ತಾಳೆಯೋಲೆ ೧೮೩: ಪ್ರಾಚೀನ ಭಾರತದಲ್ಲಿ ವಿವಾಹವು ಎಷ್ಟು ವಿಧಗಳಾಗಿದ್ದವು
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಪ್ರಾಚೀನ ಭಾರತದಲ್ಲಿ ವಿವಾಹವು ಎಷ್ಟು ವಿಧಗಳಾಗಿದ್ದವು ?
ಸ್ಥೂಲವಾಗಿ ವಿವಾಹಗಳನ್ನು ಪ್ರಾಚೀನರು ಎಂಟು ವಿಧಗಳಾಗಿ ಗುರ್ತಿಸಿರುವರು. ಬ್ರಹ್ಮಂ, ದೈವಂ ಲ, ಆರ್ಷಂ, ಪ್ರಜಾಪತ್ಯಂ ಗಂಧರ್ವಂ, ಅಸುರಂ, ರಾಕ್ಷಸಂ ಹಾಗೂ ಪೈಶಾಚಿಕರು ಇವು ಈ ಎಂಟು ವಿಧಗಳ ವಿವಾಹಗಳು. *ಬ್ರಹ್ಮ* ಪದ್ದತಿಯಲ್ಲಿ ತಂದೆಯೊಬ್ಬ ತನ್ನ ಮಗಳನ್ನು ಬ್ರಹ್ಮಚಾರಿಗೆ (ವಿದ್ಯಾಭ್ಯಾಸ ಆದ ನಂತರ) ಕೊಟ್ಟು, ಆತನಿಂದ ಏನೂ ಆಶಿಸದೆ ಮದುವೆ ಮಾಡಿಸಿಕೊಡುವುದು. *ದೈವ* ದಲ್ಲಿ ಯಾಗವನ್ನು ನಿರ್ವಹಿಸುವ ಕಾಲದಲ್ಲಿ ಯಾಗಕ್ಕಾಗಿ ಪೂಜೆ ಪುನಸ್ಕಾರಗಳನ್ನು ಮಾಡಿದ ಪೂಜಾರಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಕೊಡುವುದು. *ಆರ್ಷ* ದಲ್ಲಿ ಮದುಮಗನಿಂದ ಮದು ಮಗಳ ತಂದೆಗೆ ಕಾಣಿಕೆಯಾಗಿ ಒಂದು ಹಸುವನ್ನು ಬಹೂಕರಿಸುವುದು. *ಪ್ರಜಾಪತ* ದಲ್ಲಿ ತಂದೆ ತನ್ನ ಮಗಳಿಗೆ ಆಶೀರ್ವಾದವನ್ನು ಮಾಡಿ ಅರ್ಹವಾದವನಿಗೆ ಕೊಟ್ಟು ಮದುವೆ ಮಾಡಿಕೊಡುವುದು. *ಗಂಧರ್ವ* ಇದು ಒಂದು ರೀತಿಯ ಪ್ರೇಮ ವಿವಾಹ. *ಅಸುರ* ಇದರಲ್ಲಿ ಹೆಂಡತಿಯಾಗಿ ಮಾಡಿಕೊಳ್ಳುವುದಕ್ಕೆ ಹೆಣ್ಣಿನ ತಂದೆಗೆ ಬೇಕಾಗಿರುವಷ್ಟು ಹಣ ನೀಡಿ ಮದುವೆ ಮಾಡಿಕೊಳ್ಳುವುದು. *ರಾಕ್ಷಸ* *ಈ ವಿಧಾನದಲ್ಲಿ ಹೆಣ್ಣಿನ ಇಷ್ಟಾ ಇಷ್ಟಗಳನ್ನು ಗಮನಿಸದೆ ಬಲವಂತವಾಗಿ ಮದುವೆ ಮಾಡಿಕೊಳ್ಳುವುದನ್ನು ರಾಕ್ಷಸ ವಿಧಾನ ಎಂದು ಕರೆಯುತ್ತಾರೆ.* ಈಗಿನ ಕಾಲದಲ್ಲಿ ಹೆಣ್ಣನ್ನು ಯಾವುದೋ ವಿಧದಲ್ಲಿ ಭಯ ಹಿಡಿಸಿಯೋ , ಬೆದರಿಸಿಯೋ ಪ್ರೀತಿಸುತ್ತಿದ್ದೇನೆಂದು ಹೇಳಿ, ಮದುವೆಗೆ ಸಿದ್ದವಾಗದಿದ್ದರೆ ಸಾಯಿಸುತ್ತೇನೆಂದು ಹೀಗೆ ಅನೇಕ ರೀತಿಗಳಲ್ಲಿ ಪ್ರೇಮದ ಹೆಸರಲ್ಲಿ ಹೆಣ್ಣಿಗೆ ತೊಂದರೆ ನೀಡಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೇ ಆಗಿನ ಕಾಲದಲ್ಲಿ *ರಾಕ್ಷಸ* ಎನ್ನುತ್ತಿದ್ದರು.
ಜ್ಞಾನವಿಲ್ಲದೆ ಇರುವ ಸ್ಥಿತಿಯಲ್ಲಿ ಬಲವಂತವಾಗಿ ಸ್ತ್ರೀಯೊಬ್ಬಳನ್ನು ಆಕೆಯ ಇಷ್ಟಾ ಇಷ್ಟತೆಯನ್ನು ಕಡೆಗಣಿಸಿ ಬಲವಂತವಾಗಿ ಮದುವೆ ಮಾಡಿಕೊಳ್ಳುವುದನ್ನು ಪೈಶಾಚಿಕ ವಿವಾಹವನ್ನುತಿದ್ದರು. ಇಂದಿನ ಕಾಲದಲ್ಲಿ ಒಂದು ಹೊಸ ಪದ್ದತಿಯನ್ನು ನಾವು ಕಂಡು ಹಿಡಿದಿದ್ದೇವೆ. ಅದೇ *ವರದಕ್ಷಿಣೆ ಮದುವೆ* ಈ ಮದುವೆಯಲ್ಲಿ ಹೆಣ್ಣಿನ ತಂದೆ ನೋಟುಗಳ ಕಂತೆಯ ವರ್ಷವನ್ನು ಸುರಿಸಬೇಕು. ಅಗತ್ಯ ಬಿದ್ದರೆ ಮದುವೆಯಾದ ನಂತರವೂ ಸಹ *ಕನಕ ವರ್ಷ* ವನ್ನು ಸುರಿಸಬೇಕಾಗುತ್ತದೆ. ಹೀಗೆ ಸುರಿಸದಿದ್ದರೆ ಹೆಣ್ಣಿಗೆ ವರದಕ್ಷಿಣೆಯ ಸಾವು. ಇದು ಇಂದಿನ ನಮ್ಮ ವಿವಾಹ ಧರ್ಮವಾಗಿದೆ. *ಇನ್ನು ಹೆಣ್ಣಿನ ತಂದೆ ತಾಯಿಯರು ಸಹ ಇಂದು ಯಾರ ಹತ್ತಿರ ಹೆಚ್ಚು ಹಣ ಮತ್ತು ಅಂತಸ್ತು ಇರುವುದೋ ಅವರಿಗೆ ಕೊಟ್ಟು ವಿವಾಹವನ್ನು ಮಾಡುತ್ತಿರುವರು.* ಇಂದು ವಿವಾಹ ವ್ಯವಸ್ಥೆಯಲ್ಲಿ ಹೆಣ್ಣಿನ ಕಡೆಯಲ್ಲಾಗಲೀ , ಗಂಡಿನ ಕಡೆಯಲ್ಲಾ ಗಲೀ ನೋಡುವುದು ಒಂದೇ ಒಂದು ! ಅದು ಹಣ ! ಇಂದಿನ ನಮ್ಮ ಕಾಲಕ್ಕೆ *ಧನ ಪೈಶಾಚಿಕ ರಾಕ್ಷಸ ಅಸುರ ವಿವಾಹ* ಎಂದು ಹೆಸರಿಟ್ಟರೆ ಚನ್ನಾಗಿರುತ್ತದೆ ಅಲ್ಲವೇ ! ?
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು