ಲಾಕ್ ಡೌನ್ ಟು ಲಾಕ್ ಡೌನ್ ಊಟ ವಿತರಿಸುತ್ತಿರುವ ಚನ್ನಪಟ್ಟಣದ ಯುವಕರು
ಚನ್ನಪಟ್ಟಣ:ಏ/೦೫/೨೦/ಭಾನುವಾರ. ಭಿಕ್ಷೆ ಕೇಳಿ ಬಂದವರಿಗೆ ಒಂದೊತ್ತಿನ ಊಟ ಅಥವಾ ಒಂದೆರಡು ರೂಪಾಯಿ ನೀಡುವುದೇ ದೊಡ್ಡದು, ಆದರೆ ಕೊರೊನಾ (ಕೋವಿಡ್-೧೯) ವಕ್ಕರಿಸಿದ ನಂತರ ಇಡೀ ಕರ್ನಾಟಕವನ್ನೇ ಸರ್ಕಾರ ಲಾಕ್ ಡೌನ್ ಮಾಡಲಾಯಿತು.
ಇದರಿಂದ ಬಹುತೇಕ ನಿರ್ಗತಿಕರು, ಭಿಕ್ಷುಕರು, ದಿನಗೂಲಿ ಕಾರ್ಮಿಕರು ಮತ್ತು ವಲಸಿಗರಿಗೆ ಅನ್ನದ ಆಹಾಕರವೇ ಎದ್ದು ನಿಂತಿತ್ತು. ಇದನ್ನು ಅರ್ಥೈಸಿಕೊಂಡ ನಗರದ ಹಲವಾರು ಸಂಘಸಂಸ್ಥೆಗಳು, ಮತ್ತು ಯುವಕರು ಅನ್ನದಾಸೋಹವನ್ನು ಏರ್ಪಡಿಸಿದರು. ಕೆಲವರು ಒಂದು ಹೊತ್ತು, ಒಂದು ದಿನ ಅಥವಾ ಒಂದು ವಾರಕ್ಕೆ ಸೀಮಿತವಾದರೆ ಕೆಲ ಯುವಕ ಮಿತ್ರರು ಮಾತ್ರ ಲಾಕ್ ಡೌನ್ ಮುಗಿಯುವವರೆಗೂ ಎರಡು ಹೊತ್ತು ಊಟ ನೀಡುವಲ್ಲಿ ಮಗ್ನರಾಗಿರುವುದು ಶ್ಲಾಘನೀಯ.
ನಗರದ ಜೈನ್ ಸಂಘ, ಆಸರೇ ಸೇವಾ ಟ್ರಸ್ಟ್ ಮತ್ತು ಸಿಂಚನ ಹೋಟೆಲ್ ನ ಮಾಲೀಕ ಸೇರಿಕೊಂಡು ಮಧ್ಯಾಹ್ನ ಮತ್ತು ರಾತ್ರಿ ಸಮಯದಲ್ಲಿ ಪ್ರತಿನಿತ್ಯ ಇನ್ನೂರು ಮಂದಿಗೆ ಊಟ ವಿತರಿಸುತ್ತಿದ್ದಾರೆ. ಮೊದಲಿಗೆ ಮುನ್ನೂರಕ್ಕೂ ಹೆಚ್ಚು ಮಂದಿಗೆ ಊಟ ವಿತರಿಸುತ್ತಿದ್ದು, ಹಲವಾರು ಸಂಘಸಂಸ್ಥೆಗಳು ಊಟ ನೀಡಲು ಮುಂದಾದ ನಂತರ ಎರಡು ನೂರು ಮಂದಿಗೆ ಸೀಮಿತಗೊಳಿಸಿಕೊಂಡಿದ್ದಾರೆ.
ಈ ತಂಡದಲ್ಲಿ ದಾನಿಗಳಾದ ಕೆ ಕೆ ಎಲೆಕ್ಟ್ರಿಕಲ್ ನ ಮಾಲೀಕ ಕಸ್ತೂರಿ ಚಂದ್, ನಿರ್ಮಲ್,
ಆನಂದ್, ಎಂ ಕೆ ಮಂಜು ಹರೂರು. ಸತೀಶ್ ಮಹದೇಶ್ವರ ನಗರ, ಮೈತ್ರಿ ಗೌಡ, ಯೂನಿಯನ್ ಬ್ಯಾಂಕ್ ಸುಮಲತಾ, ಶಿಕ್ಷಕ ಪ್ರಶಾಂತ್ ಶರ್ಮ, ಮಧು ದೀಕ್ಷಿತ್, ಹಾಗೂ ಅಡುಗೆ ಸಿದ್ದತೆ ಪಡಿಸುತ್ತಿರುವ ಲೋಕೇಶ್, ದಶರಥ್, ನಿಖಿಲ್, ಪ್ರಕಾಶ್. ಕೋಮನಹಳ್ಳಿ ವೆಂಕಟೇಶ್ ರವರು ಈ ತಂಡದ ಮುಂಚೂಣಿಯಲ್ಲಿದ್ದಾರೆ.
ನಾವು ಸಹ ಬಡ ಮತ್ತು ಮಧ್ಯಮ ವರ್ಗದ ಜನರೇ, ಆದರೆ ಶಾಶ್ವತವಾಗಿ ಸಾವಿರಗಟ್ಟಲೆ ಸಂಬಳ ಇಲ್ಲದ, ವಾಸಿಸಲು ಮನೆಯೂ ಇಲ್ಲದ ಭಿಕ್ಷುಕರು, ನಿರ್ಗತಿಕರು ಮತ್ತು ವಲಸೆ ಬಂದಿರುವ ಕೂಲಿ ಕಾರ್ಮಿಕರು ನಮ್ಮಲ್ಲಿದ್ದು ಅವರಿಗೆ ನೆರವಾಗಬೇಕಿದ್ದು ಮನುಷ್ಯ ಧರ್ಮ. ಅದನ್ನು ನಾವು ಮಾಡುತ್ತಿದ್ದೇವೆ ಎಂದು *ವನಿತಾ ಸ್ಯಾರಿ ಸೆಲೆಕ್ಷನ್ ಮಾಲೀಕ ವಿಜಯಕುಮಾರ್ ಗುಲೇಚಾ (ರಾಜು)* ರವರ ಮಾನವೀಯ ನುಡಿ.
ಹಸಿದವರಿಗೆ ಊಟ ನೀಡುವುದು ಮನುಷ್ಯ ಧರ್ಮ. ಅದರಲ್ಲೂ ಇಂತಹ ವಿಷಮ ಪರಿಸ್ಥಿತಿಯಲ್ಲಿ ಬೀದಿಗೆ ಬಿದ್ದವರಿಗೆ ಅನ್ನ ಹಾಕಬೇಲೇಬೇಕು. ಅಂತಹ ಒಂದು ಸಣ್ಣ ಕೆಲಸವನ್ನು ಆತ್ಮಪೂರ್ವಕವಾಗಿ ನಮ್ಮ ಸಮಾನ ಮನಸ್ಕರ ತಂಡದವರು ಮಾಡುತ್ತಿದ್ದೇವೆ.
*ಶಿವಶಂಕರ್. ವಕೀಲರು ಮತ್ತು ತಂಡದ ಸದಸ್ಯರು.*
ನಾನು ಹೋಟೆಲ್ ಮಾಲೀಕನಾಗಿ ಇಲ್ಲಿ ಊಟ ಬಂದು ಊಟ ಮಾಡುವವರನ್ನು ಗಮನಿಸುತ್ತಿದೆ. ಕೆಲವರು ಊಟ ಮಾಡುವ ಆಸೆ ಎಷ್ಟೇ ಇದ್ದರೂ ಜೇಬು ನೋಡಿಕೊಂಡೇ ಊಟ ಆರ್ಡರ್ ಮಾಡುತ್ತಿದ್ದರು. ಎಲ್ಲವೂ ಸರಿಯಿದ್ದಾಗಲೇ ಜೇಬು ನೋಡಿ ಊಟ ಮಾಡುತ್ತಿದ್ದ ಕೂಲಿ ಕಾರ್ಮಿಕರ ಗತಿ ಈಗ ಹೇಗಿರಬೇಡ ಎಂದು ಆಲೋಚಿಸಿಯೇ ಅನ್ನದಾಸೋಹಕ್ಕೆ ಚಾಲನೆ ನೀಡಿದ್ದೇವೆ. ೭೭ ಮಂದಿ ಭಿಕ್ಷುಕರು ಸೇರಿದಂತೆ ನಗರದ ಒಳ ಮತ್ತು ಹೊರಭಾಗದಲ್ಲಿರುವ ೧೩೦ ಕ್ಕೂ ಹೆಚ್ಚು ಮಂದಿಗೆ ಎರಡು ವೇಳೆ ಊಟ ನೀಡುತ್ತಿದ್ದೇವೆ.
*ಸತೀಶ್ ಕೆಲಗೆರೆ. ಸಿಂಚನ ಮಿಲ್ಟ್ರಿ ಹೋಟೆಲ್ ಮಾಲೀಕರು.*
ಪ್ರತಿನಿತ್ಯ ಬಡವರು, ನಿರ್ಗತಿಕರು, ಭಿಕ್ಷುಕರನ್ನು ಹುಡುಕಿ ಅವರಿದ್ದಲ್ಲಿಗೇ ಊಟ ಮತ್ತು ನೀರನ್ನು ಸರಬರಾಜು ಮಾಡುತ್ತಿದ್ದೇವೆ. ಹಸಿದು ಕಾಲ್ನಡಿಗೆಯಲ್ಲೇ ತಮ್ಮ ಊರಿಗೆ ಹೋಗುತ್ತಿರುವ ವಲಸೆ ಕಾರ್ಮಿಕರಿಗೂ ಸಹ ಊಟದ ಜೊತೆಗೆ ವಿಶ್ರಾಂತಿಗೂ ವ್ಯವಸ್ಥೆ ಮಾಡುತ್ತಿದ್ದೇವೆ. ಹಸಿದವರಿಗೆ ಊಟ ನೀಡಿದಾಗ ಸಿಗುವ ಆನಂದವನ್ನು ವರ್ಣಿಸಲಸಾಧ್ಯ.
*ಯೋಗೇಶ್ ಕುಮಾರ್, ದೊಡ್ಡಮಳೂರು. ಆಸರೆ ಸೇವಾ ಟ್ರಸ್ಟ್ ನ ಅಧ್ಯಕ್ಷರು.*
ಅತ್ಯಂತ ಆತ್ಮ ತೃಪ್ತಿ ತಂದುಕೊಟ್ಟ ಕೆಲಸವೆಂದರೆ ಹಸಿದ ಹೊಟ್ಟೆಗೆ ಅನ್ನ ನೀಡಿದ್ದು. ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಎನ್ನುವುದರ ಜೊತೆಗೆ ಹಸಿದ ಹೊಟ್ಟೆ ತುಂಬಿಸುವುದು ಸಹ ಮಾನವ ಧರ್ಮ. ಅದರಲ್ಲೂ ಪ್ರತಿದಿನವೂ ಒಂದೊಂದು ರೀತಿಯ (ಇಡ್ಲಿ, ಪೂರಿ, ರೈಸ್ ಬಾತ್) ಊಟ ನೀಡುತ್ತಿದ್ದೇವೆ. ಇಂತಹ ಟೀಂ ನಲ್ಲಿ ನಾನು ಒಬ್ಬಳಾಗಿ ಕೆಲಸ ನಿರ್ವಹಿಸುತ್ತಿರುವುದು ಸಂತೋಷ ತಂದಿದೆ. *ಮೈತ್ರಿ ಗೌಡ. ತಂಡದ ಸದಸ್ಯೆ*
ಕೇವಲ ಬಡವರು ನಿರ್ಗತಿಕರಿಗೆ ಅಷ್ಟೇ ಅಲ್ಲದೇ ಬೆಳಿಗ್ಗೆ ಯಿಂದ ಸಂಜೆಯವರೆಗೂ ನಮಗಾಗಿ ಬಿಸಿಲಿನಲ್ಲಿ ನಿಂತು ಕೆಲಸ ನಿರ್ವಹಿಸುತ್ತಿರುವ ಕೆಲ ಪೋಲಿಸರಿಗೂ ಸಹ ಊಟ ನೀಡುತ್ತಿದ್ದೇವೆ. ಇದು ನಮ್ಮ ಸೌಭಾಗ್ಯ ಎಂದೇ ಭಾವಿಸುತ್ತೇವೆ.
*ನವೀನ್ ಕುಮಾರ್. ಡೂಂಲೈಟ್ ಸರ್ಕಲ್.*
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು