Tel: 7676775624 | Mail: info@yellowandred.in

Language: EN KAN

    Follow us :


ಹತ್ತಾರು ಲಕ್ಷ ದೋಖಾ ಎಸಗಿ ಅಮಾನತು ಆಗಿದ್ದ ಶಂಕರ್ ಗೆ ಮನವಿ ಮೇರೆಗೆ ಪುನರ್ ನೇಮಕ ?!!!?

Posted date: 28 Aug, 2019

Powered by:     Yellow and Red

ಹತ್ತಾರು ಲಕ್ಷ ದೋಖಾ ಎಸಗಿ ಅಮಾನತು ಆಗಿದ್ದ ಶಂಕರ್ ಗೆ ಮನವಿ ಮೇರೆಗೆ ಪುನರ್ ನೇಮಕ ?!!!?

ಚನ್ನಪಟ್ಟಣ: ರಾಮನಗರ ಜಿಲ್ಲಾ ಪಂಚಾಯತಿ ಅನುದಾನವನ್ನು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು, ಕೋಡಂಬಳ್ಳಿ ಮತ್ತು ಮಳೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳ ಹೆಸರಿನಲ್ಲಿ *೨೦,೦೦೦,೦೦* *(ಇಪ್ಪತ್ತು ಲಕ್ಷ)* ಕ್ಕೂ ಹೆಚ್ಚು ಹಣವನ್ನು ಪ್ರೊಬೆಷನರಿ ಇಂಜಿನಿಯರ್ ಶಂಕರ್, ಪ್ರಭಾರ ಅಭಿಯಂತರ ಕುಮಾರಸ್ವಾಮಿ ಮತ್ತು ಗುತ್ತಿಗೆದಾರರು ದುರುಪಯೋಗ ಪಡಿಸಿಕೊಂಡಿದ್ದು ಎಲ್ಲಾ ದಾಖಲೆಗಳೊಂದಿಗೆ ನಮ್ಮ ಪತ್ರಿಕೆಯಲ್ಲಿ ಸರಣಿ ವರದಿಗಳನ್ನು ಪ್ರಕಟಿಸಲಾಗಿತ್ತು.


ಮಾಹಿತಿ ಹಕ್ಕು ಕಾರ್ಯಕರ್ತ ವಿ ಜಿ ಕೃಷ್ಣೇಗೌಡ ಪತ್ರಿಕೆ ಮತ್ತಿತರ ದಾಖಲೆಗಳೊಂದಿಗೆ ಅಂದಿನ ಜಿಲ್ಲಾ ಪಂಚಾಯತಿ *ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಲ್ಲೈಮುಹಿಲನ್* ರವರಿಗೆ ಈ ಮೇಲಿನ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದ್ದು *ಇಂಜಿನಿಯರ್ ಶಂಕರ್* ರವರನ್ನು ತಕ್ಷಣ ಜಾರಿಗೆ ಬರುವಂತೆ *ಅಮಾನತು ಆದೇಶ* ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಕಾಮಗಾರಿಯನ್ನು ತನಿಖೆಗೊಳಪಡಿಸಿ ಪರೀಕ್ಷಿಸುವಂತೆ ಆದೇಶ ಮಾಡಿದ್ದರು.


*ಲಾಳಾಘಟ್ಟ ಶಾಲೆಯ ಸೈಕಲ್ ಸ್ಟ್ಯಾಂಡ್ ಮತ್ತು ಹರಿಸಂದ್ರ ನೀಲಸಂದ್ರ ನಿಲ್ದಾಣದ ತಂಗುದಾಣಗಳನ್ನು ತನಿಖೆ ಮಾಡಿದ ಅಧಿಕಾರಿಗಳು ಕಳಪೆ ಕಾಮಗಾರಿ ಹಾಗೂ ಹಣ ದುರುಪಯೋಗ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ವರದಿ ನೀಡುವುದಾಗಿ ನಮ್ಮ ಪತ್ರಿಕೆಗೆ ಅಂದೇ ತಿಳಿಸಿದರು.*


ಅಮಾನತು ಆಗಿದ್ದ ಜಿ ಎಸ್ ಶಂಕರ್ ಆದೇಶ ಸಂಖ್ಯೆ: ರಾಜಿಪಂ/ಸಿ೧/ಸಿಆರ್-೨೨/೨೦೧೭-೧೮. ದಿನಾಂಕ ೧೪/೦೫/೧೯ ರಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಳಿಗೆ *ನಾನು ಯಾವುದೇ ತಪ್ಪು ಮಾಡಿಲ್ಲ,* *ಸರ್ಕಾರಿ ಕೆಲಸದಲ್ಲಿ ಅಧಿಕ ಕಾರ್ಯಭಾರದಿಂದಾಗಿ ದಾಖಲೆಗಳನ್ನು ತಮಗೆ ಸಕಾಲದಲ್ಲಿ ಸಲ್ಲಿಸಲಾಗಿಲ್ಲ,* ತಂದೆ ತಾಯಿ, ಹೆಂಡತಿ ಮಕ್ಕಳು, ಮತ್ತು ಸಹೋದರ ಸಹೋದರಿಯರು ಇರುವ ಕುಟುಂಬ ನಮ್ಮದಾಗಿದ್ದು ಎಲ್ಲರ ಜವಾಬ್ದಾರಿ ನನ್ನ ಮೇಲಿರುವುದರಿಂದ ಆದೇಶ ತೆರವುಗೊಳಿಸಬೇಕೆಂದು ಪತ್ರದ ಮೂಲಕ ಮನವಿ ಮಾಡಿದ್ದರು.


೧೧/೦೭/೧೯ ರಂದು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಉಲ್ಲೇಖ: ರಾಜಿಪಂ/ಸಿ೧/ಸಿಆರ್-೨೨/೨೦೧೭/೧೮  ಸಂಖ್ಯೆ ಯಡಿಯಲ್ಲಿ ೧) ಸ ಪ್ರ ಕಾ, ಗ್ರಾ ಮತ್ತು ಪಂ ರಾ ಇಲಾಖೆ ಬೆಂಗಳೂರು. ೨) ಮು ಅ ಗ್ರಾ ಭವನ ಬೆಂಗಳೂರು, ೩) ಅಧ್ಯಕ್ಷರು ಜಿಪಂ ರಾಮನಗರ, ೪) ಉಪಾಧ್ಯಕ್ಷರು ಜಿಪಂ ರಾಮನಗರ, ೫) ಕಾ ಪಾ ಅ ಪಂ ರಾ ಇಂ ವಿಭಾಗ ರಾಮನಗರ, ೬) ಸ ಕಾ ಅ ಪಂ ರಾ ಇಂ ವಿಭಾಗ ರಾಮನಗರ, ೭) ಸ ಕಾ ಅ ಪಂ ರಾ ಇಂ ಉ ವಿಭಾಗ ರಾಮನಗರ, ಈ ಎಲ್ಲಾ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ಪತ್ರ ಬರೆದು ಶ್ರೀ ಜಿ ಎಸ್ ಶಂಕರ್ ಕಿರಿಯ ಅಭಿಯಂತರರು ಪಂಚಾಯತ್ ರಾಜ್ ಉಪ ವಿಭಾಗ, ಚನ್ನಪಟ್ಟಣ ರವರನ್ನು *ಉಲ್ಲೇಖ (೧) ಆದೇಶದಂತೆ ಅಮಾನತುಗೊಳಿಸಲಾಗಿರುತ್ತದೆ. ಸದರಿಯವರು ಉಲ್ಲೇಖ (೨) ರ ಮನವಿಯಲ್ಲಿ ಪುನರ್ ನೇಮಕ ಮಾಡಲು ಕೋರಿದ್ದಾರೆ,*  *ಸದರಿಯವರ ಮನವಿಯನ್ನು ಪರಿಶೀಲಿಸಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಮುಂದಿನ ಆದೇಶದವರೆಗೆ ಸದರಿಯವರನ್ನು ಪುನರ್ ನೇಮಕ ಮಾಡಲು ಆದೇಶಿಸಿರುವುದು* ಹಾಗೂ ಅಮಾನತು ಮಾಡುವಾಗ ಅಧಿಕಾರಿಗಳಿಗೆ ಮಾತ್ರ ಪತ್ರ ಬರೆದಿದ್ದು ಅಮಾನತು ತೆರವುಗೊಳಿಸುವಾಗ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೂ ಪತ್ರ ಬರೆದಿರುವುದು ಅನುಮಾನಕ್ಕೆಡೆ ಮಾಡಿದೆ, ಇದು ಪ್ರಕರಣ ಮುಚ್ಚಿ ಹಾಕಲು ರಾಜಕೀಯ ಪ್ರೇರಣೆಯೇ ? ಎಂದು ದೂರುದಾರ ವಿ ಜಿ ಕೃಷ್ಣೇಗೌಡ ಹೇಳಿದ್ದಾರೆ.


*ಸಾರ್ವಜನಿಕ ರ ತೆರಿಗೆ ಹಣಕ್ಕೆ ಬೆಲೆಯೇ ಇಲ್ಲವೇ ? ಕಳಪೆ ಕಾಮಗಾರಿ ನಡೆದಿರುವ ಕಡೆ ತಂಗಲಿರುವ ಸಾರ್ವಜನಿಕ ರ ಜೀವಕ್ಕೆ ಬೆಲೆ ಇಲ್ಲವೇ ? ಮುಂದೆ ಇನ್ನಷ್ಟೂ ಕಳಪೆ ಕಾಮಗಾರಿ ಮಾಡಿ ಅಥವಾ ಕಾಮಗಾರಿ ಮಾಡದೇ ಯಾವುದೋ ಎಂದೋ ಆಗಿರುವ ಕೆಲಸಕ್ಕೆ ಮತ್ತೊಂದು ಬಿಲ್ ಬರೆದು ಹಣ ಗುಳುಂ ಮಾಡಲು ಇವರುಗಳು ಸಹ ಕೈಜೋಡಿಸಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ದಟ್ಟವಾಗಿ ಹರಿದಾಡುತ್ತಿದೆ.*


ಅಮಾನತು ಆಗಲು ಕಾರಣವಾಗಿರುವ ಕಾಮಗಾರಿಗಳಲ್ಲದೇ ಈಗಾಗಲೇ ಗುಳುಂ ಮಾಡಿರುವ ಇನ್ನೂ ಅನೇಕ ಕಾಮಗಾರಿಗಳ ಮಾಹಿತಿಯನ್ನು ಕಲೆ ಹಾಕಿ ಸಾರ್ವಜನಿಕ ರ ತೆರಿಗೆ ಹಣ ಮತ್ತು ಅವರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ದೋಖಾ ಇಂಜಿನಿಯರ್ ಗಳನ್ನು ಶಾಶ್ವತವಾಗಿ ಕೆಲಸದಿಂದ ತೆಗೆದುಹಾಕಬೇಕಾಗುತ್ತದೆ.


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑