ಅತ್ತೆ ಮಾವನ ಸೇವೆ ಮಾಡಿದರೆ ವರಮಹಾಲಕ್ಷ್ಮಿ ಒಲಿಯುತ್ತಾಳೆ
||ನಮಸ್ತೇಸ್ತು ಮಹಾಮಾಯೆ ಶ್ರೀಪೀಠೆ ಸುರ ಪೂಜಿತೆ||
||ಶಂಖಚಕ್ರ ಗಧಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ||
ವರಮಹಾಲಕ್ಷ್ಮಿ ಗೆ ಸಂಬಂಧಿಸಿದ ಈ ಶ್ಲೋಕದಲ್ಲಿಯೇ ತಾಯಿಯ ಮಹಾತ್ಮೆ ತಿಳಿಯುತ್ತದೆ.
ವರಮಹಾಲಕ್ಷ್ಮಿ ಹಬ್ಬ ಕುರಿತು ಅನೇಕ ಜ್ಯೋತಿಷಿಗಳು, ಶಾಸ್ತ್ರಿಗಳು, ಪುರೋಹಿತರು ಸೇರಿದಂತೆ ಅನೇಕ ಮಂದಿ ಒಂದೊಂದು ರೀತಿ ಹೇಳುತ್ತಾರೆ, ಈ ದುಬಾರಿಯ ಕಾಲದಲ್ಲಿ ಜನಸಾಮಾನ್ಯರು ಅವೆಲ್ಲವನ್ನೂ ಮಾಡುವುದು ತುಸು ಕಷ್ಟದ ಕೆಲಸ, ಹಾಗಾಗಿ ಸಾಲ ಮಾಡಿ ಅತಿಯಾದ ಆಚರಣೆ ಮಾಡುವ ಬದಲು ಇರುವದರಲ್ಲೇ ಭಕ್ತಿಯಿಂದ ಪೂಜಿಸಿದರೆ ಅದ್ದೂರಿ ಆಚರಣೆಗಿಂತಲೂ ಹೆಚ್ಚು ಫಲ ದೊರೆಯುವುದರಲ್ಲಿ ಅನುಮಾನವಿಲ್ಲ.
ಈ ಹಿಂದಿನ ಪುರಾಣೇತರ ಕಥೆಗಳಲ್ಲಿ ಉಲ್ಲೇಕವಾಗಿರುವಂತೆ ಅದ್ದೂರಿ ಆಚರಣೆ ಮಾಡಿದ ರಾಜ ಮಹರಾಜರಿಗೆ ದೊರಕದ, ದರ್ಶನ ನೀಡದ ದೇವಾನು ದೇವತೆಗಳೆಲ್ಲರೂ ಭಕ್ತಿಯಿಂದ ಭಜಿಸಿದ ಬಡವನಿಗೆ ದರ್ಶನ ನೀಡಿ ಅಷ್ಟೈಶ್ವರ್ಯ ಕರುಣಿಸಿರವುದನ್ನು ಬಹುತೇಕ ಎಲ್ಲರೂ ಕೇಳಿದ್ದೀರಿ. ಹಾಗಾಗಿ ವೈಭವೋಪೇತ ಪೂಜೆಗಿಂತ ಭಕ್ತಿಯ ಪೂಜೆಯೇ ಲೇಸಲ್ಲವೆ ?
*ಹಬ್ಬದ ವಿಶೇಷ*
ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಹೆಣ್ಣು ಮಕ್ಕಳಿಗಂತೂ ಪ್ರಿಯವಾದ ಮಾಸ. ಒಂದರ ಹಿಂದೆ ಒಂದರಂತೆ ಸಾಲಾಗಿ ಬರುವ ಪ್ರತಿಯೊಂದು ಹಬ್ಬದಲ್ಲೂ ಚೆನ್ನಾಗಿ ಅಲಂಕಾರ ಮಾಡಿಕೊಂಡು ಸಡಗರ ಸಂಭ್ರಮದಿಂದ ಖುಷಿಪಡುತ್ತಾರೆ. ಈ ಎಲ್ಲಾ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಎಂದರೆ ಎಲ್ಲಾ ಹೆಂಗಳೆಯರಿಗೂ ಬಹಳ ಪ್ರಿಯವಾದುದು.
ಪ್ರತಿ ವರ್ಷ ಪೌರ್ಣಮಿಯ ಸಮೀಪದ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ಈ ವರಮಹಾಲಕ್ಷ್ಮಿ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಭವಿಷ್ಯೋತ್ತರ ಪುರಾಣದ ಪ್ರಕಾರ, ಲಕ್ಷ್ಮಿಯು ವಾಸುಕಿಯ ಸಹಾಯದಿಂದ ಕ್ಷೀರ ಸಾಗರದ ಮಥನ ಮಾಡಿದಾಗ ಅವತಾರ ತಾಳಿದಳೆಂದೂ ಹೇಳಲಾಗುತ್ತದೆ.
*ಸರಳವಾಗಿ ಪೂಜಿಸುವ ವಿಧಾನ*
ಅತಿಯಾದ ಆಡಂಬರವಿಲ್ಲದೆ ಸರಳವಾಗಿ ದೇವಿಯನ್ನು ಪೂಜಿಸಬಹುದು, ದೇವಿಯ ದುಬಾರಿ ಪ್ರತಿಕೃತಿಯ ಬದಲು ಮನೆಯಲ್ಲೇ ಇರುವ ಬೆಳ್ಳಿ, ತಾಮ್ರ, ಹಿತ್ತಾಳೆ ಅಥವಾ ಸ್ಟೀಲ್ ನ ಮಧ್ಯಮ ಗಾತ್ರದ ಬಿಂದಿಗೆಗೆ ನೀರು ತುಂಬಿಸಿ ಶುಭ್ರವಾದ ಕೆಂಪಂಚಿನ ಶ್ವೇತವರ್ಣದ ಸೀರೆ ಉಡಿಸಿ, ಸ್ಥಳೀಯವಾಗಿ ದೊರಕುವ ಬಾಳೆ, ಕಬ್ಬು, ಮಾವು, ವಿವಿಧ ಬಗೆಯ ಹೂವುಗಳು, ಅಗತ್ಯವಿದ್ದರೆ ಹಣ್ಣುಗಳು ಮತ್ತು ವೀಳ್ಯದೆಲೆಯಿಂದ ಶೃಂಗರಿಸಿ ಪೂಜಿಸಿಬಹುದು.
ತಮ್ಮ ಮೈಮೇಲಿನ ಒಡವೆಗಳು ಮತ್ತು ಬೀರುವಿನಲ್ಲಿರುವ ಹಣಗಳಿಂದ ಮಾಡುವ ಶೃಂಗಾರ ಕಡಿಮೆ ಇರಲಿ, ಆಕೆಯೆ *ವರ ಮಹಾ ಲಕ್ಷ್ಮಿ ಆಗಿರುವಾಗ ಆ ದೇವಿಗೆ ಅದರ ಹಂಗಿರುವುದಿಲ್ಲ, ಆಕೆ ಕೇಳುವುದು ನಿಮ್ಮ ಭಕ್ತಿ ಭಾವ ಎಂಬುದನ್ನು ಗಮನದಲ್ಲಿಟ್ಟುಕೊಂಡು ಭಜಿಸಿದರೆ ಸಾಕು. *(ತಮ್ಮಲ್ಲಿರುವ ಒಡವೆ ವಸ್ತ್ರಗಳನ್ನು ಸಾರ್ವಜನಿಕವಾಗಿ ತೆರೆದಿಡುವುದು ಸಹ ಮುಂದೊಂದು ದಿನ ಅಪಯಕಾರಿಯಾದರೂ ಅಚ್ಚರಿ ಪಡಬೇಕಿಲ್ಲ)*
*ದೇವಿ ಪೂಜಿಸಲು ಗೋಧೂಳಿ ಒಳ್ಳೆಯ ಸಮಯ*
ದೇವಿಯನ್ನು ಕೂರಿಸಿ ಶೃಂಗರಿಸಿ ಪೂಜಿಸಲು ಸಂಜೆಯ ಗೋಧೂಳಿ ಸಮಯ ಬಹಳ ಪ್ರಶಸ್ತವಾದ ಸಮಯವೆಂದು ಹಿರಿಯರು ಹೇಳುತ್ತಾರೆ, ಸಂಪೂರ್ಣ ಉಪವಾಸ ಮಾಡಲಾಗದಿದ್ದರೂ ದ್ರವಹಾರ ಸೇವಿಸಿ ಪೂಜಿಸಿದರೂ ಸಾಕು. ದೇವಿಯ ಪೂಜೆಗೆ ಮೊದಲು ಗಣಪತಿಯನ್ನು ಪೂಜಿಸಿ ನಂತರ ದೇವಿಗೆ ಪೂಜೆ ಸಲ್ಲಿಸಬೇಕೆಂದು ಶಾಸ್ತ್ರಜ್ಞರು ಹೇಳುತ್ತಾರೆ. ಪೂಜೆಯ ಸಮಯದಲ್ಲಿ ಕೈಗೆ ಕಟ್ಟಿಕೊಂಡ ದಾರವನ್ನು ಗೌರಿ ಹಬ್ಬದಂದೇ ಬಿಚ್ಚಬೇಕು.
ಹೊಸದಾಗಿ ಮದುವೆಯಾದ ಹೆಂಗಸರು ಒಂಭತ್ತು ವರ್ಷಗಳು ನಿರಂತರವಾಗಿ ವರಮಹಾಲಕ್ಷ್ಮಿ ಪೂಜೆಯನ್ನು ಭಕ್ತಿಯಿಂದ ಪೂಜಿಸಿದರೆ ಶುಭಕರವಾಗಲಿದೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಹಬ್ಬದ ಹಿನ್ನೆಲೆ-ವೈಶಿಷ್ಟ್ಯ
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯ ಬಗ್ಗೆ ಯೋಚಿಸುವುದಾದರೆ ಪುರಾಣದಲ್ಲಿ ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡಿದ್ದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ ದೇವಿಯು ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಆ ಕಾರಣ ಚಾರುಮತಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ವರಮಹಾಲಕ್ಷ್ಮಿಯನ್ನು ಆರಾಧಿಸಿ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾಳೆ. ಆದ್ದರಿಂದಲೇ ಇಷ್ಟಾರ್ಥಗಳನ್ನು ಪೂರೈಸುವ ಲಕ್ಷ್ಮಿಯ ಆರಾಧನೆಗಾಗಿ ಈ ವರಮಹಾಲಕ್ಷ್ಮಿ ಹಬ್ಬ. ಈ ದಿನ ಲಕ್ಷ್ಮಿಯನ್ನು ಶ್ರದ್ಧೆ-ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅಂದರೆ ನೀವು ದೇವಿಯನ್ನು ಪೂಜಿಸಿದರೆ ಸಿಗುವ ಫಲಕ್ಕಿಂತ ನಿಮ್ಮ ಅತ್ತೆ ಮಾವಂದಿರನ್ನು ಪೂಜಿಸಿದರೇ ಹೆಚ್ಚಿನ ಫಲ ದೊರೆಯಲಿದೆ.
(ಕೆಲವು ಮಾಹಿತಿಯನ್ನು ಜಾಲತಾಣದಲ್ಲಿ ಹೆಕ್ಕಿಕೊಳ್ಳಲಾಗಿದೆ)
ಗೋ ರಾ ಶ್ರೀನಿವಾಸ...
ಮೊ;9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು