ನಗರದಲ್ಲಿ ಪುರಾಣ ಪ್ರಸಿದ್ದ ಕಾಮನ ಹಬ್ಬ, ನಟರು ಮತ್ತು ಸಾಹಿತಿಗಳು ಭೇಟಿ ನೀಡಿದ ರತಿ ಮನ್ಮಥರ ಹಬ್ಬ
ಚನ್ನಪಟ್ಟಣ: ನಗರದ ಮಂಡಿಪೇಟೆಯ ಗರುಡಗಂಭದ ಬೀದಿಯಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವಾಲಯದ ಮುಂಭಾಗ ಪುರಾಣ ಪ್ರಸಿದ್ಧ ರತಿ ಮನ್ಮಥ ರ ಹೋಳಿ ಹಬ್ಬವನ್ನು ಅಮಾವಾಸ್ಯೆ ಯಿಂದ ಹುಣ್ಣಿಮೆಯ (ಪೌರ್ಣಿಮೆ) ವರೆಗೆ ಅಂದರೆ ಹದಿನೈದು ದಿನಗಳ ಕಾಲ ಉತ್ಸವ ಸಮಿತಿಯಿಂದ ಅತಿ ವಿಜೃಂಭಣೆಯಿಂದ ನೆರವೇರಿಸಲಾಗುತ್ತಿದೆ.
ಗಿರಿಜಾ ಕಲ್ಯಾಣ ನಂತರ ದಕ್ಷಬ್ರಹ್ಮ ಮಾಡುವ ಯಜ್ಞ ನಂತರ ಅದೇ ಯಜ್ಞದ ಕೊಂಡಕ್ಕೆ ಬಿದ್ದು ಪ್ರಾಣಾರ್ಪಣೆ ಮಾಡುವ ಗಿರಿಜೆ, ಶಿವನ ರುದ್ರನರ್ತನ, ಬೆವರಿನಿಂದ ಹುಟ್ಟಿದ ವೀರಭದ್ರ, ಶಿವನ ಕೋಪ ತಣಿಸಲು ಮನ್ಮಥ ಹೂಡುವ ಹೂಬಾಣ, ರತಿಯ ಕೋರಿಕೆ ಮೇರೆಗೆ ಪ್ರಾಣಭಿಕ್ಷೆ ಇವೆಲ್ಲಾ ಪುರಾಣಕಾಲದ ಕಥೆಗಳ ಪಾತ್ರಗಳೇ ಇಂದಿನ ಕಾಮನ ಹಬ್ಬವಾಗಿ ಆಚರಣೆಯಲ್ಲಿವೆ. ಶತ ಶತಮಾನಗಳಿಂದಲೂ ಸಮಿತಿಯ ಮೂಲಕ ಅತಿ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಚನ್ನಪಟ್ಟಣದ ಇತಿಹಾಸದ ಕುರುಹುಗಳಲ್ಲಿ ಒಂದಾಗಿ ಬೆರೆತುಹೋಗಿದೆ.
ಕಳೆದ ಫೆಬ್ರವರಿ ತಿಂಗಳ ೨೬ ರ ಬುಧವಾರ ಸಂಜೆ ೦೭:೦೦ ಗಂಟೆಯ ಶುಭ ಗಳಿಗೆಯಲ್ಲಿ ರತಿಮನ್ಮಥ ರನ್ನು ಪ್ರತಿಸ್ಠಾಪಿಸಿ ಈ ತಿಂಗಳ ೦೯ ನೇ ತಾರೀಖಿನ ಸೋಮವಾರ ಕಾಮನನ್ನು ದಹನ ಮಾಡಲಿದ್ದಾರೆ. ಒಟ್ಟು ಹದಿನೈದು ದಿನಗಳ ಕಾಲ ನಡೆಯಲಿದೆ. ಈ ಕಾಮ ನ ಪ್ರತಿರೂಪವನ್ನು ಪ್ರತಿಷ್ಠಾಪಿಸಿ, ಕೊನೆಯ ದಿನದವರೆಗೂ ಪ್ರತಿದಿನವೂ ವಿಶೇಷ ಅಲಂಕಾರ ಮಾಡಿಕೊಂಡು ಬರಲಾಗುತ್ತದೆ.
ಇಂದ್ರನ ವಾಹನ ಎನಿಸಿಕೊಂಡ ಐರಾವತ ದ ತದ್ರೂಪ ಕೃತಕ ಆನೆಯ ಅಂಬಾರಿ ಸಾರೋಟುಸಮೇತ ವಿಶೇಷ ಅಲಂಕಾರಗೊಂಡ ವಿವಿಧ ರೀತಿಯ ಗಾಡಿಗಳು ಮೆರವಣಿಗೆ ನಡೆಸುತ್ತವೆ.
ಕಾಮ ನನ್ನು ದಹಿಸಿದ ನಂತರ ಸಂಜೆ ಏಳು ಗಂಟೆಗೆ ರತಿ ಯನ್ನು ಮೆರವಣಿಗೆ ಮಾಡಲಾಗುತ್ತದೆ.
ಮಾರನೆ ದಿನ ಅಂದರೆ ಇಪ್ಪತ್ತೊಂದನೇ ತಾರೀಖಿನ ಹೋಳಿ ಹುಣ್ಣಿಮೆಯ ದಿನ ಬೆಳಿಗ್ಗೆ ಹತ್ತು ಗಂಟೆಗೆ ರತಿ ಮನ್ಮಥ ರ ಮೆರವಣಿಗೆಯನ್ನು ದೇವಾಲಯದ ಸನ್ನಿಧಿಯಿಂದ ಡೂಮ್ ಲೈಟ್ ಸರ್ಕಲ್, ಮಂಡಿಪೇಟೆ, ಮದೀನಚೌಕ, ಎಂಜಿ ರಸ್ತೆ, ಕೋಟೆ, ಕಾಳಮ್ಮ ಮತ್ತು ಮಾರಮ್ಮ ದೇವಾಲಯದ ಮುಂಭಾಗದ ಮೂಲಕ ಕರಬಲ ಮೈದಾನ, ಜೆಸಿ ರಸ್ತೆ ಮೂಲಕ ಹಾದು ಮತ್ತೆ ಎಂಜಿ ರಸ್ತೆಗೆ ಬಂದು ದೇವಾಲಯದಲ್ಲಿ ಅಂತ್ಯಗೊಳಿಸಲಾಗುತ್ತದೆ.
ಕೊನೆಯ ದಿನ ಅಂದರೆ ೧೦/೦೩/೨೦೨೯ ರ ಮಂಗಳವಾರ ತಂಪು ಆಚರಿಸುವ ಮೂಲಕ ವಿದ್ಯುಕ್ತವಾಗಿ ತೆರೆ ಎಳೆಯಲಾಗುತ್ತದೆ.
ಮಂಗಳವಾರ ಬೆಳಿಗ್ಗೆಯಿಂದಲೇ ಎಲ್ಲರೂ ಒಗ್ಗೂಡಿ ಬಣ್ಣ ಹಚ್ಚಿ ಹೋಳಿ ಆಚರಿಸುತ್ತಾರೆ, ವಿಶೇಷ ವೆಂದರೆ ಮಂಡಿಪೇಟೆ ಸುತ್ತಲೂ ಮುಸ್ಲಿಂ ಜನಾಂಗದವರು ಇದ್ದು ಆಸಕ್ತ ಹಿರಿಯ ಮುಖಂಡರು ಮತ್ತು ಯುವಕರು ಪಾಲ್ಗೊಂಡು ಹೋಳಿ ಆಚರಿಸುವುದು ಸೌಹಾರ್ದತೆಯ ಸಂಕೇತವಾಗಿದೆ.
ಕಾಮ ನ ತಲೆ ಗೆ ಮಾತ್ರ ಹಬ್ಬದಲ್ಲಷ್ಟೇ ಅಲ್ಲದೆ ಪ್ರತಿ ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನ ಪಂಡಿತ ಗಂಗಾಧರ ರವರ ಮನೆಯಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ.
*ಮಂಡಿಪೇಟೆಯ ಹಿರಿಯರಾದ ಸಿ ಎನ್ ಮಹಾದೇವಯ್ಯನವರ ನೆನಪಿನಂತೆ ಸಾಹಿತಿ ಮತ್ತು ಸಂಗೀತ ವಿದ್ವಾನ್ ಪಿ ಕಾಳಿಂಗರಾಯರು ಮತ್ತು ಹರಿಕಥಾ ವಿದ್ವಾಂಸ ಗುರುರಾಜುಲು ನಾಯ್ಡು ರವರು ಸಂಗೀತ ಕಛೇರಿಯನ್ನು ನಡೆಸಿಕೊಟ್ಟಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.*
*ಮತ್ತೊಬ್ಬ ಹಿರಿಯ ಬೇವೂರು ನಾಗರಾಜಯ್ಯ ನವರ ನೆನಪಿನ ಬುತ್ತಿಯಂತೆ ಒಮ್ಮೆ ಹಿರಿಯ ನಟರಾದ ಡಾ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಬಂದಿದ್ದು ಯಾವುದೋ ಗಲಾಟೆಯ ಕಾರಣ ಭಾಗವಹಿಸದೇ ಹೊರಟುಹೋದರು. ಆರ್ಕೆಸ್ಟ್ರಾ ಮತ್ತು ಜಾನಪದ ಮೇಳಗಳು ನಡೆಯುತ್ತಿದ್ದು ಇತ್ತೀಚೆಗೆ ಅತಿ ವಿಜೃಂಭಣೆಯಿಂದ ಕಾಮನ ಹಬ್ಬ ನಡೆಯುತ್ತಿದೆ ಎಂದರು.
ಕಾಮನ ಹಬ್ಬದ ಆಚರಣೆಗಾಗಿಯೇ ಸಮಿತಿಯನ್ನು ರಚಿಸಿಕೊಂಡಿದ್ದು, ಸಮಿತಿಯಲ್ಲಿ ಬಿ ಗಂಗಾಧರಯ್ಯ, ದೇವರಾಜು, ಲೋಕೇಶ್, ಮಹೇಶ್, ನಾಗೇಂದ್ರ (ಕಾಮಣ್ಣ) ನಾಗೇಶ್, ಸಿ ಎ ರಾಜು, ಬಾಬು ಸೇರಿದಂತೆ ಅನೇಕ ಹಿರಿಯರು ಇದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು