ವಿಶ್ವದಲ್ಲೇ ದೊಡ್ಡ ಮತ್ತು ಶ್ರೇಷ್ಠ ಸಂವಿಧಾನ ನಮ್ಮದು ದಂಡಾಧಿಕಾರಿ ಸುದರ್ಶನ್
ಚನ್ನಪಟ್ಟಣ: ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಹಾಗೂ ಶ್ರೇಷ್ಠ ಸಂವಿಧಾನ ನಮ್ಮ ಸಂವಿಧಾನ ಎಂದು ತಹಶಿಲ್ದಾರ್ ಸುದರ್ಶನ್ ರವರು ಮಕ್ಕಳನ್ನು ಉದ್ದೇಶಿಸಿ ಹೇಳಿದರು.
ಅವರು ಇಂದು ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ೭೧ ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
೧೯೪೯ ಜನವರಿ ೨೬ ರಂದೇ ನಮ್ಮ ಸಂವಿಧಾನದ ಅನುಚ್ಛೇದಗಳನ್ನು ಬರೆಯಲಾಗಿತ್ತಾದರೂ ಲಾಹೋರ್ ಸ್ವತಂತ್ರಾ ನಂತರ ಅಂದರೆ ೧೯೫೧ ರ ಜನವರಿ ೨೬ ರಂದು ಅಧಿಕೃತವಾಗಿ ಘೋಷಿಸಲಾಯಿತು.
ಮೊನಾಕಿ ಎಂದರೆ ರಾಜಮನೆತನ. ವಂಶ ಪಾರಂಪರ್ಯವಾಗಿ ಬರುತ್ತಿದ್ದ ರಾಜಮನೆತನದ ಆಡಳಿತದ ಬದಲಾಗಿ ಜನರಿಂದ ಚುನಾಯಿತರಾಗಿ ಜನರೇ ಆಡಳಿತ ನಡೆಸುವ ಸಲುವಾಗಿ ಪ್ರಜಾಪ್ರಭುತ್ವವನ್ನು ಆಚರಣೆಗೆ ತರಲಾಯಿತು. ರಾಷ್ಟ್ರಪತಿ ಗಳು ಸಹ ಇದರಿಂದ ಹೊರತಾಗಿಲ್ಲ. ಹಾಗಾಗಿ ನಮ್ಮ ಸಂವಿಧಾನವೇ ನಮಗೆ ಶ್ರೇಷ್ಠ ಎಂದರು.
ಮುಖ್ಯ ಭಾಷಣಕಾರರಾದ ರಾಜ್ಯ ಶಾಸ್ತ್ರ ದ ಪ್ರಾಧ್ಯಾಪಕ ಎಂ ಜಿ ಭರತ್ ರಾಜ್ ಮಾತನಾಡಿ ಪುರಾತನ ಕಾಲದ ಋಗ್ವೇದದಲ್ಲಿಯೇ ೪೬ ಕಡೆ ಗಣರಾಜ್ಯ ಎಂಬ ಉಲ್ಲೇಖವಿದೆ. ಈ ಗಣರಾಜ್ಯವನ್ನು ಪಡೆಯಬೇಕಾದರೆ ಹಲವಾರು ಮಹನೀಯರ ಮಹತ್ವದ ಪಾತ್ರ ಅಡಗಿದೆ, ಅದೇ ರೀತಿ ಸಹಸ್ರಾರು ಮಂದಿಯ ಬಲಿದಾನವಾಗಿದೆ. ೧೯೪೫ ರ ತನಕ ಫ್ರೆಂಚರು, ಡಚ್ಚರು, ಬ್ರಿಟೀಷರು ಸೇರಿದಂತೆ ಹಲವು ದೇಶಗಳ ನಾಯಕರು ನಮ್ಮನ್ನಾಳಿದರು.
ಬ್ರಿಟೀಷರು ಎಲ್ಲಾ ಧರ್ಮದ ಸಮುದಾಯಗಳಿಗೂ ಭಾರತದಲ್ಲಿ ಆಶ್ರಯ ನೀಡಿದ್ದರು. ೧೨ ಅಧಿವೇಶನಗಳಲ್ಲಿ ೩೯೫ ವಿಧಿಗಳು ರಚಿತಗೊಂಡು ವಿಶ್ವ ವಿಖ್ಯಾತ ಸಂವಿಧಾನ ನಮ್ಮದಾಗಿದೆ. ಪ್ರಜಾಪ್ರಭುತ್ವ, ಆರ್ಥಿಕತೆ, ಉದಾರವಾದ, ಒಳಗೊಂಡ ಸಂವಿಧಾನ ನಮ್ಮದು ಎಂದರು.
ಹಲವಾರು ಶಾಲೆಯ ಮಕ್ಕಳಿಂದ ತಹಶಿಲ್ದಾರ್ ಸುದರ್ಶನ್ ರವರು ಧ್ವಜವಂದನೆ ಸ್ವೀಕರಿಸಿದರು. ಸಮಾಜದ ಹಲವು ಸ್ಥರಗಳಲ್ಲಿ ದುಡಿದ ಮಹನೀಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಮನೆಸೂರೆಗೊಂಡವು.
*ಕರಾಟೆ ಯ ಸ್ಟಂಟ್ ಗಳು ಚನ್ನಾಗಿದ್ದರೂ ಸಹ ಮಕ್ಕಳ ಹೊಟ್ಟೆಯ ಮೇಲೆ ಬೈಕ್ ಓಡಿಸುವ ದುಸ್ಸಾಹಸ ಮಾಡಿದ ಶಿಕ್ಷಕರ ವಿರುದ್ಧ ಕೆಲ ವೇದಿಕೆಯ ಅಧಿಕಾರಿಗಳು ಮತ್ತು ಪೋಷಕರು ಆತಂಕಗೊಂಡಿದ್ದಲ್ಲದೆ ಯುವ ವಿದ್ಯಾರ್ಥಿಗಳಿಗೆ ಬೈಕ್ ವೀಲ್ಹಿಂಗ್ ಬಗ್ಗೆ ನಾವೇ ಹೇಳಿಕೊಟ್ಟಂತೆ ಎಂದು ಕಿಡಿಕಾರಿದರು.*
*ಗಣ್ಯರ ಗೈರುಹಾಜರಿ*
*ಗಣರಾಜ್ಯೋತ್ಸವ ಎಂದರೆ ಇದೊಂದು ರಾಷ್ಟ್ರೀಯ ಬಹು ದೊಡ್ಡ ಹಬ್ಬ, ಇಂತಹ ಹಬ್ಬಕ್ಕೆ ಸ್ಥಳೀಯ ಶಾಸಕ *ಹೆಚ್ ಡಿ ಕುಮಾರಸ್ವಾಮಿ* ಸೇರಿದಂತೆ ಯಾವ ರಾಜ್ಯ ನಾಯಕರು ಆಗಮಿಸದಿರುವುದು ಹಬ್ಬಕ್ಕೆ ಮಾಡಿದ ಅವಮಾನ.
ಸ್ಥಳೀಯ ನಾಯಕರಾದ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರ ಗೈರುಹಾಜರಿ ಎದ್ದು ಕಾಣುತ್ತಿತ್ತು.*
ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರು, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು, ಪೌರಾಯುಕ್ತ ಶಿವನಂಕಾರಿಗೌಡ, ಅಬಕಾರಿ ಇಲಾಖೆಯ ರಾಜೇಂದ್ರ, ಕೃಷಿ ಇಲಾಖೆಯ ಅಪರ್ಣಾ, ಸಿಡಿಪಿಓ ಕಾಂತರಾಜು, ಅಕ್ಷರ ದಾಸೋಹದ ಸಿದ್ದಾರಾಜು, ಹಿಂದಳಿದ ವರ್ಗದ ಕುಮಾರ್, ಜಿಲ್ಲಾ ಪಂಚಾಯತಿ ಎಇಇ ಚನ್ನಪ್ಪ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜು, ಶಿಕ್ಷಕರಾದ ರಾಜಶೇಖರ, ರಂಗನಾಥ ಮತ್ತಿತರರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು