ತಾಳೆಯೋಲೆ ೨೫೦: ಅಗ್ನಿಹೋತ್ರ ಎಂದರೇನು ? ಅದರ ಉಪಯೋಗಗಳೇನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಅಗ್ನಿಹೋತ್ರ ಎಂದರೇನು ? ಅದರ ಉಪಯೋಗಗಳೇನು ?
ಅಗ್ನಿಹೋತ್ರ ಎನ್ನುವುದು ಗೃಹದಲ್ಲಿ ಮಾಡುವ ಯಾಗವಾಗಿರುವುದು. ಪರಿಸರವನ್ನು ಮತ್ತು ವಾತಾವರಣವನ್ನು ಅಗ್ನಿಯಿಂದ ಪವಿತ್ರ ಮಾಡುವುದು ಎಂದು ಇದರಲ್ಲಿನ ಶಾಸ್ತ್ರೀಯತೆ. ಈ ಯಾಗವನ್ನು ಸೂರ್ಯೋದಯ ಅಥವಾ ಸೂರ್ಯಾಸ್ತ ಸಮಯದಲ್ಲಿ ಮಾಡುವರು. ಈ ಯಾಗವನ್ನು ಮಾಡುವುದಕ್ಕೆ ಅರ್ಧ ತ್ರಿಕೋನದಲ್ಲಿರುವ ತಾಮ್ರದ ಪಾತ್ರೆಯನ್ನು ತಲೆ ಕೆಳಗೆ ಮಾಡಿ ಇಡುವರು. ಈ ಪಾತ್ರೆಯ ಮೂಲೆಗಳು ಪೂರ್ತಿಯಾಗಿ ಪಿರಮಿಡ್ ರೂಪದಲ್ಲಿ ಇರುವುದು. ಈ ಯಾಗದಲ್ಲಿ ಒಣಗಿದ ಹಸುವಿನ ಸಗಣಿ, ಒಣಗಿದ ಬಾಳೆ ಎಲೆ, ಬೇವಿನ ರೆಂಬೆಗಳು, ಮುಂತಾದ ಸಾಮಗ್ರಿಗಳನ್ನು ಹೋಮಕ್ಕೆ ಉಪಯೋಗಿಸುವರು. ಕರ್ಪೂರ ದ ಆರತಿಯಲ್ಲಿ ಅಗ್ನಿಯನ್ನು ಬೆಳಗಿಸುತ್ತಾರೆ.
ಹಸುವಿನ ತುಪ್ಪದಲ್ಲಿ ನೆನೆ ಹಾಕಿದ ಅಕ್ಕಿಯನ್ನು ಸಹ ಸ್ವಲ್ಪ ಮಟ್ಟಿಗೆ ಮಂತ್ರೋಚ್ಛಾರಣೆಯೊಂದಿಗೆ ಅಗ್ನಿಯಲ್ಲಿ ಹಾಕುತ್ತಾರೆ. ಹೀಗೆ ಅಗ್ನಿ ಉರಿಯುತ್ತಿದ್ದರೆ ಅದರಿಂದ ಹೊರಬರುವ ಹೊಗೆ ಹಾಗೂ ಸೂಕ್ಷ್ಮಾಯುವು ಅಲ್ಲಿನ ಪರಿಸರದಲ್ಲಿನ ಸರ್ವ ವಿಷ ಕ್ರಿಮಿಗಳನ್ನು, ಹಾಗೆಯೇ ಕೆಟ್ಟ ತತ್ವವನ್ನು ನಾಶ ಪಡಿಸುವ ವಾತಾವರಣವನ್ನು ಒಳ್ಖೆಯದಾಗಿ ಮಾಡುತ್ತದೆ. ಮುಂಜಾನೆ ಮಾಡುವ ಯಾಗಕ್ಕೆ ಹಾಗೂ ಸಂಜೆ ಮಾಡುವ ಯಾಗಕ್ಕೆ ಉಪಯೋಗಿಸುವ ದಿವ್ಯ ಮಂತ್ರಗಳು ಬೇರೆ ಬೇರೆಯಾಗಿರುತ್ತವೆ.
ಕೇವಲ ಮೂರು ನಿಮಿಷಕ್ಕೆ ಈ ಶುಭಕಾರ್ಯವು ಪೂರ್ತಿ ಆಗಬಹುದು. ಆದರೆ ಇಂತಹ ಯಾಗಕ್ಕೆ ಉಚ್ಚರಿಸುವ ಮ.ಮಂತ್ರಗಳು ಶ್ರದ್ಧಾ ಭಕ್ತಿಗಳಿಂದ ಸಕ್ರಮವಾಗಿ ಪಠಣ ಮಾಡಬೇಕು. ಈ ಕಾರ್ಯವನ್ನು ಮಾಡುತ್ತಿರುವಾಗ ಕುಟುಂಬದ ಸಭ್ಯರು ಅಲ್ಲಿ ಭಕ್ತಿ ಭಾವನೆಯಿಂದ ಕುಳಿತಿರುವರು. ಇಂತಹ ಯಾಗಕ್ಕೆ ಉಪಯೋಗಿಸುವ ಕುಂಡವನ್ನು ಮಧ್ಯದಲ್ಲಿ ಕದಲಿಸದೆ ಅದರಲ್ಲಿರುವ ಸಾಮಗ್ರಿಗಳೆಲ್ಲವೂ ಭಸ್ಮವಾಗುವವರೆಗೂ ಕಾಯುತ್ತಿರಬೇಕು. ಇಂತಹ ಭಸ್ಮವನ್ನು ಗಿಡಗಳಿಗೆ ಗೊಬ್ಬರವಾಗಿ ಉಪಯೋಗಿಸಿದರೆ ಅಧಿಕ ಇಳುವರಿಯನ್ನು ಪಡೆಯಬಹುದು.
ತಾಮ್ರದ ಪಾತ್ರೆಯ ಪ್ರತ್ಯೇಕ ಗುಣವೂ ಸಹ ಶುಭ ಶಕ್ತಿಗಳನ್ನು ಸೂರ್ಯ ಚಂದ್ರಾದಿಗಳಿಂದ ಗ್ರಹಿಸುತ್ತದೆ. ಆ ಪಾತ್ರೆಯಲ್ಲಿ ಅಗ್ನಿಯ ಇಂತಹ ಚರ್ಯೆಗಳಿಗೆ ಸಹಾಯವಾಗುವುದು. ಒಂದು ಬಾರಿ ಉಪಯೋಗಿಸಿದ ಪಾತ್ರೆಯನ್ನೇ ಮತ್ತೆ ಮತ್ತೆ ಈ ಯಾಗಕ್ಕೆ ಉಪಯೋಗಿಸಿದರೆ ಹೆಚ್ಚಿನ ಶಕ್ತಿವಂತವಾಗಿ ಕೆಲಸ ಮಾಡುತ್ತದೆ. ಹಸು ಸಗಣಿಯಲ್ಲಿನ ಅನೇಕ ಔಷಧ ಗುಣಗಳು ಈ ಯಾಗದಲ್ಲಿ ತನ್ನ ಪ್ರಭಾವವನ್ನು ತೋರಿಸುತ್ತದೆ.
ಈ ಯಾಗದ ಪ್ರಭಾವವು ೮೦೦ ಚದರ ಅಡಿ ತನಕ ವ್ಯಾಪಿಸಿ ಪರಿಸರವನ್ನು ಪವಿತ್ರವನ್ನಾಗಿ ಮಾಡುತ್ತದೆ. *ಪೂನಾ ಗೆ ಸೇರಿದ ಫರ್ ಘೋಸಮ್ ಕಾಲೇಜಿನ ಅಣುಜೀವಿ ಶಾಸ್ತ್ರ ವಿಭಾಗದವರು ನಿರ್ವಹಿಸಿದ ಇಂತಹ ಯಾಗವು ವಾತಾವರಣದಲ್ಲಿನ ಶೇ ೯೭ ರಷ್ಟು ವಿಷ ಕ್ರಿಮಿಗಳನ್ನು ನಾಶ ಮಾಡಿದೆಯೆಂದು ಪ್ರಯೋಗಾತ್ಮಕವಾಗಿ ನಿರೂಪಿಸಿರುವರು.*
ಈ ಅಗ್ನಿ ಹೋತ್ರ ಯಾಗವು ಕುಟುಂಬ ಕ್ಷೇಮವನ್ನೇ ಅಲ್ಲದೇ ತಮ್ಮ ಸುತ್ತ ಮುತ್ತಾ ಇರುವವರಿಗೂ ಆರೋಗ್ಯಕರವಾದ ವಾತಾವರಣವನ್ನು ನೀಡಿ ಒಳ್ಳೆಯದನ್ನುಂಟು ಮಾಡುತ್ತದೆ. ಈ ಯಾಗವನ್ನು ಆಚರಿಸಿದವರೆಲ್ಲರಿಗೂ ದೃಢವಾದ ಆರೋಗ್ಯವು ಹಾಗೂ ಒಳ್ಳೆಯ ವ್ಯಕ್ತಿತ್ವವನ್ನು ಪ್ರಸಾದಿಸುತ್ತದೆ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು