ತಾಳೆಯೋಲೆ ೩೦೫: ಸ್ಮೃತಿಗಳು ಎಂದರೇನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಸ್ಮೃತಿಗಳು ಎಂದರೇನು ?
ಭಾರತ ದೇಶದಲ್ಲಿನ ಆಧ್ಯಾತ್ಮಿಕ ಸಾಹಿತ್ಯದಲ್ಲಿ ವೇದಗಳು ಮುಖ್ಯ ಸ್ಥಾನವನ್ನು ಹೊಂದಿವೆ. ಶೃತಿಗಳನ್ನು, ವೇದಗಳನ್ನು ಆಮ್ನಾಯಗಳೆಂದು ಹೇಳುವರು. ಅಂತಹ ಶೃತಿಗಳ ನಂತರ ಸ್ಮೃತಿಗಳು ಪ್ರಧಾನವಾದವು. ಇಂತಹ ಶೃತಿ ಸ್ಮೃತಿಗಳು ಭೂಮಿಯ ಮೇಲಿರುವ ಮಾನವನ ಜೀವನಕ್ಕೆ ಆಧಾರವಾಗಿ ದಿವ್ಯ ಜೀವನವನ್ನು ಪ್ರಸಾದಿಸುವವು. ವೇದಗಳನ್ನು ಗ್ರಂಥಗಳಾಗಿ ಬರೆದು ಮುಂದಿನ ಪೀಳಿಗೆಯವರಿಗೆ ತಲುಪಿಸುವುದರಲ್ಲಿ, ನಮ್ಮ ಪೂರ್ವಿಕರು ವಿಫಲರಾದರು. ಎಲ್ಲರಿಗೂ ವೇದಗಳು ತಲುಪಬಾರದೆನ್ನುವ ಭಾವನೆಯಿಂದ ಕೇವಲ ತಮ್ಮ ಶಿಷ್ಯರು ಜ್ಞಾಪಕ ಇಟ್ಟುಕೊಳ್ಳುವ ವಿಧವಾಗಿ ಬಾಯಿ ಪಾಠದ ಮುಖಾಂತರ ಬೋಧಿಸುತ್ತಿದ್ದರು. ಈ ಕಾರಣದಿಂದ ವೇದಗಳಲ್ಲಿನ ಅನೇಕ ಭಾಗಗಳು ಕಾಲ ಪ್ರವಾಹದಲ್ಲಿ ಕಣ್ಮರೆಯಾಗಿ ಹೋಗಿವೆ. ಇದು ಭಾರತೀಯರಿಗೆ ನಡೆದ ಭರಿಸಲಾಗದ ನಷ್ಟ.
ಆದರೂ ಸಹ ಸಿದ್ಧ ಪುರುಷರಿಗೆ ಕಣ್ಮರೆಯಾದ ಅನೇಕ ವೇದ ಭಾಗಗಳು ಅತೀಂದ್ರಿಯ ಶಕ್ತಿಯಿಂದ ಸ್ವಲ್ಪ ಮಟ್ಟಿಗೆ ಲಭ್ಯವಾಗಿವೆ. ಇವುಗಳನ್ನೇ ಸ್ಮೃತಿಗಳು ಎಂದು ಕರೆಯುವರು. *ಸ್ಮೃತಿ ಎಂದೇ ಜ್ಞಾಪಕ* ಹೀಗೆ ಅವರಲ್ಲಿ ಉದಯಿಸಿದ ಜ್ಞಾಪಕವೇ, ಇಲ್ಲವೇ ವಿಷಯಗಳೇ ಸ್ಮೃತಿಗಳಾಗಿರುವವು. ಸ್ಮೃತಿಗಳು ಸನಾತನ ಭಾರತೀಯ ವರ್ಣಾಶ್ರಮ ಧರ್ಮಗಳನ್ನು ಅನುಸರಿಸಿ, ಹಿಂದೂ ಸಮಾಜಕ್ಕೆ ಕಾನೂನು ಬದ್ಧವಾಗಿ ಮಾಡಲ್ಪಟ್ಟ ಪ್ರಾಚೀನ ಶಾಸನಗಳು. ವ್ಯಕ್ತಿಗಳಿಗೆ ಅವರ ದೈನಿಕ ಜೀವನಕ್ಕೆ ಮಾರ್ಗವನ್ನು ನಿರ್ದೇಶಿಸುವುದಕ್ಕೆ ಬೇಕಾದ ಸಾಮಾಜಿಕ ಶಾಸನಗಳು ಸ್ಮೃತಿಗಳಲ್ಲಿ ಇವೆ.
ಸಮಾಜದಲ್ಲಿನ ವಿವಿಧ ಮಾನಸಿಕ ಹಾಗೂ ಪರಿಣಾಮ ದೆಶೆಯಲ್ಲಿ ಇರುವಂತಹ ಮನುಷ್ಯರು ಅವರಿಗೆ ಸರಿಯಾಗಿ ಹೊಂದುವ ಕೆಲಸಗಳು, ಕರ್ಮಗಳು ಹಾಗೂ ಕರ್ತವ್ಯಗಳನ್ನು ಸ್ಮೃತಿಗಳು ತಿಳಿಸುತ್ತವೆ. ಒಬ್ಬ ವ್ಯಕ್ತಿಯು ಗುಣವನ್ನು ಅನುಸರಿಸಿಯೇ ಕರ್ಮಗಳನ್ನು ಮಾಡುವನು. ಅಂತಹುದ್ದನ್ನೇ ಆತ ಕಲಿಯುತ್ತಾನೆ. ಹಾಗೆ ತನ್ನ ಶ್ರದ್ಧಾನುಸಾರವಾಗಿ ಕಲಿತಿದ್ದು, ತಪ್ಪದೇ ತಲೆಗೆ ಹತ್ತುತ್ತದೆ. ಮೈಗೆ ಹಿಡಿಸದ ವಿದ್ಯೆಯನ್ನು ಎಷ್ಟು ಕಷ್ಟಪಟ್ಟು ಓದಿದರೂ ಬರುವುದಿಲ್ಲ. ಬಂದರೂ ಅದು ಕೃತ್ರಿಮವಾಗಿರುವುದು. ಅಂತಹವರು ಸಮಾಜಕ್ಕೆ ನೀಡುವ ಸೇವೆಗಳು ಸಹ ಕೃತ್ರಿಮವಾಗಿಯೇ ಇರುವವು. ಆದ್ದರಿಂದ ಗುಣವನ್ನು ಹಿಡಿದು ನಮ್ಮವರು ಕರ್ಮವನ್ನು ಏರ್ಪಾಟು ಮಾಡಿರುವರು.
ಒಬ್ಬ ಮಾನವನ ಜೀವನದಲ್ಲಿ ಎಲ್ಲಾ ದಶೆಗಳನ್ನು ಸ್ಮೃತಿಗಳು ಸೇರಿಸುತ್ತವೆ. ಅಂತಹ ಸ್ಮೃತಿಗಳಲ್ಲಿ ಮನು, ಯಾಜ್ಞವಲ್ಕ್ಯ, ನಾರದ, ಪರಾಶರ ಮೊದಲಾದವುಗಳು.
ಮನುಸ್ಮೃತಿ ಸತ್ಯಯುಗಕ್ಕೆ ಮಾತ್ರವೇ ಕೆಲಸಕ್ಕೆ ಬರುತ್ತದೆ. ಯಾಜ್ಞವಲ್ಕ್ಯ ಸ್ಮೃತಿ ತ್ರೇತಾ ಯುಗಕ್ಕೆ, ಶಂಖ ಲಿಖಿತ ಸ್ಮೃತಿ ದ್ವಾಪರ ಯುಗಕ್ಕೆ ಹಾಗೂ ಪರಾಶರ ಸ್ಮೃತಿ ಕಲಿಯುಗಕ್ಕೆ ವರ್ತಿಸುವುದೆಂಬುದು ಹಿರಿಯರ ಮಾತು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು