Tel: 7676775624 | Mail: info@yellowandred.in

Language: EN KAN

    Follow us :


ಅನ್ನದಾನೇಶ್ವರ ಶ್ರೀ ಗಳಿಗೆ ಅರವತ್ತೊಂದು

Posted date: 08 Sep, 2019

Powered by:     Yellow and Red

ಅನ್ನದಾನೇಶ್ವರ ಶ್ರೀ ಗಳಿಗೆ ಅರವತ್ತೊಂದು

ರಾಮನಗರ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧಿಪತಿಗಳಾಗಿದ್ದ ಭೈರವೈಕ್ಯ *ಪದ್ಮಭೂಷಣ ಡಾ ಬಾಲಗಂಗಾಧರ ನಾಥ ಸ್ವಾಮೀಜಿಗಳ* ಪರಮ ಶಿಷ್ಯರಾಗಿದ್ದ ಹಾಗೂ ಈಗಿನ ಪೀಠಾಧಿಪತಿಗಳಾದ ಡಾ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡು *ಅಂಧ ಮಕ್ಕಳ ಕಣ್ಮಣಿಯಾಗಿರುವ ಶ್ರೀ ಅನ್ನದಾನೇಶ್ವರ ನಾಥ ಸ್ವಾಮೀಜಿಗಳು* ಇಂದು ತಮ್ಮ ಅರವತ್ತೊಂದನೇ ಜನ್ಮ ದಿನವನ್ನು ತಮ್ಮ ಮೂಲ ಕ್ಷೇತ್ರವಾದ ಕನಕಪುರ ತಾಲೂಕಿನ ಶಿವಗಿರಿ (ಶಿವಾಲ್ದಪ್ಪನ ಬೆಟ್ಟ) ಯಲ್ಲಿ ಭಕ್ತರ ನಡುವೆ ಸರಳವಾಗಿ ಆಚರಿಸಿಕೊಂಡರು.


*ಶ್ರೀ ಶ್ರೀ ಗಳ ಬಗ್ಗೆ ಒಂದಿಷ್ಟು*


ಶ್ರೀ ಗಳು ಗಾಂಧಿ ವಾದಿ ಎಂದೇ ಪ್ರಸಿದ್ದರಾಗಿದ್ದ *ಪೂಜ್ಯ ಕರಿಯಪ್ಪನವರ* ರೂರಲ್ ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿದ್ದಾಗಲೇ ಆಧ್ಯಾತ್ಮ ಒಲವು ಬೆಳೆಸಿಕೊಂಡಿದ್ದರು, ಜಮೀನ್ದಾರಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಶ್ರೀ ಗಳು ಶ್ರೀಮಂತಿಕೆಯನ್ನು ಬಿಟ್ಟು ದೊಡ್ಡ ಆಲಹಳ್ಳಿ ಬಳಿ ಇರುವ ಶಿವಾಲ್ದಪ್ಪ ಬೆಟ್ಟದಲ್ಲಿ ಸಣ್ಣ ಗುಡಿಸಲು ನಿರ್ಮಿಸಿಕೊಂಡು ಅಜ್ಞಾತ ಸ್ಥಳದಲ್ಲಿ ಧ್ಯಾನಸಕ್ತರಾಗಿ *ಸುಜ್ಞಾನ ಬೆಳೆಸಿಕೊಂಡು ಪರಿಪೂರ್ಣ ಸನ್ಯಾಸಿಯಾದರು.*


ಒಕ್ಕಲಿಗರ ಮಠ ಎಂದು ಬಿಂಬಿತವಾಗಿದ್ದರೂ ಸರ್ವಧರ್ಮ ಮತ್ತು ಸರ್ವ ಜನಾಂಗದ ಭಕ್ತರ ಆಲಯವಾಗಿದ್ದ ಆದಿಚುಂಚನಗಿರಿ ಯ ಪೀಠಾಧ್ಯಕ್ಷರಾದ *ಬಾಲಗಂಗಾಧರ ನಾಥ ಸ್ವಾಮೀಜಿಗಳು* ಶಿವಗಿರಿ ಕ್ಷೇತ್ರದ ಜೊತೆಗೆ ನಮ್ಮ ಶಾಖಾ ಮಠವನ್ನು ನೋಡಿಕೊಳ್ಳುವಂತೆ ಮನವೊಲಿಸಿ ಕರೆ ತಂದರು, ಹಿರಿಯ ಮತ್ತು ಈಗಿನ ಸ್ವಾಮೀಜಿಗಳಿಗೆ ಅತ್ಯಂತ ಪ್ರಿಯವಾದ ಶಾಖಾ ಮಠವೆಂದರೆ ಅದು ರಾಮನಗರ ದ ಶಾಖಾ ಮಠ, ಅದಕ್ಕೆ ಕಾರಣ ಇಲ್ಲಿನ *ಅಂಧರ ಶಾಲೆ* ಆದಿಚುಂಚನಗಿರಿ ಎಲ್ಲಾ ಸ್ವಾಮೀಜಿಗಳಿಗಿಂತಲೂ ಒಂದು ಕೈ ಮೇಲಾಗಿ ಅಂಧ ಮಕ್ಕಳನ್ನು ಪ್ರೀತಿಸುವ, ಅವರ ಆರೋಗ್ಯ ಮತ್ತು ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ಕೊಡುವಲ್ಲಿ ಅನ್ನದಾನೇಶ್ವರ ನಾಥ ಸ್ವಾಮೀಜಿಗಳು ಮಹಾಸಂಸ್ಥಾನದ ಎಲ್ಲಾ ಮಠಗಳಿಗೂ ಒಂದು ಕೈ ಮೇಲೆನ್ನಲು ಅಡ್ಡಿಯಿಲ್ಲ.


ಮಹಾಸಂಸ್ಥಾನ, ಹಿರಿಯ ಸ್ವಾಮೀಜಿ ಹಾಗೂ ಅಂಧ ಮಕ್ಕಳ ಪ್ರೀತಿಯ ಸಂಕೇತವಾಗಿ ಇಂದಿಗೂ ಹಿರಿಯ ಸ್ವಾಮೀಜಿಗಳು ಉಪಯೋಗಿಸಿ ನೀಡಿದ ಹಳೆಯ ಕಾರನ್ನೇ ಬಳಸುತ್ತಿರುವುದು ಅವರ ಸರಳತೆಗೆ ಸಾಕ್ಷಿ. *ಅರ್ಚಕರಹಳ್ಳಿ ಶಾಖಾ ಮಠದಲ್ಲಿ ಅಂಧರ ಶಾಲೆ, ಬಿಜಿಎಸ್ ವಲ್ಡ್೯ ಸ್ಕೂಲ್ ಮತ್ತು ಪಿಯು ಕಾಲೇಜು, ಬಾನಂದೂರಿನ ಮಠ ಮತ್ತು ಶಾಲೆ, ಕನಕಪುರ ಮಠ ಮತ್ತು ಶಾಲೆ, ಜೆ ಬ್ಯಾಡರಹಳ್ಳಿ ಶಾಲೆ, ಇತ್ತೀಚಿಗೆ ಹೇಮಗಿರಿ ಯ ಬೆಟ್ಟ ಹಾಗೂ ಅವರ ಪ್ರಿಯವಾದ ಶಿವಗಿರಿ ಮಠದ ಉಸ್ತುವಾರಿಯನ್ನು ಅವರೇ ನೋಡಿಕೊಂಡು ಪ್ರೀತಿಯಿಂದ ಕರೆದ ಭಕ್ತರ ಕಾರ್ಯಕ್ರಮ, ಸಾರ್ವಜನಿಕ ಕಾರ್ಯಕ್ರಮ ದಲ್ಲಿ ಭಾಗವಹಿಸಿ, ವಿದ್ವತ್ಪೂರ್ಣ, ಆಚಾರ-ವಿಚಾರಗಳ ಸಮ್ಮಿಲನದ ಆಶೀರ್ವಚನ ನೀಡಿ ಭಕ್ತರ ಪಾಲಿಗೆ ನೈಜದೈವವಾಗಿ ರೂಪುಗೊಂಡಿದ್ದಾರೆ.*


ರಾಮನಗರ ಜಿಲ್ಲೆ ಹೇಳಿ ಕೇಳಿ ಘಟಾನುಗಟಿ ರಾಜಕಾರಣಿಗಳ ಆಡುಂಬೊಲದ ತವರೂರು, ಹಾವು ಮುಂಗುಸಿ ಗಳಂತಿರುವ ಎಲ್ಲಾ ರಾಜಕಾರಣಿಗಳನ್ನು ಒಂದೇ ತೆರನಡಿ ನೋಡುವ ಅವರ ಗುಣ ಎಲ್ಲಾ ರಾಜಕಾರಣಿಗಳು ಒಮ್ಮೆ ಹೋಗಿಬರಲು ಇಷ್ಟಪಡುತ್ತಾರೆ.

ಜಿಲ್ಲೆಗೆ ಯಾವುದೇ ಉನ್ನತಾಧಿಕಾರಿಗಳು ಬಂದರೂ ಅವರ ಸಲಹೆಯ ಜೊತೆಗೆ ಆಶೀರ್ವಾದ ಪಡೆಯದೆ ಕಾರ್ಯನಿರ್ವಹಿಸುವವರು ಬಹುತೇಕ ಕಡಿಮೆ.

*ನಾಡು-ನುಡಿ, ರೈತ-ಜಲ ದ ವಿಷಯವಾಗಿ ಅನ್ಯಾಯವಾದಾಗ ಬೀದಿಗಿಳಿದು ಹೋರಾಟ ಮಾಡುವ ಅವರ ದಿಟ್ಟತನ ಇಂದಿನ ಯುವಕರನ್ನು ನಾಚಿಸುವಂತಿದೆ.*


ಅರವತ್ತು ವರ್ಷ ಎಂದರೆ ಅರಳೋ ಮರಳೋ ಎನ್ನುವ ವಯಸ್ಸು ಎಂಬ ಗಾದೆಗೆ ವ್ಯತಿರಿಕ್ತವಾಗಿರುವ ಶ್ರೀ ಗಳು ಅರವತ್ತೊಂದಾದರು ಅರಳು ಹುರಿದಂತೆ ಮಾತನಾಡುವ, ನಡೆದುಕೊಳ್ಳುವ ಚಾತಿ ಹೊಂದಿರುವುದು ನಮ್ಮೆಲ್ಲರ ಸುದೈವ, ನಮ್ಮ ಶಾಲೆಯ ಎಲ್ಲಾ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಆಶೀರ್ವಚನ ಮತ್ತು ಶಾಲೆಯ ಆಡಳಿತದ ಬಗ್ಗೆ ಸಲಹೆ ನೀಡುವುದನ್ನು ಕೇಳುವುದೇ ನಮ್ಮ ಸುದೈವ.


ಶ್ರೀ ಶ್ರೀ ಅನ್ನದಾನೇಶ್ವರ ನಾಥ ಸ್ವಾಮೀಜಿಗಳು ನೂರಕ್ಕೂ ಹೆಚ್ಚು ಜನ್ಮ ದಿನಗಳನ್ನು ಆಚರಿಸಿಕೊಳ್ಳಲಿ ಎಂದು ಭಕ್ತಾಧಿಗಳಾದ ನಾವು ಪ್ರಾರ್ಥಿಸೋಣ.


*ಲಕ್ಷ್ಮಿ ಗೋ ರಾ ಶ್ರೀನಿವಾಸ...*

*ಕರಾಟೆ ಮತ್ತು ಯೋಗ ಶಿಕ್ಷಕಿ*

*ಬಿಜಿಎಸ್ ವಲ್ಡ್೯ ಸ್ಕೂಲ್ ರಾಮನಗರ.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑