ತಾಳೆಯೋಲೆ ೨೧೧: ಜೀವಾತ್ಮ, ಪರಮಾತ್ಮ ಮತ್ತು ಮೋಕ್ಷ ಎಂದರೇನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಜೀವಾತ್ಮ, ಪರಮಾತ್ಮ ಮತ್ತು ಮೋಕ್ಷ ಎಂದರೇನು ?
ಪ್ರತಿ ಮನುಷ್ಯನ ( ಜೀವಾತ್ಮ ) ಅಂತಿಮ ಲಕ್ಷ್ಯ ಮೋಕ್ಷವನ್ನು ಹೊಂದುವುದು. ಪರಮಾತ್ಮನ ತೇಜಸ್ಸು ಸೃಷ್ಟಿ ಪ್ರಾರಂಭವಾದಾಗ ಪ್ರಕೃತಿಯ ಪ್ರಭಾವದಿಂದ ಅನೇಕ ಆತ್ಮಗಳಾಗಿ ಪ್ರತಿಬಿಂಬಿಸುತ್ತದೆ. ಹೀಗೆ ಅನೇಕವಾಗಿರುವ ಆತ್ಮಗಳನ್ನೇ ಜೀವಾತ್ಮಗಳೆಂದು ಕರೆಯುತ್ತೇವೆ. ಜೀವಾತ್ಮ ವಾಸ್ತವವಾಗಿ ಪರಮಾತ್ಮನ ಪ್ರತಿಬಿಂಬವೇ. ಹೀಗೆ ಪದಾರ್ಥ ( ದೇಹ ) ದೊಂದಿಗೆ ಏಕವಾದ ಜೀವಾತ್ಮ ತನ್ನ ನಿಜವಾದ ಸ್ಥಳವನ್ನು ಮರೆತು , ಪದಾರ್ಥವನ್ನೇ ( ದೇಹವನ್ನೆ ) ತಾನೆಂದು ಭ್ರಮಿಸಿ ಅನೇಕ ಸಂಸ್ಕಾರಗಳನ್ನು ಅಭಿವೃದ್ಧಿ ಮಾಡಿಕೊಂಡು, ಹುಟ್ಟುತ್ತಾ, ಸಾಯುತ್ತಾ ( ದೇಹ - ಗಳನ್ನು ಬದಲಾಯಿಸುತ್ತಾ ) ಗುರಿಯನ್ನು ಮರೆತು ತಿರುಗುತ್ತಿರುತ್ತದೆ. ಹೀಗೆ ಜೀವಾತ್ಮ ಮಾರ್ಗ ತಪ್ಪಿ ತಿರುಗಾಡುವುದನ್ನೇ ಸಂಸಾರ ಎನ್ನುವರು.
ಇಂತಹ ಜೀವಾತ್ಮ ಮಾನವ ಜನ್ಮ ಎತ್ತಿ ತನ್ನ ನಿಜ ತತ್ವವನ್ನು ಗುರುಗಳ ಬೋಧನೆಗಳಿಂದ ಅರ್ಥ ಮಾಡಿಕೊಂಡು, ಭೌತಿಕವಾದ ಹಾಗೂ ಮಾನಸಿಕವಾದ ಬಂಧಗಳನ್ನು ತಪೋ ಸಾಧನೆಗಳಿಂದ ಬಂಧಮುಕ್ತವಾಗಿ ಪರಮಾತ್ಮನಲ್ಲಿ ತನ್ನ ಸ್ಥಳವನ್ನು ಸ್ಥಿರ ಮಾಡಿಕೊಳ್ಳುವುದನ್ನೇ ಮೋಕ್ಷ ಎನ್ನುವರು.
ಹೀಗೆ ಮೋಕ್ಷವನ್ನು ಹೊಂದುವುದು ಕೇವಲ ವಿವೇಕವಂತನಾದ ಮನುಷ್ಯನಿಗೆ ಮಾತ್ರ ಸಾಧ್ಯ. ಸದಾ ಸ್ಥಾನವನ್ನು ಹೊಂದಿ ತನ್ನ ತತ್ವಗಳಾದ ಪರಮ ಆನಂದವನ್ನು ಹೊಂದುತ್ತಾ ಪ್ರಕೃತಿಗೆ ಅತೀತವಾಗಿ ಇರುವುದೇ ಪರಮಾತ್ಮ. ಆದ್ದರಿಂದ ಪ್ರಕೃತಿಗೆ ಅತೀತವಾದ ಸ್ಥಿತಿಯನ್ನು ಸೇರಿದ ಮುಕ್ತಿಯನ್ನು ಹೊಂದಿದ ಆತ್ಮ ಮತ್ತೆ ಜನ್ಮಿಸುವುದಿಲ್ಲ. ಕಷ್ಟಗಳ ಪಾಲಾಗುವುದಿಲ್ಲ. ನಿತ್ಯಾನಂದವನ್ನು ಶಾಶ್ವತವಾಗಿ ಅನುಭವಿಸುತ್ತದೆ. ಸರ್ವ ವಿಧ ಭಗವತ್ ಸಾಧನೆಗಳ ಪರಮ ಲಕ್ಷ್ಯ ಜೀವಾತ್ಮ ತನ್ನ ನಿಜ ಸ್ಥಿತಿಯಾದ ಪರಮಾತ್ಮನ ಸ್ಥಾನವನ್ನು ಹೊಂದುವುದೆ ?
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು