ಸ್ನೇಹ ಸಂಬಂಧ ಕಳೆದುಕೊಳ್ಳುವ ತೊಳಲಾಟದಲ್ಲಿ ಖಾಸಗಿ ಸಾಲಗಾರರು
ಚನ್ನಪಟ್ಟಣ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುವ ಅಂಚಿನಲ್ಲಿ ನೊಂದವರ ಬಾಳಿಗೆ ಬೆಳಕು ನೀಡುವ ಐತಿಹಾಸಿಕ ಹಾಗೂ ಮಾನವೀಯ ಕಾಯ್ದೆ ಅಂದರೆ ಕರ್ನಾಟಕ ಋಣ ಪರಿಹಾರ ಕಾಯ್ದೆ ಜಾರಿಗೆ ತಂದು ಮುಂದಿನ ಚುನಾವಣೆಯಲ್ಲಿ ಬಡವರ ಮತಗಳ ಖಾತೆಯನ್ನು ಕುಮಾರಸ್ವಾಮಿ ಭದ್ರ ಮಾಡಿಕೊಂಡು ಬೀಗಿದರೆ ಸದ್ಯದ ಪರಿಸ್ಥಿತಿಯಲ್ಲಿ ದುಡ್ಡಿಲ್ಲದ, ತಡವಾಗಿಯಾದರೂ ಕೊಟ್ಟವರ ಋಣ ತೀರಿಸಲು ತಯಾರಿರುವ ಪ್ರಾಮಾಣಿಕ ಸಾಲಗಾರರು ಈ ಮೂರು ತಿಂಗಳೊಳಗೆ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿರುವುದು ಸತ್ಯ*
ಕರ್ನಾಟಕ ಋಣ ಪರಿಹಾರ ಕಾಯ್ದೆಯನ್ನು ದಿ: ದೇವರಾಜ ಅರಸು ಹೆಸರಿನಲ್ಲಿ ತಮ್ಮ ಅಧಿಕಾರದ ಅವಧಿಯಲ್ಲಿ ಅನೇಕ ಬಾರಿ ಹೇಳಿಕೊಂಡು ಬಂದಿದ್ದು, ಇದೇ ವೇಳೆ ರೈತರ ಸಾಲಮನ್ನಾ ಮಾಡಿದ್ದರೂ ಸಹ ಋಣ ಪರಿಹಾರ ಕಾಯ್ದೆ ಮಾತ್ರ ಉಳಿಸಿಕೊಂಡು ಬಂದಿದ್ದರು, ಈ ಬಾರಿ ಅಧಿಕಾರ ಉಳಿಸಿಕೊಳ್ಳಲಾಗದು ಮತ್ತು ಯಾವಾಗ ಬೇಕಾದರೂ ಚುನಾವಣೆ ಬರಬಹುದು ಎಂದು ಮನಗಂಡ ಕುಮಾರಸ್ವಾಮಿ ಯವರು ರಾಷ್ಟ್ರಪತಿಗಳ ಅಂಕಿತದೊಂದಿಗೆ ಋಣ ಪರಿಹಾರ ಕಾಯ್ದೆ ಜಾರಿಗೆ ತಂದಿರುವುದು ಸ್ಪಷ್ಟವಾಗಿದೆ.
ಶೇಕಡಾ ೯೦ ಕ್ಕೂ ಹೆಚ್ಚು ಮಂದಿಗೆ ವರದಾನವಾದರೇ ಶೇಕಡಾ ೧೦ ಕ್ಕೂ ಕಡಿಮೆ ಮಂದಿಗೆ ನುಂಗಲಾರದ ತುತ್ತಾಗಿರುವುದು ವೇದ್ಯವಾಗುತ್ತಿದೆ.
ನಗರದಲ್ಲಿ ವ್ಯಾಪಾರ ಮಾಡುವ ಬಹುತೇಕ ಕಿರಾಣಿ, ಬೀದಿಬದಿ ಮತ್ತು ಇನ್ನಿತರೇ ಅಂಗಡಿಗಳವರು ದಿನ, ವಾರ ಮತ್ತು ತಿಂಗಳ ಕಂತು ಗಳಿಗೆ ಹಣ ಪಡೆದಿರುವವರೇ ಆಗಿದ್ದಾರೆ, ಇವರುಗಳು ಇಂದು ಕಟ್ಟುವುದಿಲ್ಲ ಎನ್ನುವುದಾದರೆ ಮುಂದಿನ ದಿನಗಳಲ್ಲಿ ಯಾರೂ ಹಣ ಕೊಡುವುದಿಲ್ಲ, ಅಂದ ಹಾಗೆ ಬೀದಿಬದಿ ವ್ಯಾಪಾರಿಗಳಿಗೆ ಜಾರಿಗೆ ಬಂದಿರುವ *ಬಡವರ ಬಂಧು ಮತ್ತು ಮುದ್ರಾ ಯೋಜನೆ* ಎಲ್ಲರಿಗೂ ದೊರೆತಿರದ ಕಾರಣ ಅವರು ಲೇವಾದೇವಿ ಗಾರರ ಅಡಿಯಾಳಾಗಲೇ ಬೇಕಿದೆ.
*ನಿಧಾನವಾಗಿಯಾದರೂ ತೀರಿಸುವ ಆಶಯದವರಿಗೆ ಸಂಕಟ*
ಈ ಕಾಯ್ದೆಯ ಉಪಯೋಗವನ್ನು ಕೇವಲ ಮೂರು ತಿಂಗಳೊಳಗೆ ಉಪಯೋಗಿಸಿಕೊಳ್ಳಬೇಕು, ಅಂದರೆ ತಮ್ಮ ವ್ಯಾಪ್ತಿಗೆ ಬರುವ *ಉಪವಿಭಾಗಾಧಿಕಾರಿ* ಕಛೇರಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ದೂರು ನೀಡಬೇಕು, ಅಧಿಕಾರಿಗಳು ತಾವು ಅಡಮಾನ ಇಟ್ಟಿರುವ ದಾಖಲೆಗಳನ್ನು ಲೇವಾದೇವಿ ಗಾರರಿಂದ ಹಿಂತಿರುಗಿಸಿ ಕೊಡುವುದರ ಜೊತೆಗೆ ಇನ್ನೆಂದೂ ಹಣ ವಾಪಸ್ಸು ಕೊಡದಂತೆ ಕಾನೂನು ಪ್ರಕಾರ ಬರೆಸಿಕೊಡಲಿದ್ದಾರೆ.
ತಮ್ಮ ಆತ್ಮೀಯ ಸ್ನೇಹಿತರು ಮತ್ತು ಹತ್ತಿರದ ಸಂಬಂಧಿಗಳಿಂದಲೇ ಸಾಲ ಪಡೆದಿರುವ ಅನೇಕ ಮಂದಿ ದೂರು ಕೊಡುವುದೋ ಅಥವಾ ಸುಮ್ಮನಿರುವುದೋ ತಿಳಿಯದೇ ಕಂಗಾಲಾಗಿರುವುದು ಸತ್ಯ ಸಂಗತಿ.
ಸಾಲಗಾರರು ಬಡ್ಡಿ ಸಮೇತ ಈಗಲೇ ಕೊಡಬೇಕೆಂದು ಹಠ ಹಿಡಿದಿರುವುದರಿಂದ ಹಾಗೂ ಸದ್ಯದಲ್ಲೇ ಅವರಿಗೆ ಹಣ ಕೊಡಲು ಸಾಧ್ಯವಾಗದಿರುವುದರಿಂದ ದೂರುಕೊಡುವುದೋ ಬೇಡವೋ ಎಂಬ ಜಿಜ್ಞಾಸೆ ಯಲ್ಲಿ ತೊಡಗಿದ್ದಾರೆ.
*ಈರ್ವರೂ ಧರ್ಮ ಸಂಕಷ್ಟ ದಲ್ಲಿ*
ಹಣ ಕೊಟ್ಟಿರುವವರು ದೂರು ನೀಡಿದರೇ ಹಣ ಕಳೆದುಕೊಳ್ಳಬೇಕಲ್ಲ ಎಂದು ಪರಿತಪಿಸುತ್ತಿದ್ದರೆ, ಹಣ ಪಡೆದವರು ಸಕಾಲದಲ್ಲಿ ಹಣ ಕೊಡಲಾಗದಿರುವುದರಿಂದ ಸ್ನೇಹ ಸಂಬಂಧ ಗಳು ಹಳಸುವುದರ ಜೊತೆಗೆ ಮುಂದಿನ ಕಷ್ಟಕಾಲದಲ್ಲಿ ಯಾರೂ ಆಗುವುದಿಲ್ಲ ಎಂಬುದರ ಮನವರಿಕೆಯಿಂದ ಈ ಮೂರು ತಿಂಗಳೊಳಗೆ ದೂರು ನೀಡುವುದೋ ಬೇಡವೋ ಎಂದು ಮರುಗುತ್ತಿರುವುದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ.
*ಸರ್ಕಾರ ಏನು ಮಾಡಬಹುದಿತ್ತು*
ಹೆಚ್ಚು ಮೌಲ್ಯದ ಅಡಮಾನ, ಹೆಚ್ಚು ಬಡ್ಡಿ ಪಡೆದು ಕಡಿಮೆ ಸಾಲ ಕೊಟ್ಟಿರುವ ವ್ಯವಹಾರಗಾರರಿಗೆ ಈ ಕಾನೂನು ಜಾರಿ ಮಾಡಿ, ನ್ಯಾಯ ಸಮ್ಮತ ವ್ಯವಹಾರದವರಿಗೆ ಬಡ್ಡಿ ರಹಿತ (ಎಷ್ಟು ವರ್ಷ ಬಡ್ಡಿ ಕಟ್ಟಿದ್ದಾರೆ ಎಂಬುದನ್ನು ಆಧರಿಸಿ) ಅವರು ನಡೆಸಿರುವ ಒಟ್ಟು ವಹಿವಾಟಿನ ಲೆಕ್ಕ ಪಡೆದು ತೆರಿಗೆ ಮುರಿದುಕೊಂಡು ಮಿಕ್ಕ ಹಣವನ್ನು ಹಂತ ಹಂತವಾಗಿ ಸರ್ಕಾರವೇ ತೀರಿಸುವುದು ಅಥವಾ ಈ ಮೇಲಿನ ವಿಚಾರಣೆಯ ನಂತರ ಸಾಲಗಾರರೇ ಹಂತಹಂತವಾಗಿ ತೀರಿಸುವಂತಹ ಕಾನೂನು ಜಾರಿಗೊಳಿಸಿದರೆ ಈರ್ವರಿಗೂ ಸಮಾಧಾನ ಇರುತಿತ್ತು.
*ಬಗೆಹರಿಯದ ಗೊಂದಲ, ಬೇಗ ಬಗೆಹರಿಸಲಿ*
ಸಾಲ ಕೊಟ್ಟವರು ಮತ್ತು ಪಡೆದಿರುವವರು ಇಬ್ಬರೂ ಕಾಯ್ದೆ ಬಗ್ಗೆ ಗೊಂದಲ ಹೊಂದಿರುವುದರ ಜೊತೆಗೆ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ನವರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾಯುತಿದ್ದಾರೆ, ಕಾನೂನು ಬದ್ದವಾಗಿ ಸಾಲ ಕೊಟ್ಟಿರುವ ಲೇವಾದೇವಿಗಾರರು ಕೋಟ್೯ ಮೊರೆ ಹೋಗುವುದಾಗಿ ಹೇಳಿಕೆ ನೀಡಿದ್ದಾರೆ, ಸಂಬಂಧಿಸಿದ ಅಧಿಕಾರಿಗಳು ಈ ಕಾಯ್ದೆ ಯ ಬಗ್ಗೆ ಸರಳವಾಗಿ ಉತ್ತರಿಸಿ ಗೊಂದಲ ಪರಿಹರಿಸುವುದರ ಜೊತೆಗೆ ಈರ್ವರಿಗೂ ನ್ಯಾಯ ಒದಗಿಸಿಕೊಡಬೇಕಾಗಿದೆ.
(ಈ ಹಿಂದೆ ಬಹುತೇಕ ಸಾಲಗಾರರೆಲ್ಲರೂ ಅಂದು ನಮ್ಮ ಕಷ್ಟಕ್ಕೆ ಕೊಟ್ಟಿದ್ದಾರೆ, ನಾವು ವಾಪಸ್ಸು ಮಾಡುತ್ತೇವೆ ಯಾವ ಕಾನೂನು ನಮಗೆ ಬೇಡ ಎಂದೇಳುತ್ತುದ್ದವರೆಲ್ಲರೂ ಋಣಮುಕ್ತ ಅರ್ಜಿ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದು.....!!!!!?????.)
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು