ಲಾಕ್ ಡೌನ್ ಸಡಿಲ, ರೋಡಿಗಿಳಿದ ಬೈಕ್ ಗಳು
ಚನ್ನಪಟ್ಟಣ:ಏ/೨೩/ಗುರುವಾರ. ಕೊರೊನಾ (ಕೋವಿಡ್-೧೯) ನಿಂದ ಕಳೆದ ಒಂದು ತಿಂಗಳಿಂದ ಲಾಕ್ಡೌನ್ ಹೇರಿದ್ದು, ನಿನ್ನೆಯಿಂದ ಕೆಲ ವ್ಯಾಪಾರ ವಹಿಟುಗಳಿಗಾಗಿ, ಲಾಕ್ ಡೌನ್ ಸಡಿ ಲಗೊಳಿಸಿದ್ದರಿಂದ ನಗರ ದಲ್ಲಿ ಕೆಲ ಅಂಗಡಿಗಳು ತೆರೆದಿದ್ದು ಕಂಡು ಬಂತು.
ಕೃಷಿ ಉತ್ಪನ್ನಗಳು, ಕೃಷಿ ಯಂತ್ರೋಪಕರಣಗಳ ಅಂಗಡಿಗಳು, ಸಿಮೆಂಟ್ ಮತ್ತು ಕಬ್ಬಿಣದ ಅಂಗಡಿ ಗಳು ಸೇರಿದಂತೆ ಕೆಲ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದು, ಕಟ್ಟಡಕ್ಕೆ ಸಂಬಂಧಿಸಿದ ಹಾಡ್೯ವೇರ್ನ ಕೆಲ ಅಂಗಡಿಗಳು ಅಲ್ಲಲ್ಲಿ ತೆರೆ ದಿದ್ದರೆ. ಸಿಮೆಂಟ್ ದಾಸ್ತಾನು ಇಲ್ಲದ ಕಾರಣ ಸಿಮೆಂಟ್ ಅಂಗಡಿಗಳು ಇನ್ನೂ ತೆರೆದಿರಲಿಲ್ಲ.
ಲಾಕ್ ಡೌನ್ ಸಡಿಲ ಗೊಂಡಿದೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ದ್ವಿಚಕ್ರ ವಾಹನ ಸವಾರರು ನಗರದ ತುಂಬೆಲ್ಲಾ ಓಡಾಡುತ್ತಿದ್ದು, ಪೊಲೀಸರಿಗೆ ತಲೆನೋ ವಾಗಿ ಪರಿಣಿಮಿಸಿದೆ. ದ್ವಿಚಕ್ರ ವಾಹನಗಳಿಗೆ ನಿರ್ಬಂಧ ವಿಧಿಸಿದ್ದರೂ ಸಹ ಹಳ್ಳಿಗಳ ಮತ್ತು ನಗರ ವ್ಯಾಪ್ತಿಯಲ್ಲಿ ಬೋನಿನಿಂದ ಹುಲಿಗಳನ್ನು ಬಿಟ್ಟ ರೀತಿಯಲ್ಲಿ ಕೆಲವರು ಓಡಾಡಿದರು.
ಕೆಲವು ಕಡೆ ಪೇಟೆಗೆ ಬಂದವರನ್ನು ಪ್ರಶ್ನಿಸಿದಾಗ, ಒಂದು ತಿಂಗಳಿನಿಂದ ನಮಗೆ ಆಕಾಶವೇ ಕಳಚಿಬಿದ್ದಂತೆ ಆಗಿತ್ತು, ಈಗ ಸ್ವಲ್ಪ ಉಸಿರಾಡುವಂತಾಗಿದೆ. ಇದು ಮುಂದುವರಿಯು ತ್ತದೆಯೇ ಇಲ್ಲ ಮತ್ತೆ ದಿಗ್ಬಂಧನ ಹೇರಲಾಗು ತ್ತದೆಯೋ ಎಂಬ ಪ್ರಶ್ನೆ ಯನ್ನು ಮಾಧ್ಯಮದವರಿಗೇ ಕೇಳಿ ಉತ್ತರ ಪಡೆಯಲು ಯತ್ನಿಸಿದರು.
ಬಿಗಿ ಕಾಪಾಡಿ ಕೊಂಡಪೊಲೀಸರು
ಇಷ್ಟೆಲ್ಲರ ನಡುವೆಯೂ ಕೆಲವು ರಸ್ತೆಗಳಲ್ಲಿ ಜನರನ್ನು ಮತ್ತು ವಾಹನಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ನಿರಂತರ ಪ್ರಯತ್ನದಲ್ಲಿ ಇದ್ದರು.
ಕೆಲವು ಕಡೆ ತಡೆ ಬ್ಯಾರಕೇಡ್ನ್ನು ಹಾಕಿ ವಾಹನ ಚಾಲಕರು ಹಿಂದಕ್ಕೆ ಹೋಗುವ ರೀತಿಯಲ್ಲಿ ಮಾಡಿದ್ದು ವಿಶೇಷವಾಗಿತ್ತು. ಎಂದಿನಂತೆಯೇ ಪ್ರಮುಖ ವಾದ ಸ್ಥಳಗಳಲ್ಲಿ ಪೊಲೀಸರು ಇದ್ದುಕೊಂಡು ಎಚ್ಚರಿಕೆ ಕೊಡುವ ಕೆಲಸ ವನ್ನು ಮಾಡುತ್ತಿದ್ದುದು ಕಂಡು ಬಂತು. ಎಲ್ಲಿಯೂ ಗೊಂದಲಕ್ಕೆ ಎಡೆಕೊಡದಂತೆ ವ್ಯವಸ್ಥೆ ಮುಂದು ವರಿದಿದೆ.
ಎಪಿಎಂಸಿ ಯಾಡ್೯ನಲ್ಲಿಯೂ ಬಿಗಿ ಭದ್ರತೆ ಮಾಡಿದ್ದು, ನಗರದಲ್ಲಿ ಅನಾವಶ್ಯಕವಾಗಿ ತೆರೆದಿದ್ದ, ಹೆಚ್ಚು ಜನರು ಸೇರಿದ್ದ ಮಾಸ್ಕ್ ಧರಿಸದ ಹಾಗೂ ಅಂತರ ಕಾಯ್ದುಕೊಳ್ಳದ ಕೆಲ ಅಂಗಡಿಗಳನ್ನು ಮುಚ್ವಿಸಲಾಯಿತು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು