾರಿಸಿದರೆ ಅಥವಾ ಎಣ್ಣೆಯನ್ನು ಉರಿಯುತ್ತಿರುವ ಬತ್ತಿಯ ಮೇಲೆ ಹಾಕಿದರೆ ದೀಪ ನಂದಿ ಹೋಗುತ್ತದೆ. ದಕ್ಷಿಣ ಭಾರತದಲ್ಲಿ ಕೆಲವು ಕಡೆ ಬೆಳಗಿಸಿದ ದೀಪ ನಂದಿ ಹೋಗುವ ಮೊದಲೇ ಅದನ್ನು ನಂದಿಸುತ್ತಾರೆ. ಆದರೆ ಸಾಮಾನ್ಯವಾಗಿ ದೀಪವು ತನ್ನಷ್ಟಕ್ಕೆ ತಾನೇ ನಂದಿ ಹೋಗುವ ತನಕ ಯಾರೂ ಅದನ್ನು ನಂದಿಸುವುದಿಲ್ಲ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑