ನಗರಕ್ಕೆ ಜಾದೂ ಸಾಯಿಬಾಬಾ. ಜನಮರಳೋ ಜಾತ್ರೇ ಮರಳೋ !?
ಚನ್ನಪಟ್ಟಣ: ನಗರದ ದೊಡ್ಡಮಳೂರು ಗ್ರಾಮದಲ್ಲಿ *ಡಾ ಶ್ರೀನಿವಾಸ* ರವರು ನಿರ್ಮಿಸಿರುವ *ಸತ್ಯಸಾಯಿಬಾಬಾ ಪ್ರೇಮ ಮಂಟಪ* ದ ಬಳಿ ಇಂದು ಏಕಾಏಕಿ ಪ್ರತ್ಯಕ್ಷಗೊಂಡ ಬಾಬಾ ಒಬ್ಬರನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದದ್ದು ಕಂಡುಬಂತು.
ಅಲ್ಲಿ ನೆರೆದಿದ್ದ ಸಾರ್ವಜನಿಕರು ತಲಾ ಒಂದೊಂದು ಹೇಳಿಕೆ ನೀಡುತ್ತಿದ್ದು *ಬರಿಗೈಯ್ಯಲ್ಲಿ ವಿಭೂತಿ, ಹೂವು, ಅಕ್ಕಿಕಾಳು ನೀಡಿದರು ಎಂದರೆ ಕೆಲವರಿಗೆ ಬೆಳ್ಳಿ ನಾಣ್ಯ, ಚಿನ್ನದ ತಗಡು ಮತ್ತು ಕಲ್ಲು ಸಕ್ಕರೆ ಯ ಪ್ರಸಾದ ನೀಡಿದರು* ಎಂದು ಹೇಳುತ್ತಿದ್ದರು.
*ಪ್ರತ್ಯಕ್ಷ ವರದಿಗೆಂದು ತೆರಳಿದ ನನಗೆ ಬಾಬಾ ಅವರನ್ನು ಮಾತನಾಡಿಸಲು ಮುಂದಾದಾಗ* ಅವರು ಹಿಂದಿಯಲ್ಲಿ ಮಾತನಾಡಿದರು. ನಾನು ಸಹ ಹಿಂದಿ ಭಾಷೆಯಲ್ಲಿ ತಮ್ಮ ನಾಮಧೇಯ, ತಮ್ಮ ಗ್ರಾಮ ಮತ್ತು ಇಲ್ಲಿಗೆ ಬಂದ ಉದ್ದಿಶ್ಯ ಕೇಳಲಾಗಿ ಅವರು ಯಾವುದಕ್ಕೂ ಉತ್ತರಿಸದೇ ಈ ಊರಿನ ಹೆಸರೇನು ನಿಮಗೆ ಗೊತ್ತೇ ಎಂದು ಮರು ಪ್ರಶ್ನಿಸಿದರು. ನಾನು ಚನ್ನಪಟ್ಟಣ ಎನ್ನಲಾಗಿ ಅಲ್ಲ ಇದು ಮಳೂರು ಎಂದಷ್ಟೇ ಹೇಳಿ ನಿಲ್ಲದೆ ಸರಸರ ನಡೆದೇ ಬಿಟ್ಟರು.
ಮಳೂರು ಪುಟ್ಟಸ್ವಾಮಿಗೌಡರ ಸಮಾಧಿ ಸ್ಥಳದಲ್ಲಿ ಕೆಲ ಸಮಯ ಸುತ್ತಾಡಿ ಒಬ್ಬ ಸ್ಥಳೀಯ ವೃದ್ದರೊಬ್ಬರನ್ನು ಕರೆದುಕೊಂಡು ಹೋದರು. ವೃದ್ದರನ್ನು ಪ್ರಶ್ನಿಸಲಾಗಿ ಅವರು ಹಿಂದೆ *ಏಪ್ರಿಲ್ ತಿಂಗಳಿನಲ್ಲಿ ಒಮ್ಮೆ ಬಂದಿದ್ದರು* ಈಗ ಮತ್ತೊಮ್ಮೆ ಬಂದಿದ್ದಾರೆ ಎಂದು ಭಕ್ತಿಯಿಂದ ಹೇಳಿದರು.
ನಂತರ ಅಪ್ಪಗೆರೆ ಗ್ರಾಮದ *ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿರುವ ಎಂ ಜಿ ರಸ್ತೆಯ ನಿವಾಸಿ ಯಶೋಧಮ್ಮ* ರವರ ಮನೆಗೆ ಆಗಮಿಸಿ ಸ್ನಾನ ಪೂಜಾಧಿಗಳೊಂದಿಗೆ ಭಕ್ತಾದಿಗಳ ಜೊತೆ ಭಜನೆಯಲ್ಲಿ ತೊಡಗಿದರು.
*ಅವರು ನಮಗೆ ಏನನ್ನೂ ಹೇಳುವುದಿಲ್ಲ, ನಾವು ಕೇಳುವುದು ಇಲ್ಲ, ಭಕ್ತಿಯ ಸೇವೆಯಷ್ಟೇ ನಮ್ಮ ಗುರಿ, ಅತಿಥಿಗಳನ್ನು ಸತ್ಕರಿಸುವುದು ನಮ್ಮ ಧ್ಯೇಯ. ಡಾ ಶ್ರೀನಿವಾಸ. ಸಾಯಿಬಾಬಾ ಪ್ರೇಮ ಮಂಟಪದ ಕತೃ*
*ಇದೇ ಮೊದಲು ನಮ್ಮ ಮನೆಗೆ ಆಗಮಿಸಿದ್ದಾರೆ, ನಮಗಾಗಿ ಏನನ್ನು ಕೇಳುವುದಿಲ್ಲ, ಕೇಳಲುಬಾರದು ? ಅವರಿಗೆ ಏನು ಬೇಕೆಂದಷ್ಟೇ ಕೇಳುತ್ತೇವೆ. ನಮ್ಮಲ್ಲಿ ಇರುವಷ್ಟು ಸಮಯ ಅವರ ಸೇವೆ ಮಾಡುತ್ತೇವೆ. ಯಶೋಧಮ್ಮ. ಮುಖ್ಯ ಶಿಕ್ಷಕಿ.*
ಒಟ್ಟಾರೆ ಜಾದೂ ಮಾಡಿದ ಬಾಬಾ ರವರನ್ನು ನೋಡಲು ಜನ ಮುಗಿ ಬಿದ್ದಿದ್ದು ಅವರನ್ನು ಸತ್ಕರಿಸಿದ್ದು ಮಾತ್ರ ಜನ ಮರಳೋ ! ಜಾತ್ರೆ ಮರಳೋ ಎಂಬಂತಿತ್ತು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು