ಜೀವನದಲ್ಲಿ ಸುಖ ದುಃಖ ಎರಡನ್ನೂ ಸಮನಾಗಿ ಸ್ವೀಕರಿಸಿ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ
ಜೀವನದಲ್ಲಿ ಸುಖ ದುಃಖ ಸರಸ ವಿರಸ ಸಮಾನವಾಗಿ ಸ್ವೀಕರಿಸಬೇಕು ಏನೇ ಆದರೂ ಹೊಂದಿಕೊಂಡು ಹೋಗಬೇಕು ಧಾರ್ಮಿಕತೆಯಲ್ಲಿ ನಂಬಿಕೆ ಉಳಿಸಿಕೊಂಡು ಜೀವನದಲ್ಲಿ ಪರಿಪಕ್ವತೆಯನ್ನು ಕಾಪಾಡಿಕೊಂಡು ಸುಖ ಸಂಸಾರವನ್ನು ಸಾಗಿಸಬೇಕು ಎಂದು ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿಗಳು ಆಶೀರ್ವದಿಸಿದರು
ಹಿಂದುಳಿದ ವರ್ಗದ ಅಧ್ಯಕ್ಷರಿಗೆ ನಗರದಲ್ಲಿ ಸನ್ಮಾನ
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಮಳವಳ್ಳಿ ಕ್ಷೇತ್ರದ ಶಾಸಕ ಡಾ ಕೆ ಅನ್ನದಾನಿ ಅವರನ್ನು ರಾಮನಗರ ಜಿಲ್ಲಾ ಎಸ್ ಸಿ ಎಸ್ ಟಿ ಅಧ್ಯಕ್ಷ ಜಯಕಾಂತ್ ಚಾಲುಕ್ಯ ಮತ್ತು ಚನ್ನಪಟ್ಟಣ ತಾಲ್ಲೂಕಿನ ಪದಾಧಿಕಾರಿಗಳು ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿದರು.ಸನ್ಮ
ತಾಲ್ಲೂಕಿನಾದ್ಯಂತ ವಿಜೃಂಭಣೆಯಿಂದ ಆಚರಣೆಗೊಂಡ ಶಿವರಾತ್ರಿ
ಅಜ್ಞಾನದಿಂದ ಸು ಜ್ಞಾನ ದೆಡೆಗೆ ಸಾಗುವುದೇ ಶಿವರಾತ್ರಿ ಹಬ್ಬ, ಈ ಹಬ್ಬದ ದಿನದಂದು ಶಿವನ ಪ್ರತಿರೂಪದ ಎಲ್ಲಾ ದೇವಾಲಯಗಳಲ್ಲದೇ ಅನೇಕ ಬೇರೆಬೇರೆಯ ದೇವಾಲಯಗಳಲ್ಲೂ ಸಹ ವಿಶೇಷ ಪೂಜೆ ನಡೆಯುತ್ತದೆ, ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಆರಂಭಗೊಳ್ಳುವ ಪೂಜೆ ರಾತ್ರಿ ಪೂರಾ ಜಾಗರಣೆ ಮಾಡುವ ಭಕ್ತಾಧಿಗಳಿಗೆ ದೇವರ ಹಾಡು, ತತ್ವ ಪದ, ಜಾನಪದ ಗೀತೆಗಳು ಮತ್ತು ಭಜನೆಗಳ ರಸದೌತಣದೊಟ್ಟಿಗೆ ಮಾರನೆಯ ದಿನ ಮಂಗಳಾರತಿ ಮಾಡುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ.
ಅಂಧಕಾರದಲ್ಲಿ ಇತಿಹಾಸದ ಪಾಲಿಟೆಕ್ನಿಕ್ ಕಾಲೇಜು
೧೯೬೪ ರಲ್ಲಿ ಅಂದಿನ ಕೇಂದ್ರ ಸಚಿವರಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರು ಮತ್ತು ಅಂದಿನ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಕೆ ಕಾಮರಾಜ ರವರು ಚನ್ನಪಟ್ಟಣದಲ್ಲಿ ಉದ್ಘಾಟಿಸಿದ ಪಾಲಿಟೆಕ್ನಿಕ್ ಕಾಲೇಜು ನಗರದ ಹೃದಯ ಭಾಗದಲ್ಲಿದ್ದರೂ ಸಹ ಹಾಳು ಕೊಂಪೆಯಾಗಿ, ಭೂತಬಂಗಲೆಗಳಾಗಿ, ಬೀಡಾಡಿ ಹಸು, ಹಂದಿ, ನಾಯಿಗಳ ವಾಸಸ್ಥಾನವಾಗಿ ದಟ್ಟವಾದ ಕಾಡಿನ ಮಧ್ಯದಲ್ಲಿರುವಂತೆ ಗೋಚರಿಸುತ್ತಿದೆ.
ಮದ್ದೂರು ಬಳಿ ಬಸ್ ಉರುಳಿ ಹಲವರಿಗೆ ಗಾಯ
ಬೆಂಗಳೂರು ಮೈಸೂರು ಹೆದ್ದಾರಿಯ ಮದ್ದೂರಿನ ಬಳಿ ಇಂದು ಮಧ್ಯಾಹ್ನ ಪ್ರವಾಸಿ ಬಸ್ ಆಯತಪ್ಪಿ ಉರುಳಿ ಬಿದ್ದು ಹಲವಾರು ಪ್ರವಾಸಿಗರಿಗೆ ಗಂಭೀರ ಗಾಯವಾಗಿದೆ.ಪಶ್ಚಿಮ ಬಂಗಾಳ ನೋಂದಣಿಯ WB 19 J 1377 ನಂಬರಿನ ಗೌತಮ್ ಟೂರ್ಸ್ ಹೆಸರಿನ ಬಸ್ ವೇಗವಾಗಿ ಚಲಿಸುತ್ತಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಉರುಳಿ ಬಿದ್ದಿದ್ದು ಹಲವಾರು ಪ್ರವಾಸಿಗರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಸಂಚಾರಿ ಪೋಲಿಸರು ಮತ್ತು ಸಾರ್ವಜನ
ಮಾತೃಭಾಷೆ ಗೆ ಒತ್ತು ಕೊಡಿ, ಸಿಇಓ ಮುಲ್ಲೈ ಮಹಿಲನ್
ಮಾತೃಭಾಷೆಗಿನ್ನ ದೊಡ್ಡ ಭಾಷೆ ಯಾವುದೂ ಇಲ್ಲ, ಸಾಧನೆಗೆ ಭಾಷೆಯ ಅವಶ್ಯಕತೆ ಇಲ್ಲ, ಇಂಗ್ಲಿಷ್ ಕಲಿತರೇ ಮಾತ್ರ ಸಾಧನೆ ಮಾಡಬಹುದು ಎಂಬ ಕ್ಷುಲ್ಲಕ ತನ ಬಿಡಬೇಕು, ಇಂದು ನಿಮಗೆ ಸಹಾಯ ಹಸ್ತ ಚಾಚಲು ಬಂದಿರುವ ಟೊಯೋಟಾ ಕಂಪೆನಿಯವರಿಗೆ ಜಪಾನ್ ಭಾಷೆ ಹೊರತು ಪಡಿಸಿ ಬೇರೆ ಯಾವ ಭಾಷೆಯು ಬರುವುದಿಲ್ಲ, ಆದರೂ ಅವರು ಇಂದು ಜಗತ್ತಿನಾದ್ಯಂತ ತಮ್ಮ ಕಂಪೆನಿಗಳನ್ನು ತೆರೆದು ವಿಶ್ವಮಟ್ಟದಲ್ಲಿ ಖ್ಯಾತನಾಮರಾಗಿದ್ದಾರೆ ಎಂದು ರಾಮನಗರ ಜಿಲ್ಲಾ ಪಂಚಾಯತ್ ಸಿಇಓ ಮುಲ್ಲೈಮು
ಚನ್ನಪಟ್ಟಣ ಕಂದಾಯ ಇಲಾಖೆಯ ಇತಿಹಾಸದಲ್ಲಿ ರೈತಪರ ಕೆಲಸ ಮಾಡಿದ ಅಧಿಕಾರಿಗಳಿಗೆ ರೈತರಿಂದಲೇ ಸನ್ಮಾನ
ಪ್ರತಿಭಟನೆ, ಸತ್ಯಾಗ್ರಹ ಮತ್ತು ಧಿಕ್ಕಾರಗಳಿಗೆ ವೇದಿಕೆಯಾಗುತ್ತಿದ್ದ ತಾಲ್ಲೂಕು ಕಛೇರಿಯಲ್ಲಿ ಇಂದು ಅಭಿನಂದನೆಗಳ ಸುರಿಮಳೆನಲವತ್ಮೂರು ವರ್ಷಗಳ ಗೇಣಿ ಹೋರಾಟ ಮತ್ತು ಮೂವತ್ತೆಂಟು ವರ್ಷಗಳ ಸಾಗುವಳಿ ಹೋರಾಟ ನೆನೆಗುದಿಗೆ ಬಿದ್ದಿದ್ದು ಕೇವಲ ಆರು ತಿಂಗಳ ಹಿಂದೆ ತಾಲ್ಲೂಕಿಗೆ ನೇಮಕವಾದ ತಹಶಿಲ್ದಾರ್ ಯೋಗಾನಂದರವರು ಆಗಮಿಸಿದ ನಂತರ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ ರಾಜೇಂದ್ರ ರವರ ಆದೇಶದ ಮೇರೆಗೆ ಕೇವಲ ಎರಡು ತಿಂಗಳ ಅವಧಿಯ
ಅಜ್ಜಅಜ್ಜಿ ಸ್ಮರಣಾರ್ಥವಾಗಿ ಸರ್ಕಾರಿ ಪ್ರೌಢಶಾಲೆಗೆ ಡ್ರಮ್ಸೆಟ್ ವಿತರಣೆ
ರಾಮನಗರ : ಸಮಾಜಮುಖಿ ಕೆಲಸಗಳನ್ನು ಎಲ್ಲರೂ ಮಾಡಬಹುದು, ಆದರೆ ಮನಸ್ಸು ಮಾಡಬೇಕು ಎಂದು ಕವಿ ವಾಸುದೇವ ನಾಡಿಗ್ ಹೇಳಿದರು. ನಗರದ ಬಾಲಕಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಶೋಧನಾ ವಿದ್ಯಾರ್
ಮನುಷ್ಯರಿಗೆ ಕೊಡುವ ಗುಣಮಟ್ಟದ ಆಹಾರದಷ್ಟೇ ಪ್ರಾಣಿಗಳಿಗೂ ಕೊಡಬೇಕು ರುದ್ರಮುನಿ
ಮನುಷ್ಯರು ಯಾವ ಗುಣಮಟ್ಟದ ಆಹಾರಗಳನ್ನು ಸೇವಿಸುತ್ತಾರೋ ಅದೇ ಗುಣಮಟ್ಟದ ಆಹಾರವನ್ನು ಪಶುಗಳು ಮತ್ತು ಕೋಳಿಗಳಿಗೂ ನೀಡಿದರೆ ಅದರಿಂದಲೂ ನಾವು ಗುಣಮಟ್ಟದ ಹಾಲು ಮತ್ತು ಮಾಂಸವನ್ನು ಪಡೆಯಲು ಸಾಧ್ಯ ಎಂದು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿ\' ದ ಉಪಾಧ್ಯಕ್ಷರಾದ ಡಿ ಎಸ್ ರುದ್ರಮುನಿ ಹೇಳಿದರು.ಅವರು ಇಂದು ಶತಮ
ವೀರಯೋಧರಿಗೆ ನಮನ
ನಮ್ಮೆಲ್ಲರ ಜೀವದ ಹೊಣೆಹೊತ್ತು ಅವರ ಜೀವದ ಹಂಗು ತೊರೆದು ಗಡಿ ಪ್ರದೇಶದಲ್ಲಿ ಹೋರಾಡಿ ಮಡಿದ ಯೋಧರೇ ನಮ್ಮ ದೇವರು ಎಂದು ತಗಚಗೆರೆ ಪ್ರೌಢಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನಿಂಗರಾಜು ರವರು ಅಭಿಪ್ರಾಯ ಪಟ್ಟರು.ಅವರು ಇಂದು ನಮನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ನವರು ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವೀರಯೋಧ ಹೆಚ್ ಗುರು ರವರ ಸ್ಮರಣಾರ್ಥ ಜಾನಪದ ಗೀತಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ