Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೨೩: ಆರೋಗ್ಯಕರವಾದ ಜೀವನವನ್ನು ಸಾಗಿಸುವುದಕ್ಕೆ ಎಂತಹ ನಿಯಮಗಳನ್ನು ಅನುಸರಿಸಬೇಕು ?

Posted date: 06 May, 2020

Powered by:     Yellow and Red

ತಾಳೆಯೋಲೆ ೨೨೩: ಆರೋಗ್ಯಕರವಾದ ಜೀವನವನ್ನು ಸಾಗಿಸುವುದಕ್ಕೆ ಎಂತಹ ನಿಯಮಗಳನ್ನು ಅನುಸರಿಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಆರೋಗ್ಯಕರವಾದ ಜೀವನವನ್ನು ಸಾಗಿಸುವುದಕ್ಕೆ ಎಂತಹ ನಿಯಮಗಳನ್ನು ಅನುಸರಿಸಬೇಕು ?


೧). ಪ್ರಯಾಣಿಸುವಾಗ ಓದುವುದರಿಂದ ಕಣ್ಣುಗಳಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಅದು ಕೂಡದು. ಹಾಗೆಯೇ ಬೆಳಕು ಕಡಿಮೆ ಅಥವಾ ಹೆಚ್ಚಿದ್ದರೂ ಓದಬಾರದು. 

೨). ನಿದ್ರಿಸುವಾಗ ಪಶ್ಚಿಮ ಅಥವಾ ಪೂರ್ವ ದಿಕ್ಕುಗಳಿಗೆ ತಲೆ ಇಟ್ಟು ನಿದ್ರಿಸುವುದು ಶುಭವು. ಉತ್ತರ, ಈಶಾನ್ಯ, ವಾಯುವ್ಯ, ಆಗ್ನೇಯ ಹಾಗೂ ನೈರುತ್ಯ ದಿಕ್ಕುಗಳಿಗೂ ತಲೆ ಇಟ್ಟು ಮಲಗುವುದು ಸರಿಯಾದುದಲ್ಲವೆಂದೂ ಹೇಳಲಾಗಿದೆ. 

೩). ಕೊಳೆತ ಅಥವಾ ಒಣಗಿದ ಹಣ್ಣುಗಳನ್ನು ತಿನ್ನುವುದು ಆರೋಗ್ಯ ವಾದುದಲ್ಲ.ಹಾಗೆಯೇ ಒಂದೇ ಸಾರಿ ವಿವಿಧ ಫಲಗಳನ್ನು ತಿನ್ನುವುದು ಸರಿಯಲ್ಲ. 

೪). ಊಟ ಮಾಡಿದ ತಕ್ಷಣ ಸ್ನಾನ ಮಾಡಬಾರದು. 

೫). ಅತಿಯಾಗಿ ಸಂಭೋಗಿಸುವುದು ಸರಿಯಲ್ಲ.


೬). ರಾತ್ರಿಯಲ್ಲಿ ನಿದ್ದೆ ಹೋಗದಿರುವಿಕೆ ಹಾಗೂ ಬೆಳಗ್ಗೆ ಬೇಗನೇ ನಿದ್ದೆಗೆ ಜಾರುವುದು ಸರಿಯಲ್ಲ.

೭). ಸದಾ ಏನಾದರೂ ತಿನ್ನುತ್ತಿರುವುದು ಸರಿಯಲ್ಲ. 

೮). ಅತಿಯಾಗಿ ಟೀ, ಕಾಫಿ ಇಲ್ಲವೇ ನಿಂಬೆ ರಸ ಕುಡಿಯುವುದು ಸಲ್ಲದು. ಅದು ಅತಿ ಮೂರ್ಖ ಲಕ್ಷಣ. 

೯). ಇತರರನ್ನು ಕಠಿಣ ಪದಗಳಿಂದ ಕೆಟ್ಟ ಮಾತು ಗಳಿಂದ ನಿಂದಿಸಬಾರದು. 

೧೦). ಇತರರಿಗೆ ಆಗುವ ಕೆಡಕನ್ನು ನೋಡಿ ಆನಂದ ಪಡಬಾರದು.ಇದು ರಾಕ್ಷಸ ಗುಣ. ಇತರರಿಗೆ ನಡೆದ ಕೆಟ್ಟ ಘಟನೆಗಳನ್ನು ಸಂಗ್ರಹಿಸುವುದು ತಕ್ಕದಲ್ಲ.


೧೧). ನಿನ್ನನ್ನು ನೀನು ನಿಂದಿಸಿ, ಹೀಯಾಳಿಸಿಕೊಳ್ಳಬಾರದು. ಹಾಗೆಯೇ ಅಹಂಭಾವದಲ್ಲಿ ನಿನ್ನ ಹೆಚ್ಚುಗಾರಿಕೆಯನ್ನು ಹೇಳಿಕೊಳ್ಳಬಾರದು.

೧೨). ಪುರುಷರು ತನಗಿಂತ ಹೆಚ್ಚು  ವಯಸ್ಸಿನ ಸ್ತ್ರೀಯನ್ನು ಮದುವೆ ಮಾಡಿಕೊಳ್ಳುವುದು. ಮತ್ತು ಸಂಭೋಗಿಸುವುದು ಸಲ್ಲದು. ತನಗಿಂತ ಶರೀರ ಪ್ರಮಾಣದಲ್ಲಿ (ಎತ್ತರ ಹಾಗೂ ಭಾರದಲ್ಲಿ) ಹೆಚ್ಚಿರುವ ಪುರುಷ, ಸ್ತ್ರೀ ಯೊಂದಿಗೆ ದೈಹಿಕ ಸಂಪರ್ಕ ಸಲ್ಲದು. 

೧೩). ಉಗುರು, ತಲೆಗೂದಲು ಹಾಗೂ ಬಟ್ಟೆಗಳನ್ನು ಕಚ್ಚುವುದು ಒಳ್ಳೆಯದಲ್ಲ. 

೧೪). ರಾತ್ರಿಯಲ್ಲಿ ಭೂಮಿಯನ್ನು  ಉಳುಮೆ ಮಾಡಬಾರದು. 

೧೫). ಗರ್ಭಿಣಿಯರು ಗ್ರಹದ ಸಮಯದಲ್ಲಿ  ಹೊರಗೆ ಹೋಗಬಾರದು.


೧೬). ಹತ್ತಿರದ ಬಂಧುಗಳು ಮರಣ ಹೊಂದಿದಾಗ ಮನೆಯಲ್ಲಿ ಶಿಶುವಿನ ಜನ್ಮ ಕಾಲದಲ್ಲಿ ನಿನಗೆ ಅನಾನುಕೂಲವುಂಟಾದಾಗ , ದೇವಾಲಯದ ಪ್ರವೇಶವನ್ನು ಹಿರಿಯರು ನಿಷೇದಿಸಿದಾಗ ದೇವಾಲಯಕ್ಕೆ ಹೋಗಬಾರದು.

೧೭). ಯಾವ ಮನೆಯಲ್ಲಿ ಸ್ತ್ರೀ ನಿರಂತರವೂ ಬಾದೆಪಡುತ್ತಾ ಅಳುವಳೋ ಹಾಗೆಯೇ ತಲೆ ಕೂದಲನ್ನು ಬಾಚಣಿಗೆಯಲ್ಲಿ ಅಲ್ಲದೆ ಎರಡೂ ಕೈಗಳಿಂದ ಬಾಚಿಕೊಳ್ಳುವಳೋ ಅಂತಹ ಮನೆಯಲ್ಲಿ ದರಿದ್ರವು ತಾಂಡವವಾಡುತ್ತದೆ.

೧೮). ಯಾರಾದರೂ ಪ್ರಯಾಣ ಮಾಡಿ ಹೋಗುತ್ತಿರುವಾಗ ಹಿಂದಿನಿಂದ ಕರೆಯಬಾರದು. ೧೯). ದೇವಾಲಯದ ಗಂಟೆಯಲ್ಲಿನ ಮಧ್ಯದ ಕಡ್ಡಿ, ಶಂಖದ ಹೊರಭಾಗವು, ಆಧ್ಯಾತ್ಮಿಕ ಗ್ರಂಥವು ಹಾಗೂ ಸ್ತ್ರೀಯ ಸ್ತನಗಳು ನೆಲವನ್ನು ತಾಕಬಾರದು. ೨೦). ಮಕ್ಕಳ ಮುಂದೆ ಜಗಳ ಮಾಡುವುದು ಅಸಭ್ಯಕರವಾದ ಮಾತುಗಳನ್ನು ಮಾತನಾಡುವುದು ಸಲ್ಲದು. ಅವರು ನೈತಿಕವಾಗಿ ಕೆಡುವ ಹಾಗೆ ಮಾಡುವ ಕೆಲಸಗಳನ್ನು ಮಕ್ಕಳು ಕೇಳುವುದು ಅಥವಾ ನೋಡುವುದು ಸಲ್ಲದು. ಮಕ್ಕಳಲ್ಲಿ ನ್ಯೂನತಾ ಭಾವವನ್ನು ಉಂಟು ಮಾಡುವ ಕೆಲಸಗಳನ್ನು ಮಾಡಬಾರದು.


೨೧). ಇತರರ ವಿಷಯಗಳಲ್ಲಿ ಅನಾವಶ್ಯಕವಾಗಿ ತಲೆ ಹಾಕುವುದು ಸಲ್ಲದು. ಅಸೂಯೆ, ದ್ವೇಷಗಳು ಹಾಗೂ ಮತ್ಸರಗಳ ಚರ್ಯೆಗಳು ವ್ಯಕ್ತಿಯೊಬ್ಬನ ಜೀವನವನ್ನು ನಾಶಪಡಿಸುತ್ತದೆ.

೨೨). ಪಿತೃ ದೇವತೆಗಳಿಗೆ ಪೂಜಾಧಿ ಕಾರ್ಯಕ್ರಮಗಳನ್ನು ಮಾಡುವಾಗ ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳಬಾರದು.

೨೩). ಪೂಜೆಗೆ ಬಳಸುವ ವಸ್ತುಗಳು ಸ್ಟೀಲ್ ನದ್ದಾಗಿರಬಾರದು. ಉತ್ತರ ದಿಕ್ಕಿಗೆ ದೇವರ ವಿಗ್ರಹಗಳು ಹಾಗೂ ದೇವರ ಪಟಗಳನ್ನು ಇಟ್ಟು ಪುರ್ವ ಅಥವಾ ಪಶ್ಚಿಮ ದಿಕ್ಕಿಗೆ ಕುಳಿತುಕೊಂಡು ಪೂಜೆ ಹಾಗೂ ನಮಸ್ಕಾರವನ್ನು ಮಾಡಬೇಕು. ದಕ್ಷಿಣ ದಿಕ್ಕಿಗೆ ಮುಖ ಮಾಡಿ ಪೂಜಿಸುವುದು ಸಲ್ಲದು . ಅದಕ್ಕಾಗಿ ದೇವರ ಮುಖ ಉತ್ತರಕ್ಕಿದರೆ ಈ ಸಮಸ್ಯೆ ಇರುವುದಿಲ್ಲ.

೨೪). ಯುದ್ಧಕ್ಕಾಗಿ ಶಂಖವನ್ನು ಊದುತ್ತಿರುವ ಶ್ರೀಕೃಷ್ಣನ ಹಾಗೂ ವೇಣುವನ್ನು ಊದುತ್ತಾ ಒಬ್ಬನೇ ನಿಂತಿರುವ ಶ್ರೀಕೃಷ್ಣನ ಪಟಗಳನ್ನಾಗಲೀ ವಿಗ್ರಹಗಳನ್ನಾಗಲೀ ಮನೆಯಲ್ಲಿಡಬಾರದು. ವೇಣುವನ್ನೂ ದುತ್ತಾ ಶ್ರೀಕೃಷ್ಣನು ಹಸುವಿನೊಂದಿ - ಗಾಗಲೀ ಇಲ್ಲವೇ ರಾಧೆಯ ಜೊತೆಗಾಗಲಿ ಇದ್ದರೆ ಅದನ್ನು ಪೂಜಿಸಬಹುದು.

೨೫). ಲಕ್ಷ್ಮೀದೇವಿ ಕುಳಿತುಕೊಂಡಿರುವ ಪಟವನ್ನೋ ಅಥವಾ ವಿಗ್ರಹವನ್ನೋ ಪೂಜಿಸಬಹುದು. ಆದರೆ ನಿಂತಿರುವ ಲಕ್ಷ್ಮೀ ದೇವಿಗೆ ಸಲ್ಲದೆಂದು ಹೇಳುವರು. ಕುಳಿತಿರುವ ಲಕ್ಷ್ಮಿದೇವಿಗೆ ಪೂಜೆ ಮಾಡಿದರೆ ಧನವು ಭಕ್ತನ ಮನೆಯಲ್ಲಿ ಸದಾ ಇರುವುದೆಂಬ ನಂಬಿಕೆ.

ಇವುಗಳು ನಮ್ಮ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿವೆ. 


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑