ಕಣ್ಮರೆಯಾದ ಜನಪ್ರತಿನಿಧಿಗಳು ಮತ್ತು ಹೋರಾಟಗಾರರು, ಸವಲತ್ತುಗಳು ಸಕಾಲಿಕ್ಕಿಲ್ಲ
ಚುನಾವಣೆ ಘೋಷಣೆ ಮತ್ತು ಟಿಕೆಟ್ ನೀಡುವ ಮುನ್ನವೇ ಟೊಂಕ ಕಟ್ಟಿ, ಮಂದಿಗೆ ಮಂಕುಬೂದಿ ಎರಚಿ ಮತಗಳನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಹವಣಿಸುವ ರಾಜಕಾರಣಿಗಳು ಮತ್ತು ವೈಯುಕ್ತಿಕ ಲಾಭಕ್ಕಾಗಿಯೇ (ಎಲ್ಲರೂ ಅಲ್ಲಾ ಬಹುತೇಕರು) ಸಂಘಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಹೋರಾಟಕ್ಕಿಳಿಯುವ ನಕಲಿ ಹೋರಾಟಗಾರರೇ ಎಲ್ಲಿ ಅಡಗಿ ಕುಳಿತಿದ್ದೀರಿ ?.
ಕೊರೊನಾ ಸೋಂಕು ತಮಗೇನಾದರೂ ತಗುಲಿದೆಯೇ ? ತಗುಲಿದ್ದರೇ ಬರಬೇಡಿ, ಹೋಂ ಕ್ವಾರಂಟೈನ್ ನಲ್ಲಿಯೇ ಇರಿ. ನನಗೆ ತಗುಲಿದೆ ಎಂಬ ದೃಢೀಕರಿಸಿದ ಮಾಹಿತಿಯನ್ನಾದರೂ ಸಾರ್ವಜನಿಕರಿಗೆ ನೀಡಿ ಬಚಾವಾಗಿ. ಕೊರೊನಾ ವೈರಸ್ ನಿಂದ ಬಳಲಿ ಬೆಂಡಾಗುತ್ತಿರುವ ದಿನಗೂಲಿ ಕಾರ್ಮಿಕರಾದರೂ ನಿಮ್ಮನ್ನು ಕ್ಷಮಿಸಲಿ.
ಈಗ ನೀವೆಲ್ಲರೂ ಬಂದು ನಮ್ಮ ನಡುವೆ ನಿಲ್ಲಿ ಎಂದಾಗಲಿ, ಕೊರೊನಾ ವೈರಸ್ ವಿರುದ್ದ ಬೀದಿಗಿಳಿದು ಹೋರಾಟ ನಡೆಸಿ ಎಂದಾಗಲಿ ನಾವು ನಿಮ್ಮನ್ನು ಕೇಳುತ್ತಿಲ್ಲ ಸ್ವಾಮಿ !
ಬದಲಾಗಿ ಒಪ್ಪೊತ್ತಿನ ಊಟಕ್ಕಾಗಿ ಹಂಬಲಿಸುತ್ತಿರುವ, ಕಂದಮ್ಮಗಳ ಚೀರಾಟ ಸಹಿಸಲಾಗದೆ ಅಲೆಮಾರಿಗಳಂತೆ ಅಂಡಲೆಯುತ್ತಿರುವ ಭಿಕ್ಷುಕರ ಹಾಗೂ ಗುಳೆ ಬಂದು ಇತ್ತ ಇರಲಾಗದೇ, ಅತ್ತ ತಮ್ಮೂರಿಗೆ ಹೋಗಲಾರದೆ ಸಂಕಷ್ಟದಲ್ಲಿರುವವರನ್ನು ಗಮನಿಸಿ ಸಾಂತ್ವನ ನೀಡಿ ಊಟೋಪಚಾರದ ವ್ಯವಸ್ಥೆ ಮಾಡಬಾರದೇ ?
ಆರ್ ಎಸ್ ಎಸ್ ಮತ್ತಿತರರ ಸಂಘ ಸಂಸ್ಥೆಗಳು, ಯುವಕ ಮಿತ್ರರು, ಸಾಮಾನ್ಯರಲ್ಲಿ ಸಾಮಾನ್ಯರು ಪೋಲಿಸರ ಅನುಮತಿ ಪಡೆದು ಸ್ವತಃ ತಾವೇ ತಯಾರಿಸಿ ಊಟ ನೀಡುವವರು ಒಂದೆಡೆಯಾದರೇ, ಅಕ್ಕಿ, ಬೇಳೆ ಮತ್ತು ಸಾಂಬಾರ ಪದಾರ್ಥಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದರೆ, ಲಕ್ಷ ಲೆಕ್ಕಕಿಲ್ಲದ, ಕೋಟಿ ಎಂದರೆ ಕ್ಯಾರೆ ಎನ್ನದ ನೀವುಗಳು ಎಸಿ ರೂಮಿನಿಂದ ಬೀದಿಗೆ ಬಂದು ನೋಡಿ, ಜನರ ಸಮಸ್ಯೆಗೆ ಪರಿಹಾರವನ್ನು ಈಗಿರುವ ಪರಿಸ್ಥಿತಿಯ ಚೌಕಟ್ಟಿನಲ್ಲಿ ಒದಗಿಸಲು ಪ್ರಯತ್ನಿಸಿ.
ಎಲ್ಲೋ ಬೆರಳಣಿಕೆಯ ಗ್ರಾಮ ಪಂಚಾಯತಿ ಮತ್ತಿತರರ ಸರ್ಕಾರದ ಕೆಲ ಅಧೀನ ಸಂಸ್ಥೆಗಳು ಹೊರತುಪಡಿಸಿ ರಾಜಕಾರಣಿಗಳು ಮತ್ತು ಹೋರಾಟಗಾರರು ಸರ್ಕಾರ ಘೋಷಿಸಿರುವ ಸವಲತ್ತುಗಳನ್ನು ಜನರಿಗೆ ತಲುಪಿಸಲು ಸೇತುವೆಯಾಗಬೇಕಿದೆ. (ಇಲ್ಲೂ ಲಾಭದ ಲೆಕ್ಕಾಚಾರ ಹಾಕಬೇಡಿ) ಮಾಸ್ಕ್ ಧರಿಸಿಲ್ಲವೆಂಬ ಕಾರಣಕ್ಕೆ, ದಿನನಿತ್ಯದ ಅಗತ್ಯ ವಸ್ತುಗಳಿಗಾಗಿ ನಗರಕ್ಕೆ ಎಡತಾಕುವ ಮಂದಿಗೆ ಲಾಠಿ ಬೀಸುವ ಪೋಲಿಸರಿಂದ ತಪ್ಪಿಸಿಕೊಳ್ಳುವುದು ಮತ್ತು ಮನೆಗೆ ಸವಲತ್ತುಗಳು ತಲುಪಿದರೆ ಜನರು ಮನೆಯಿಂದ ಹೊರ ಹೋಗದೇ ಇರುವುದರಿಂದ ಸೋಂಕಿತರು ಕಡಿಮೆಯಾಗುವುದಿಲ್ಲವೇ ?
ಪ್ರತಿ ಮನೆಗೆ ಎರಡರಂತೆ ಮುಖಗವಸು, (ಮಾಸ್ಕ್) ಸ್ಯಾನಿಟೈಸರ್ ಅಥವಾ ಸಂಬಂಧಿಸಿದ ಸಾಬೂನು, ಮನೆಮನೆಗೆ ತರಕಾರಿ ಮತ್ತು ದಿನಸಿ ಪದಾರ್ಥಗಳನ್ನು ಸರ್ಕಾರ ಘೋಷಿಸಿರುವುದನ್ನಾದರೂ ಸಕಾಲದಲ್ಲಿ ತಲುಪಿಸಲು ಆಗ್ರಹಿಸಿ, ಸಮಯಕ್ಕೆ ಸರಿಯಾಗಿ ತಲುಪಿಸಲು ವ್ಯವಸ್ಥೆ ಮಾಡಬೇಕಲ್ಲವೇ ?
ನಮ್ಮ ಪಕ್ಷ ಆಡಳಿತದಲ್ಲಿದ್ದರೇ ಜಗತ್ತೇ ನಮ್ಮ ಕೈಯಲ್ಲಿ ಎಂದು ಬಡಾಯಿ ಕೊಚ್ಚಿಕೊಳ್ಳುವ ವಿಪಕ್ಷದವರಿಗೇನಾಗಿದೆ. ಮುಂದಿನ ರಾಜಕೀಯ ಭವಿಷ್ಯಕ್ಕಾದರೂ ಇಂತಹ ವಿಷಮ ಪರಿಸ್ಥಿತಿಯನ್ನು ಸದುಪಯೋಗ ಪಡಿಸಿಕೊಂಡು ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ತಮ್ಮ ತಳ ಮೆಟ್ಟಿಲುಗಳನ್ನು ಗಟ್ಟಿಮಾಡಿಕೊಳ್ಳದೆ ಕೇವಲ ಬಾಯಿ ಚಪಲಕ್ಕೆ, ಟೀಕಿಸುವುದಕ್ಕೆ ನಿಂತಿರುವುದು ನಾಚಿಕೇಗೇಡಿನ ಸಂಗತಿ.
ಟೀಕೆಗೆ ಮತ್ತು ಘೋಷಣೆಗೆ ಸೀಮಿತವಾಗದೆ, ಲಾಭವಿದ್ದರಷ್ಟೇ ನಮ್ಮ ಹೋರಾಟ ಎಂಬ ಮನೋಭಾವನೆಯಿಂದ ಹೊರಬಂದು ನಮ್ಮಿಂದಲೇ ಬದುಕು ಕಟ್ಟಿಕೊಂಡ ನೀವು ಎಂತಹ ಪರಿಸ್ಥಿತಿಯಲ್ಲೂ ನಿಮ್ಮ ಸೇವೆಗೆ ಬದ್ದ ಎನ್ನುವುದನ್ನೂ ಸಾಬೀತು ಪಡಿಸಲು ಇದು ಸಕಾಲ.
ಯಾಕೆಂದರೆ ಇಪ್ಪತ್ತೊಂದು ದಿನ ಮುಗಿಯಲು ಇನ್ನೂ ಹದಿನಾಲ್ಕು ದಿನಗಳು ಬಾಕಿ ಇವೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು