ಗಾಳಿ ಮಳೆಗೆ ಮುರಿದುಬಿದ್ದ ಬಾಳೆ ತೋಟಗಳು
ಚನ್ನಪಟ್ಟಣ:ಏ/೨೪/೨೦/ಶುಕ್ರವಾರ. ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ತಾಲ್ಲೂಕಿನಾದ್ಯಂತ ಹಲವಾರು ರೈತರು ತೋಟಗಳಲ್ಲಿ ಬೆಳೆದಿದ್ದ ವಾರ್ಷಿಕ ಬೆಳೆಯಾದ ಬಾಳೆಯು ನೆಲಕ್ಕಚ್ಚಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ರಾಷ್ಟ್ರದ ಹವಾಮಾನ ಇಲಾಖೆಯು ರಾಜ್ಯದ ಯಾವ ಯಾವ ಭಾಗಗಳಲ್ಲಿ ಮಳೆ, ಗುಡುಗು ಸಹಿತ ಮಳೆ, ಬಿರುಗಾಳಿ ಸಹಿತ ಮಳೆ ಬರುವ ಬಗ್ಗೆ ಭವಿಷ್ಯ ನುಡಿದಿತ್ತು.
ಅದರ ಪ್ರಕಾರ ರಾಮನಗರ ಜಿಲ್ಲೆಯಲ್ಲಿಯೂ ಸಹ ಸಿಡಿಲು ಗುಡುಗು ಸಹಿತ ಮಳೆಯಾಗುತ್ತದೆ, ಆದರೆ ಅದು ೨೫ ಹಾಗೂ ೨೬ ರಂದು ಆಗುವ ಸೂಚನೆಯನ್ನು ನೀಡಿತ್ತು.
ಆದರೆ ೨ ದಿವಸ ಮುಂಚಿತವಾಗಿಯೇ ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ತಾಲ್ಲೂಕುಗಳಲ್ಲಿ ಅದರ ಪ್ರಭಾವವನ್ನು ಬೀರಿರುವುದು ಕಂಡು ಬರುತ್ತಿದೆ.
ಹವಾಮಾನ ಇಲಾಖೆಯು ಅಂದಾಜಿಸಿದ್ದಕ್ಕಿಂತ ೨ ದಿವಸ ಮೊದಲೇ ಮಳೆಯು ಬಂದಿದೆ. ಬರೀ ಮಳೆಯಷ್ಟೇ ಬಂದಿಲ್ಲ ದೊಡ್ಡ ಗಾಳಿ ಸಮೇತ ಮಳೆಯು ಬಿದ್ದಿದೆ.
ಕೆಲವು ಕಡೆ ರೈತರ ಬೆಳೆಗಳು ಸಹ ನಷ್ಟವಾಗಿರುವ ವರದಿಗಳು ಬಂದಿದೆ. ರೈತನ ಪಾಲಿಗೆ ಈಗಾಗಲೇ ಕ ಕೋವಿಡ್-೧೯ ರ ಕಾಟ ಬಂದು ಬೆಳೆದ ಬೆಳೆಗೆ ಬೆಲೆಯೂ ಸಿಗದೆ ಆತ ಪರಿತಪಿಸಿ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾನೆ.
ಅಂತಿಮವಾಗಿ ರಾಜಕೀಯದವರು, ಸಂಘ ಸಂಸ್ಥೆಗಳವರು ಕೊಟ್ಟ ಕನಿಷ್ಠ ಬೆಲೆಯಿಂದಲೇ ತೃಪ್ತಿ ಪಟ್ಟುಕೊಂಡಿದ್ದಾರೆ ಎಂಬುದು ಗಮನಾ ರ್ಹವಾದ ಸಂಗತಿಯಾಗಿದೆ.
*ಚನ್ನಪಟ್ಟಣ ತಾಲ್ಲೂಕಿನಲ್ಲಿ ಆದ ನಷ್ಟ*
ತಾಲ್ಲೂಕಿನ ಮೆಂಗಳ್ಳಿ ಗ್ರಾಮದ ಪಾಪಣ್ಣನವರು ೨ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಏಲಕ್ಕಿ ಬಾಳೆ ಬೆಳೆಯು ನಾಶವಾಗಿದೆ.
ಪರಿಶ್ರಮವಹಿ ಬೆಳೆದಿದ್ದ ಬಾಳೆಯು ಕೈಗೆ ಬಂದಿತ್ತು, ಅದು ಬಾಯಿಗೆ ಬರದ ರೀತಿಯಲ್ಲಿ ನಾಶವಾಗಿದೆ ಎಂದು ರೈತ ಪಾಪಣ್ಣ ಅವಲತ್ತುಗೊಂಡಿದ್ದಾರೆ.
ಅದೇ ರೀತಿಯಲ್ಲಿ ಪಕ್ಕದ ಅಗ್ರಹಾರವರಗೇರಹಳ್ಳಿಯ ಮೇಲಿಗೌಡನ ಮಗ ತಿಮ್ಮೇಗೌಡರಿಗೆ ಸೇರಿದ ೨೦೦ ಬಾಳೆ ಗಿಡಗಳು ನೆಲ ಕಚ್ಚಿವೆ.
ಇದೇ ತಾಲ್ಲೂಕಿನ ಚಿಕ್ಕಬೋರೇಗೌಡನ ದೊಡ್ಡಿ (ಇಗ್ಗಲೂರು ಬಳಿ) ಸಿದ್ದೇಶ್ ಎಂಬುವವರ ೨೦೦ ಬಾಳೆ ಗಿಡಗಳು ನೆನ್ನೆ ರಾತ್ರಿ ಬೀಸಿದ ಬಿರುಗಾಳಿಯಿಂದ ನಾಶವಾಗಿವೆ.
ಇಗ್ಗಲೂರು ಗ್ರಾಮದ ದೇವರಾಜು ಅವರು ಬೆಳೆದಿದ್ದ ೫೦೦ ಬಾಳೆಗಿಡಗಳು ನಾಶವಾಗಿವೆ.
ಗರಕಹಳ್ಳಿ ಸುತ್ತಮುತ್ತ ಬಾಳೆ, ಮಾವು ಹಾಗೂ ಇತರೆ ಬೆಳೆಗಳು ಹಾಳಾಗಿ ರುವ ಬಗ್ಗೆ ಮಾಹಿತಿ ಇದ್ದು, ನಿಖರವಾದ ಮಾಹಿತಿ ಲಭ್ಯವಾಗಿಲ್ಲ.
ರೈತನ ಪಾಲಿಗೆ ಬರ ಬರಲಿ, ನೆರೆ ಬರಲಿ, ಬರಬಾರದ ಖಾಯಿಲೆ ಬರಲಿ ಏನೇ ಬಂದರೂ ಸಹ ಆತನ ಪಾಲಿಗೆ ನಷ್ಟವಂತೂ ಉಂಟಾಗುತ್ತಿದೆ.
ಆದರೆ ಆತ ಕಳೆದು ಕೊಂಡ ಬೆಳೆಗೆ ಸರ್ಕಾರ ಸೂಕ್ತ ಪರಿಹಾರ ಕೊಡುವ ಮಾತನ್ನು ಆಡುತ್ತದೆ, ಆದರೆ ವೈಜ್ಞಾನಿಕ ಪರಿಹಾರವಂತೂ ಸಿಗುವುದಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು