ತಾಳೆಯೋಲೆ ೨೫೯: ಹಿಂದುಗಳ ದೇವಾಲಯಗಳಿಗೆ ಮತ್ತು ಇತರೆ ಮತಸ್ಥರ ಪ್ರಾರ್ಥನಾ ಮಂದಿರಗಳಿರುವ ವ್ಯತ್ಯಾಸವೇನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಹಿಂದುಗಳ ದೇವಾಲಯಗಳಿಗೆ ಮತ್ತು ಇತರೆ ಮತಸ್ಥರ ಪ್ರಾರ್ಥನಾ ಮಂದಿರಗಳಿರುವ ವ್ಯತ್ಯಾಸವೇನು ?
ಹಿಂದುಗಳ ದೇವಾಲಯಗಳನ್ನು ಇತರೆ ಮತಸ್ಥರ ಪ್ರಾರ್ಥನಾ ಮಂದಿರಗಳಿಗೆ ಹೋಲಿಸಲಾಗದು. ಏಕೆಂದರೆ ಇತರೆ ಮತಸ್ಥರು (ಮುಸ್ಲಿಂ, ಕ್ರೈಸ್ತ ಮುಂತಾದವರು) ದೇವಾಲಯಗಳಂತೆ ಪ್ರಾರ್ಥನಾ ಮಂದಿರಗಳನ್ನು ಹೊಂದಿರುವರು. ಅವರು ಆ ಪ್ರಾರ್ಥನಾ ಮಂದಿರಗಳಲ್ಲಿ ಭಜನೆ ಸಂಕೀರ್ತನೆಗಳು ಹಾಗೂ ಪ್ರಾರ್ಥನೆಗಳನ್ನು *ನಿರಾಕಾರ, ನಿರ್ಗುಣ ದೈವಕ್ಕೆ ಹೇಳುವರು.* ಅದು ಅವರ ಪದ್ಧತಿ.
ಹಿಂದುಗಳು ಮಾತ್ರ ದೇವಾಲಯಗಳನ್ನು ಹೊಂದಿರುವರು. ಹಿಂದುಗಳು ಭಗವಂತನನ್ನು ಧ್ಯಾನಿಸಿ, ಪೂಜಿಸುವುದಕ್ಕೆ ಅನೇಕ ವಿಧಾನಗಳು ಇರುವವು. ಅದರಲ್ಲಿ ವಿಗ್ರಹಾರಾಧನೆಯೂ ಒಂದು. *ಪ್ರಾಚೀನ ಕಾಲದಲ್ಲಿ ದೇವಾಲಯಗಳನ್ನು ನಿರ್ಮಿಸಲು ಬಹಳ ಶ್ರದ್ಧೆಯನ್ನು, ಶಾಸ್ತ್ರೀಯ ಅಂಶಗಳನ್ನು ಹಾಗೂ ಸಿದ್ಧ ಪುರುಷರ ಸಹಾಯವನ್ನು ಪಡೆಯುತ್ತಿದ್ದರು.* ಈ ಕಾರಣದಿಂದಲೇ ಅಂತಹ ಪ್ರಾಚೀನ ಆಲಯಗಳು ಶಕ್ತಿ ನಿಲಯಗಳಾಗಿ ಇನ್ನೂ ಮೆರೆಯುತ್ತಿವೆ.
*ವಿಶ್ವ ರಚನೆಯನ್ನು ಹಾಗೂ ದೇಹ ರಚನೆಯನ್ನು ನಿಶ್ಚಿತವಾಗಿ ಅರ್ಥ ಮಾಡಿಕೊಂಡ ನಮ್ಮ ಪ್ರಾಚೀನರು, ದೇವಾಲಯದ ನಿರ್ಮಾಣ ಶಾಸ್ತ್ರಗಳನ್ನು ರಚಿಸಿದ್ದಾರೆ.* ಈ ವಿಧವಾಗಿ ದೇವಾಲಯದ ವಾಸ್ತುವನ್ನು, ನಿಶ್ಚಿತವಾಗಿ ಪಾಲಿಸಿ ಸಿದ್ಧ ಪುರುಸರ ಹಸ್ತ ಗಳಿಂದ ಪ್ರತಿಷ್ಠಾಪಿಸಿದ ವಿಗ್ರಹಗಳು ಸಾಕ್ಷಾತ್ ದೈವವಾಗಿ ಕೆಲಸ ಮಾಡುತ್ತಿದೆ.
ಇಂತಹ ದೇವಾಲಯಗಳಲ್ಲಿ ದೇವರ ವಿಗ್ರಹವು ನಿರಂತರವಾಗಿ ಶಕ್ತಿ ತರಂಗಗಳನ್ನು ಹೊರ ಹೊಮ್ಮಿಸುತ್ತಲೇ ಇರುತ್ತವೆ. ಹಾಗೆಯೇ ದೇವಾಲಯದ ಪ್ರತಿ ಭಾಗವೂ ತಮ್ಮ ತಮ್ಮ ಶಕ್ತಿಯನ್ನು ಬಿಡುಗಡೆ ಮಾಡುತ್ತಿರುತ್ತವೆ. ಯಾವ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿದರೆ ಆ ದೇವರ (ವಿಶ್ವದಲ್ಲಿ ಯಾವುದೇ ಲೋಕದಲ್ಲಿರುವ) ದೃಷ್ಠಿ ವಿಗ್ರಹದ ಮೇಲೆ ಏಕಾಗ್ರತೆಯಾಗಿ ಭಕ್ತರನ್ನು ಪರೋಕ್ಷವಾಗಿ ಕರುಣಿಸುತ್ತದೆ. *ದೇವಾಲಯಗಳ ಮುಖ್ಯ ಉದ್ದೇಶವು ಭಕ್ತರಿಗೆ ಭಕ್ತಿ ಮತ್ತು ಮುಕ್ತಿಯನ್ನು ಪ್ರಸಾದಿಸುವುದು. ವಿಗ್ರಹವು ಇಲ್ಲದೆಯೂ ಸಹ ಆಯಾ ದೇವರನ್ನು ಮಾನಸಿಕ ಆರಾಧನೆ ಹಾಗೂ ಧ್ಯಾನ ದಿಂದ ಪ್ರಸನ್ನವಾಗಿ ಮಾಡಿಕೊಳ್ಳಬಹುದು.* ಆದರೆ ಇದು ಎಲ್ಲರಿಗೂ ಸಾಧ್ಯವಾಗುವ ಕೆಲಸವಲ್ಲ. ಕೇವಲ ಯೋಗಿಗಳು ಮಾತ್ರವೇ ಈ ರೀತಿ ಧ್ಯಾನಿಸಬಲ್ಲರು.
*ಆಕಾಶ, ವಾಯು, ಅಗ್ನಿ, ಭೂಮಿ ಮತ್ತು ಜಲಗಳಾದ ಪಂಚಭೂತಗಳಿಂದ ವಿಶ್ವವು ನಿರ್ಮಿತವಾಗಿದೆ.* ಈ ಐದು ಅಂಶಗಳು ದೇವಾಲಯಗಳಲ್ಲಿಯೂ ಸಹ ಪ್ರತಿಬಿಂಬಿಸುವ ವಿಧಾನವಾಗಿ ವಿಶ್ವ ರಚನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಲಾಗುತ್ತದೆ. ಗರ್ಭಗುಡಿಯಲ್ಲಿನ ವಿಗ್ರಹವು ದೇವರ ಶರೀರವಂತಹುದು. ದೇವಾಲಯದ ಇತರೆ ಆವರಣಗಳು ಆತನ ಭೌತಿಕ ಶರೀರವಂತಹುದು.
ದೈವ ಕೃಪೆಗಾಗಿ ಶಬ್ದವನ್ನು ಒಂದಾನೊಂದು ಪದ್ಧತಿಯನ್ನು ಅನುಸರಿಸಿ ಉಚ್ಚರಿಸುವುದನ್ನು ಮಂತ್ರ ಎಂದು ಕರೆಯುವರು. ಆಯಾ ದೇವರನ್ನು ಸ್ತುತಿಸುತ್ತಾ ಋಷಿಗಳು ಮಂತ್ರಗಳನ್ನು ನಮಗೆ ನೀಡಿರುವರು. ಇಂತಹ ಮಂತ್ರಗಳನ್ನು ಮತ್ತು ಸ್ತೋತ್ರಗಳನ್ನು ಪಠಿಸುವುದರಿಂದ ದೇವರ ಸ್ಥಾನ ಅಲ್ಲಿಯೇ ಸ್ಥಿರವಾಗುತ್ತದೆ.
ಪ್ರತಿ ದಿನವೂ ಮಾಡುವ ಪೂಜೆ, ದೇವಾಲಯವನ್ನು ಶಕ್ತಿವಂತವಾಗಿ ಮಾಡುತ್ತದೆ. ಭಕ್ತರು ದೇವಾಲಯದಲ್ಲಿ ಭಕ್ತಿ ಶ್ರದ್ಧೆಗಳಿಂದ ಪ್ರಾರ್ಥನೆಗಳನ್ನು ಮಾಡಿದರೂ, ವಿಗ್ರಹದಲ್ಲಿನ ಶಕ್ತಿ ಭಕ್ತನ ಮಾನಸಿಕ ಪವಿತ್ರತೆಯನ್ನು ಅನುಸರಿಸಿ ಆಶೀರ್ವದಿಸುವನು. ಹೀಗೆ ಭಕ್ತರ ಅಭೀಷ್ಟಗಳು ನೆರವೇರುವವು. ಇಂತಹ ಶಾಸ್ತ್ರೀಯತೆ ಹಿಂದೂ ದೇವಾಲಯಗಳಲ್ಲಿ ಇರುವುದು.
*ಸೂಚನೆ*: *ದೇವರು/ದೇವತೆಗಳು ಒಂದು ಮತಕ್ಕೆ ಸೇರಿದವರಾಗಿ ಪ್ರವರ್ತಿಸುವುದಿಲ್ಲ. ಅವರು ವಿಶ್ವ ಶಕ್ತಿಗಳು ಆದ್ದರಿಂದ, ಕುಲ ಮತ ಬೇಧಗಳಿಲ್ಲದೆ ಸರ್ವ ಮಾನವರೂ ದೇವಾಲಯದೊಳಗಿನ ದೇವರ ಕೃಪೆಯನ್ನಜ ಹೊಂದಬಹುದು. ದೇವಾನು ದೇವತೆಗಳು ಮಾನವರಂತೆ ಸಂಕುಚಿತ ಬುದ್ದಿ ಮತ್ತು ಮನಸ್ಸಿನವರಲ್ಲವೆಂದು, ಪ್ರೇಮ ಸ್ವರೂಪದವರೆಂದು ನಾವು ಗ್ರಹಿಸಬೇಕು.*
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು