ಬೇವೂರು ಜಿಲ್ಲಾ ಪಂಚಾಯತಿಯ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಲಕ್ಷೋಪಲಕ್ಷ ದೋಚಿದ ಶಂಕರ !
ಚನ್ನಪಟ್ಟಣ: ಬೇವೂರು ಜಿಲ್ಲಾ ಪಂಚಾಯತಿ ಭಾಗ ೨
ಅಂದಿನ ಜಿಲ್ಲಾ ಪಂಚಾಯತಿ ಪರಿಕ್ಷಾರ್ಥ *ಇಂಜಿನಿಯರ್ ಶಂಕರ್* ತಾಲ್ಲೂಕಿನ ಎಲ್ಲಾ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲೂ ತುಂಡು ಗುತ್ತಿಗೆ ಕಾಮಗಾರಿಗಳ ಹೆಸರಿನಲ್ಲಿ ಒಂದೊಂದು ಕಾಮಗಾರಿಯಲ್ಲೂ ಆರಂಕಿಯ ಹಣ ನುಂಗಿದ್ದು *ನೂತನ ಬಕಾಸುರ* ನಾಗಿ ಹೊರಹೊಮ್ಮಿದ್ದಾನೆ.
*ಹೊಂಗನೂರು, ಮಳೂರು ಮತ್ತು ಕೋಡಂಬಳ್ಳಿ* ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಠ *ಏಳು ಅಂಕಿ* ಯ ಹಣವನ್ನು ನುಂಗಿದ್ದು *ಬೇವೂರು* ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿಯೂ *ಹತ್ತು ಲಕ್ಷ* ರೂ ಆಜೂಬಾಜೂ ನುಂಗಿರುವ ಕಾಮಗಾರಿಗಳ ದಾಖಲೆಗಳಿವೆ, ಅಂದಿನ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ *ಕುಮಾರಸ್ವಾಮಿ, ಪರೀಕ್ಷಾರ್ಥ ಇಂಜಿನಿಯರ್ ಶಂಕರ್, ಆಯಾಯ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗಾದರರ ಜೊತೆಗೆ ಸಂಬಂಧಿಸಿದ ಜಿಲ್ಲಾ ಪಂಚಾಯತಿ ಸದಸ್ಯರನ್ನು* ಹೊಣೆಗಾರರನ್ನಾಗಿಸಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ವಿ ಜಿ ಕೃಷ್ಣೇಗೌಡ ಒತ್ತಾಯಿಸಿದ್ದಾರೆ.
ಬೇವೂರು ಜಿಲ್ಲಾ ಪಂಚಾಯತಿ ಯ *ತಿಟ್ಟಮಾರನಹಳ್ಳಿ ಗ್ರಾಮ ಘಟಾನುಘಟಿ ರಾಜಕಾರಣಿಗಳ ತವರೂರು*. ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೇ ಅರ್ಧಂಬರ್ಧ ಕಳಪೆ ಕಾಮಗಾರಿ ಮಾಡಿ ಹಣ ದೋಚಿರುವುದು ಬೆಳಕಿಗೆ ಬಂದಿದೆ.
ತಿಟ್ಟಮಾರನಹಳ್ಳಿ ಗ್ರಾಮದ ಹೊಸ ಬೀದಿಯ ಪುಟ್ಟಯ್ಯರ ಕೃಷ್ಣ ನ ಮನೆಯಿಂದ ಕೆಂಪಮ್ಮನ ಮನೆಯವರೆಗೆ ೨೦೧೬/೧೭ ನೇ ಸಾಲಿನ *ರಾಜ್ಯ ಸಭಾ ಸದಸ್ಯ ಎಂ ವಿ ರಾಜೀವ್ ಗೌಡ* ರವರ ಅನುದಾನದಲ್ಲಿ *ಗುತ್ತಿಗೆದಾರ ಎಸ್ ಕೆ ಸತೀಶ್* ಮಿಷನರಿ ಚರಂಡಿ ನಿರ್ಮಾಣ ಮಾಡಿದ್ದು ಕನಿಷ್ಠ *೩,೩೦.೦೦೦* ರೂಪಾಯಿಗಳು ನಷ್ಟವಾಗಿದೆ ಎಂದು ದಾಖಲೆಗಳ ಸಮೇತ ನಿರೂಪಿಸಿದ್ದಾರೆ.
*೪,೯೯,೦೦೦* ರೂಪಾಯಿಗಳ ಅನುದಾನದ ಈ ಕಾಮಗಾರಿಯಲ್ಲಿ ಅದರ ಪೋಟೋ ಲಗತ್ತಿಸದೆ ಮಾಜಿ ಸಚಿವ *ವಿ ವೆಂಕಟಪ್ಪ* ನವರ ಮನೆಯ ಪಕ್ಕದ ಚರಂಡಿ ಪೋಟೋ ಲಗತ್ತಿಸಿದ್ದಾರೆ. ಕಾಮಗಾರಿಯ ಉದ್ದ ಕೇವಲ *೩೫ ರಿಂದ ೩೮ ಅಡಿ ಇದ್ದು ಬಿಲ್ ನಲ್ಲಿ ೧೩೭ ಮೀಟರ್ ತೋರಿಸಿದ್ದಾರೆ*. ಕಾಮಗಾರಿ ಪೋಟೋ ತೋರಿಸಿರುವುದೇ ಒಂದು ಕಡೆಯಾದದರೆ ಕೆಲಸದ ಹೆಸರನ್ನು ತಿಟ್ಟಮಾರನಹಳ್ಳಿ ಗ್ರಾಮದ ಹೊಸಬೀದಿಯ *ಮಹಾತ್ಮ ಗಾಂಧಿ ಖಾತರಿ ಯೋಜನೆ* ಎಂದು ತೋರಿಸಿದ್ದಾರೆ. ಸರ್ಕಾರ ಮೂರನೇ ವ್ಯಕ್ತಿಯಿಂದ ಸ್ಥಳ ಮತ್ತು ಅಳತೆ ಪರಿಶೀಲನೆಗೆ ನಿಯೋಜಿಸಿದ್ದ ರಾಮನಗರ *ಗೌಸಿಯಾ ಇಂಜಿನಿಯರಿಂಗ್ ಕಾಲೇಜಿನ ಇಂಜಿನಿಯರ್ ಗಳು* ಕಾಮಗಾರಿಯ ಜಾಗ ಮತ್ತು ಅಳತೆಯನ್ನು ಪರಿಶೀಲಿಸದೆ ಅಳತೆ ಪರಿಶೀಲನೆ ವರದಿ ಕೊಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
*ರಾಜ್ಯಸಭಾ ಸದಸ್ಯರ* ಅನುದಾನ ದ ಈ ಕಾಮಗಾರಿಯನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸುವಾಗ *ವಿಧಾನ ಪರಿಷತ್ ಸದಸ್ಯರ* ಅನುದಾನವೆಂದು ಹೆಸರಿಸಿದ್ದು ಮೂರನೇ ವ್ಯಕ್ತಿಯ ಅಳತೆ ಪರಿಶೀಲನೆ ಯ ಬಗ್ಗೆ ಅನುಮಾನ ಉಂಟಾಗಿದ್ದು *ಗೌಸಿಯಾ ಕಾಲೇಜಿನ ಇಂಜಿನಿಯರ್ ಗಳ ಅನುಮತಿಯನ್ನು ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸ್ಸು* ಮಾಡಬೇಕೆಂದು ದೂರಿನಲ್ಲಿ ತಿಳಿಸಿರುವುದಾಗಿ ಉಲ್ಲೇಖಿಸಿದ್ದಾರೆ.
ಈ ಮೇಲಿನ ಇಂಜಿನಿಯರ್ ಗಳು ಅಭಿವೃದ್ಧಿ ಮಾಡದೇ ಹಣ ದೋಚುವುದನ್ನೇ ಕಾಯಕ ಮಾಡಿಕೊಂಡಿದ್ದು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು