ತಾಳೆಯೋಲೆ ೨೧೨: ಕಾಮವನ್ನು, ಕ್ರೋಧವನ್ನು ಹಾಗೂ ಅಜ್ಞಾನವನ್ನು ಏಕೆ ಹೋಗಲಾಡಿಸಬೇಕು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಕಾಮವನ್ನು, ಕ್ರೋಧವನ್ನು ಹಾಗೂ ಅಜ್ಞಾನವನ್ನು ಏಕೆ ಹೋಗಲಾಡಿಸಬೇಕು ?
ಹುಟ್ಟಿದವನು ನಾನಾ ರೀತಿಯ ಕಷ್ಟಗಳನ್ನು ಗತ ಜನ್ಮಗಳ ಪಾಪ ಫಲವಾಗಿ ಅನುಭವಿಸದೆ ತಪ್ಪದು. ಜನ್ಮಕ್ಕೆ ಮೂಲ ಕಾರಣ ಕೋರಿಕೆ ( ಕಾಮ ). ಕೋರಿಕೆಗಳು ತಾನು ಆಶಿಸಿದ ವಿಧವಾಗಿ ಫಲಿಸದೆ ಹೋಗುವುದರಿಂದ ಕ್ರೋಧ ( ಕೋಪ, ಅಸೂಯೆ, ದ್ವೇಷ ಮುಂತಾದುವು ) ಉಂಟಾಗುವುದು. ಹೀಗೆ ಕಾಮ ಕ್ರೋಧಗಳಿಂದ ಅಜ್ಞಾನವು ಬೆಳೆದು ಜ್ಞಾನ ದೃಷ್ಟಿ ಕಡಿಮೆಯಾಗುವುದು. ಆದ್ದರಿಂದ ಮಾನವರು ಕಾಮ ಕೋಧಗಳನ್ನು ಜಯಿಸಿದ ಹಾಗಾದರೆ ಭಕ್ತಿ ಶ್ರದ್ದೆಗಳು ಬೆಳೆದು ಈಶ್ವರ ಕಟಾಕ್ಷದಿಂದ ಬ್ರಹ್ಮ ಜ್ಞಾನವು ಉದಯಿಸುತ್ತದೆ. ಹೀಗೆ ಒಂದು ಜೀವಾತ್ಮ ಪರಮಾತ್ಮವಾಗಿ ಶಾಶ್ವತನಾಗಿ ಪರಮ ಗಮ್ಯವನ್ನು ಸೇರುವನು.
ಭೌತಿಕ ದೃಷ್ಟಿಯಲ್ಲಿ ನೋಡಿದಾಗ ಕಾಮವು ( ಸೆಕ್ಸ್ ಕೋರಿಕೆಗಳು ಹಾಗೂ ಇತರೆ ಕೋರಿಕೆಗಳು ) ಕೋರಿಕೆಗಳೇ ಕುದುರೆಗಳಾದರೆ ಧನದ ಹಿಂದೆ ಮನುಷ್ಯ ಬೆಂಬತ್ತಿ, ಅಂತಹ ಧನದಿಂದ ಕಂಠಪೂರ್ತಿ ಮದ್ಯವನ್ನು ಕುಡಿದು ಕಸಮಿಸಿದವರನ್ನು ಕಾಮಿಸಿ, ಶೀಲವನ್ನು ನಾಶ ಮಾಡಿ ಕೊಂಡು ಸರ್ವ ವಿಧಗಳಾಗಿ ಪತನವಾಗುವನುು. ಇಂತಹ ಮನುಜನು ತನ್ನ ಸರ್ವ ಧರ್ಮವನ್ನು ಮರೆತು ತನ್ನ ಭಾರ ಬಾಧ್ಯತೆಗಳನ್ನು ಮರೆತು, ತನ್ನ ಮೇಲೆ ಆಧಾರ ಬಿದ್ದವರಿಗೆ ಕಣ್ಣೀರನ್ನು ಉಳಿಸುವನು.
ಕ್ರೋಧದಿಂದ ಎಲ್ಲರಿಗೂ ಶತೃವಾಗುವನು ಹಾಗೂ ಅಪಕೀರ್ತಿ ಹೊಂದುವನು. ಇಂತಹ ಅಲ್ಪ ಗುಣಗಳಿಂದ ತಾತ್ಕಾಲಿಕ ಆವೇಶದಿಂದ ಎಷ್ಟೋ ಕಾಲದಿಂದ ಬಚ್ಚಿಟ್ಟ ಪುಣ್ಯವು ಭಸ್ಮವಾಗುವುದು. ಅವನನ್ನು ಅಜ್ಞಾನವು ಆವರಿಸಿ ಬ್ರಹ್ಮ ಜ್ಞಾನಕ್ಕೆ ದೂರ ಮಾಡಿ ನೀಚಯೋನಿಗಳಲ್ಲಿ ಜನ್ಮ ತಾಳಿಸುವುದು. ಆದ್ದರಿಂದ ಎಷ್ಟೋ ಜ್ಞಾನವಂತರಾದ ನಮ್ಮ ಪೂರ್ವಿಕರು ಕಾಮ ಕೋಧಗಳನ್ನು ಹತ್ತಿರ ಸೇರಿಸಬಾರದೆಂದು ನಮಗೆ ಸುಬೋಧೆ ಮಾಡಿರುವರು. ಮಾನವ ಜೀವನ ಪರಮಾರ್ಥವಾದ ಮೋಕ್ಷಕ್ಕೆ (ಆತ್ಮೋನ್ನತಿ) ಅಡ್ಡವಾಗುತ್ತಿರುವ ಸರ್ವ ದುರ್ಗುಣಗಳನ್ನು ನಾಶಪಡಿಸಿ ಶಾಶ್ವತ ಆನಂದವನ್ನು ಹೊಂದಬೇಕು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು