ಏಕಮುಖಿ ನೋಂದಣಿ ಮಾಡಿ ಚುನಾವಣೆ ಹುನ್ನಾರ, ಚುನಾವಣೆ ಮುಂದೂಡುವಂತೆ ಮನವಿ
ಚನ್ನಪಟ್ಟಣ: ಪ್ರೌಢಶಾಲಾ ಶಿಕ್ಷಕರ ಸಂಘಕ್ಕೆ ಜೂನ್ ೧೩ ರಂದು ಚುನಾವಣೆ ನಡೆಯಲಿದ್ದು ತಾಲ್ಲೂಕಿನಾದ್ಯಂತ ೨೨೫ ಮಂದಿ ಪ್ರೌಢಶಾಲಾ ಶಿಕ್ಷಕರಿದ್ದು ಎಲ್ಲಾ ಶಿಕ್ಷಕರ ಗಮನಕ್ಕೆ ತರದೆ ಯಾರೋ ಒಬ್ಬರ ಇಚ್ಚೆಯಂತೆ ಕೇವಲ ೮೮ ಮಂದಿಗೆ ಮಾತ್ರ ನೋಂದಣಿ ಮಾಡಿಸಿ ಚುನಾವಣೆ ನಡೆಸುತ್ತಿರುವುದು ಸರಿಯಲ್ಲ, ಎಲ್ಲರನ್ನೂ ನೋಂದಣಿ ಮಾಡಿಸುವ ತನಕ ಚುನಾವಣೆಯನ್ನು ಮುಂದೂಡಬೇಕೆಂದು ಸೆಕೆಂಡರಿ ಪ್ರೌಢಶಾಲಾ ಶಿಕ್ಷಕರ ತಾಲ್ಲೂಕು
ಆರ್ ಟಿ ಇ ಮಕ್ಕಳಿಗೆ ಹೆಚ್ಚಿನ ಶುಲ್ಕ ವಸೂಲಿ ವ್ಯಾಪಕ ದೂರು ದಾಖಲು
ಚನ್ನಪಟ್ಟಣ: ಖಾಸಗಿ ಶಾಲೆಗಳಲ್ಲಿ ಆರ್ ಟಿ ಇ ಮಕ್ಕಳಿಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾದ ನಂತರ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಆರ್ ಟಿ ಇ ಪೋಷಕರಿಗೆ ಡಯಟ್ ಪ್ರಾಂಶುಪಾಲರ ಸಮ್ಮುಖದಲ್ಲಿ ದೂರು ಸಲ್ಲಿಸುವಂತೆ ರಾಮನಗರ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದರು.ಇಂದು ಗುರುಭವನದಲ್ಲಿ
ಕೆರೆಯಲ್ಲಿ ಮುಳುಗಿ ಇಬ್ಬರ ಬಾಲಕರ ಸಾವು
ಚನ್ನಪಟ್ಟಣ:೨೭/೦೫/೨೦೧೯ ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಬ್ರಹ್ಮಣಿಪುರ ಗ್ರಾಮದಲ್ಲಿ ನಡೆದಿದೆ. ೯ ವರ್ಷದ ನವನೀತ್ ಹಾಗೂ ೧೪ ವರ್ಷದ ಗಗನ್ ಮೃತ ಮಕ್ಕಳಾಗಿದ್ದು ಮಧ್ಯಾಹ್ನ ಕೆರೆಯಲ್ಲಿ ಇಬ್ಬರು ಮಕ್ಕಳು ಈಜಲು ಇಳಿದಿದ್ದಾರೆ.ಮೊದಲು ಕೆರೆ ದಡದಲ್ಲಿ ಈಜಾಡುತ್ತಿದ
ಖಾಸಗಿ ಶಾಲೆಗಳಲ್ಲಿ ಆರ್ ಟಿ ಇ ಮಕ್ಕಳಿಂದ ಶುಲ್ಕ ವಸೂಲಿ ಪೋಷಕರು ದೂರು ನೀಡಲು ಕರೆ
ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಆರ್ ಟಿ ಇ ಮಕ್ಕಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಬಾದಾಮಿ ತಾಲ್ಲೂಕಿನಲ್ಲಿ ದಾವೆ ಹೂಡಿರುವುದರಿಂದ ಎಚ್ಚೆತ್ತ ಸರ್ಕಾರ ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಈ ಕೆಳಕಂಡ ದಿನಾಂಕದಂದು ಮಂಡ್ಯ ಡಯಟ್ ಪ್ರಾಂಶುಪಾಲರ ನೇತೃತ್ವದಲ್ಲಿ ದೂರು ಸ್ವೀಕರಿಸಲಾಗುವುದು ಎಂದು ರಾಮನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ - 2019
ಸಾರ್ವಜನಿಕ ಶಿಕ್ಷಣ ಇಲಾಖೆ, ರಾಮನಗರ ಮತ್ತು ಬಾಷ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ಬಾಷ್ ಇಂಡಿಯಾ ಪ್ರತಿಷ್ಠಾನ, ಯೆಲ್ಲೊ ಆಂಡ್ ರೆಡ್ ಫೌಂಡೇಷನ್ಸ್, ಅಗಸ್ತ್ಯ ಫೌಂಡೇಷನ್ ಸಹಯೋಗದಿಂದ ಶ್ಯಾನುಮಂಗಲ, ಜೋಡಿಕರೇನಹಳ್ಳಿ ಮತ್ತು ಅರಳಾಳುಸಂದ್ರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಳೆದ ೨೦ ದಿನಗಳಿಂದ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭವು ಅರಳಾಳುಸಂದ್ರ ಶಾಲೆಯಲ್ಲಿ ದಿನಾಂಕ: ೨೨/೦೫/೨೦೧೯ ರಲ್ಲಿ ಜರುಗಿತು.
ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು !?
(ಸಾಮಾನ್ಯ ಜನರ ನಾಡಿಮಿಡಿತ)ಹಲವಾರು ಸಮೀಕ್ಷೆಗಳು ಸಾಮಾನ್ಯ ಮತದಾರರನ್ನು ಸಂಪೂರ್ಣ ಗಣನೆಗೆ ತೆಗೆದುಕೊಳ್ಳದೆ ನಾಮಕಾವಸ್ಥೆಗಷ್ಟೇ ಸೀಮಿತಗೊಳಿಸಿದ್ದು ಕೇವಲ ಒಂದು, ಎರಡು, ಮೂರನೇ ದರ್ಜೆಯ ಆಯಾಯ ಪಕ್ಷದ ನಾಯಕರು ಮತ್ತು ಹಿಂಬಾಲಕರನ್ನಷ್ಟೇ ಸಂದರ್ಶಿಸಿ ಇಂತಹವರೇ ಗೆಲ್ಲುತ್ತಾರೆ ಎಂದು ಘೋಷಿಸಿದ್ದಾರೆ.ನಮ್ಮ ಪತ್ರಿಕೆಯ ವರದಿಗಾರರು ಮಂಡ್ಯ ಮತ್ತು ಬೆಂಗಳೂರು
ಒತ್ತುವರಿ, ಜಾನುವಾರು, ಕೊಳಚೆ ಮತ್ತು ಮದ್ಯವ್ಯಸನಿಗಳ ತಾಣವಾಗಿರುವ ಮಂಗಳವಾರಪೇಟೆ ಪ್ರಾಥಮಿಕ ಶಾಲೆ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಇರುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಪೂರ್ವಾಪರ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂದರ್ಶಿಸಿ ನಮ್ಮ ಪತ್ರಿಕೆಯಲ್ಲಿ ಇತ್ತೀಚೆಗೆ ಸಂಪೂರ್ಣ ವರದಿಯೊಂದನ್ನು ಪ್ರಕಟಿಸಲಾಗಿತ್ತು, ಆ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಸೀತಾರಾಮು ರವರು ತಾಲ್ಲೂಕಿನಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟವನ್ನು ಉನ್ನತ ಮಟ್ಟ
ಭಾರತದಲ್ಲಿ ಬೌದ್ಧ ಪೂರ್ಣಿಮೆಯ ವಿಶೇಷತೆಗಳು
ಬುದ್ಧ ಪೂರ್ಣಿಮೆ ಎಂಬುದು ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದಾಗಿದೆ. ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಶುಕ್ಲ ಪಕ್ಷ ಹುಣ್ಣಿಮೆ ದಿನದಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬುದ್ಧ ಪೂರ್ಣಿಮೆ ಬರುತ್ತದೆ. ಈ ವರ್ಷ ಮೇ ೧೮ ರ ಶನಿವಾರ ದಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.ಗೌತಮ ಬುದ್ಧ (ಕ್ರಿ.ಪೂ ೫೫೭-೪೪೭) ಬೌದ್ಧಧರ್ಮದ ಸಂಸ್ಥಾಪಕ. ಮಾತ್ರವಲ್ಲ, ಚತುರಾರ್ಯ ಸತ್
ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಜನಪದ ಕಲೆಗಳ ಪ್ರದರ್ಶನ-ಕಲಾವಿದರಿಗೆ ಸನ್ಮಾನ
ಇಂದಿನ ದಿನಗಳಲ್ಲಿ ಮದುವೆ, ಹುಟ್ಟುಹಬ್ಬ, ವಾರ್ಷಿಕೋತ್ಸವಗಳನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವವರೇ ಹೆಚ್ಚಾಗಿರುವವರ ಮಧ್ಯೆ ಇಲ್ಲೋಬ್ಬರು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಜನಪದ ಕಲೆಗಳ ಪ್ರದರ್ಶನ ಹಾಗೂ ಕಲಾವಿದರನ್ನು ಸನ್ಮಾನಿಸುವ ಮೂಲಕ ಆಚರಿಸಿ ಸಮಾಜಕ್ಕೆ ಮಾದರಿಯಾದರು. ರಾಮನಗರದ ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ ಹಾಗೂ ಡಿ.ಆರ್. ನೀಲಾಂಬಿಕಾ ದಂಪತಿ ತಮ್ಮ ಮದುವೆ
ಮೂಲ ಆಶಯಗಳನ್ನು ಬದಿಗೊತ್ತಿ ಬಾಡಿಗೆಗೆ ಸೀಮಿತವಾದ ಶತಮಾನೋತ್ಸವ ಭವನ
ಚನ್ನಪಟ್ಟಣ: ಬೆಂಗಳೂರು ಮೈಸೂರು ನಡುವಿನ ಚನ್ನಪಟ್ಟಣದಲ್ಲಿ ಶತಮಾನದ ಹಿಂದೆಯೇ ಸರ್ಕಾರಿ ಬಾಲಕರ ಪ್ರೌಢಶಾಲೆ ಸ್ಥಾಪನೆಯಾಗಿದ್ದು, ಇಂದಿನ ಹಲವಾರು ಗಣ್ಯ ವ್ಯಕ್ತಿಗಳು ಆ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ, ಕ್ರಿ ಶ ೧೮೯೯ ರಲ್ಲಿ ಪ್ರಾರಂಭವಾದ ಈ ಶಾಲೆಯ ಶತಮಾನೋತ್ಸವದ ನೆನಪಿಗಾಗಿ ತಡವಾಗಿಯಾದರೂ ಎಚ್ಚೆತ್ತುಕೊಂಡ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳ ಸಂಘ (ರಿ) ಕಟ್ಟಿಕೊಂಡು ಅದೇ