ತಾಳೆಯೋಲೆ ೨೫೮: ಭೂತ ಯಜ್ಞ ಎಂದರೇನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಭೂತ ಯಜ್ಞ ಎಂದರೇನು ?
"ಲೋಕಾ ಸಮಸ್ತಾ ಸುಖಿನೋಭವಂತು" ಎಂದು ನಮ್ಮ ಭಾರತೀಯ ಧರ್ಮವು ಉನ್ನತವಾದ ಆದರ್ಶವನ್ನು ವ್ಯಕ್ತಪಡಿಸಿದೆ. ಲೋಕದಲ್ಲಿನ ಸಮಸ್ತ ಪ್ರಾಣಿ ಕೋಟಿಯು ಸುಖ ಶಾಂತಿಗಳಿಂದ ಜೀವಿಸಿರಲಿ ಎನ್ನುವುದು ಈ ಸಂಕಲ್ಪದ ಅರ್ಥ. *ಪ್ರಾಚೀನ ಕಾಲದಿಂದಲೂ ಭಾರತೀಯರು ದಯಾದಾಕ್ಷಿಣ್ಯವನ್ನು ಹೊಂದಿರುವರು.* ನಮ್ಮ ಪ್ರಾಚೀನರು ಇಂದಿನವರಿಗಿಂತಲೂ ಹೆಚ್ಚು ದಾನ ಧರ್ಮಿಗಳಾಗಿದ್ದರು.
ನಮ್ಮೊಂದಿಗೆ ಅನೇಕಾನೇಕ ಪ್ರಾಣಿ ಪಕ್ಷಿಗಳು ಈ ಭೂಮಿಯ ಮೇಲೆ ಉದ್ಭವಿಸಿದವು. ಮಾನವನು ವಿವೇಚನೆ ಮತ್ತು ವಿಜ್ಞಾನವಂತನಾಗಿರುವನು. ಆದ್ದರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಾ, ಸಾಧ್ಯವಾದಷ್ಟು ವಿವಿಧ ಪ್ರಾಣಿಗಳ ರಕ್ಷಣಾ ಬಾಧ್ಯತೆಯನ್ನು, ವಹಿಸಿಕೊಂಡನು. *ಎಲ್ಲಾ ಪ್ರಾಣಿಗಳುಗೂ ಭೂಮಿಯ ಮೇಲೆ ಜೀವಿಸುವ ಹಕ್ಕಿದೆಯೆಂದು ನಮ್ಮ ಪೂರ್ವಿಕರು ಹೆಚ್ಚಿನದಾಗಿ ತಿಳಿದಿದ್ದರು.* ಪ್ರತಿಯೊಂದು ಪ್ರಾಣಿಯನ್ನು ಆತ್ಮ ಸ್ವರೂಪವಾಗಿ (ಪರಮಾತ್ಮ ಭಾವನೆಯಿಂದ) ಅವರು ಭಾವಿಸಿದ್ದರು.
ಬುದ್ದಿವಂತನಾದವನು ಅಥವಾ ಜ್ಞಾನದಿಂದ ಕೂಡಿರುವವನು ಮಾತ್ರ ಸತ್ಯವಾದ ಪ್ರೇಮವನ್ನು ಇತರರಿಗೆ ಹಂಚುವನು. *ಸೃಷ್ಟಿಯಲ್ಲಿನ ಪಕ್ಷಿಗಳು, ಮೃಗಗಳು, ಗಿಡಗಳು, ಮರಗಳು, ನದಿಗಳು, ಬೆಟ್ಟಗುಡ್ಡಗಳನ್ನು ಸಮದೃಷ್ಠಿಯಿಂದ ಪ್ರೇಮಿಸುವ ಶಕ್ತಿಯನ್ನು ನಮ್ಮ ಸಿದ್ಧ ಪುರುಷರು ಹೊಂದಿದ್ದರು. ಎಲ್ಲವೂ ಭಗವಂತನ ಸೃಷ್ಟಿಯೇ. ಅದಕ್ಕಾಗಿಯೇ ಒಂದಕ್ಕೊಂದು ಸಂಬಂಧವನ್ನು ಹೊಂದಿವೆ.* ಆದ್ದರಿಂದ ವಿಶ್ವವನ್ನೆಲ್ಲವನ್ನೂ ಏಕದೃಷ್ಠಿಯಲ್ಲಿ ಪ್ರೇಮಿಸುವ ಉನ್ನತ ಆದರ್ಶವನ್ನು ಅಂದಿನ ಭಾರತೀಯರು ಹೊಂದಿದ್ದರು.
*ಸೃಷ್ಟಿಯಲ್ಲಿ ಪ್ರಾಣಿಗಳ ಬಗ್ಗೆ ಸಾಧ್ಯವಾದಷ್ಟು ಪ್ರೇಮವನ್ನು ಹಾಗೂ ದಯೆಯನ್ನು, ಹೊಂದಿರುವುದಕ್ಕೆ ಭೂತದಯೆ ಎನ್ನುವರು.* *ನಮ್ಮ ಶಕ್ತಿ ಮೀರಿ ಪಶು ಪಕ್ಷಾದಿಗಳಿಗೆ ಧಾನ್ಯವನ್ನು ಆಹಾರವನ್ನಾಗಿ ಹಂಚುವುದು, ಅವುಗಳನ್ನು ಹಿಂಸಿಸುವುದಕ್ಕೆ ಹಿಂಜರಿಯುವುದೇ ಭೂತಯಜ್ಞ.* ಗಿಡ ಮರಗಳನ್ನು ಬೆಳೆಸಿ ಪೋಷಿಸುವುದೇ ನಮ್ಮ ಕರ್ತವ್ಯ. ಹಸಿರಿದ್ದರೇನೇ ಪಶು ಪಕ್ಷಿಗಳು ಜೀವನವನ್ನು ಸಾಗಿಸುವವು. ನಾವು ಪ್ರಕೃತಿಗೆ ಅನುಗುಣವಾಗಿ ಹಾಗೂ ಅನುಕೂಲವಾಗಿ ಜೀವಿಸಿದ್ದೇ ಆದರೆ ಹಿಂದಿಗಿಂತಲೂ ಹೆಚ್ಚಿನದಾಗಿ ಸುಖಪ್ರದವಾಗಿ ಪ್ರಶಾಂತ ಜೀವನವನ್ನು ನಡೆಸಬಹುದು. ಹೀಗೆ ಸ್ಥಿರವಾಗಿರುವ ಹಾಗೂ ಸಹಜ ಪ್ರಕೃತಿಯ ರಕ್ಷಣೆಗಾಗು ಮಾನವನು ಮಾಡಿತ್ತಿರುವುದನ್ನೇ ಭೂತಯಜ್ಞ ಎನ್ನುವರು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು