ಕಟುಕರಿಗಿಲ್ಲಾ ಕಾರುಣ್ಯ, ಬಸವ ಜಯಂತಿಯಲ್ಲೂ ಮಾಂಸದ ದಂಧೆ, ೭೦೦ ರೂ ಗೆ ಕದ್ದುಮುಚ್ಚಿ ಮಟನ್ ಮಾರಿದರು
ಚನ್ನಪಟ್ಟಣ:ಏ/೨೬/೨೦/ಭಾನುವಾರ. ಹನ್ನೆರಡನೇ ಶತಮಾನದಲ್ಲಿ ಯೇ ಸಮಾನತೆ ಸಾರಿದ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದಿಂದ ಇಂದಿಗೂ ಮನೆಮಾತಾದ, ಅಹಿಂಸೆಯನ್ನು ಪ್ರತಿಪಾದಿಸಿದ ಶ್ರೀ ಬಸವಣ್ಣ ನವರ ಹೆಸರಿನಲ್ಲಿ ಆಚರಿಸುವ ಜಯಂತಿಯೇ ಬಸವ ಜಯಂತಿ. ಬಾಳೆಲ್ಲಾ ಅಕ್ಷಯವಾಗಲೆಂದು ಆಚರಿಸುವ ಅಕ್ಷಯ ತೃತೀಯ ಹಬ್ಬವೂ ಇಂದೆ ಬಂದಿದ್ದು ಈ ದಿನ ಹಿಂಸೆ ನಿಷಿದ್ದವಾಗಿದೆ.
ನಗರಸಭೆಯವರು ಈ ದಿನ ಮಾಂಸದಂಗಡಿಗಳು ತೆರೆಯಬಾರದೆಂಬ ನೋಟೀಸ್ ನೀಡಿದ್ದರೂ ಸಹ ಬಹುತೇಕ ಕೋಳಿ ಮತ್ತು ಮಾಂಸದಂಗಡಿಗಳು ತೆರೆದು ಅವರಿಗಿಷ್ಟ ಬಂದ ದರಕ್ಕೆ ಮಾರಿದ್ದಾಗಿ ದೂರುಗಳು ಬಂದಿವೆ.
ಕೆಲವು ಅಂಗಡಿಗಳವರು ಕದ್ದುಮುಚ್ಚಿ ತೆರೆದರೆ, ಕೆಲ ಅಂಗಡಿಗಳು ರಾಜಾರೋಷವಾಗಿಯೇ ಬಾಗಿಲು ತೆರೆದು ವ್ಯಾಪಾರ ಮಾಡಿದ್ದರು, ಕೆಲ ಹೆಸರುವಾಸಿಯಾದ ಅಂಗಡಿಗಳ ಮಾಲೀಕರು ಅಂಗಡಿಯ ಹಿಂಭಾಗದಲ್ಲಿ, ಕೆಲ ಗ್ರಾಹಕರಿಗಷ್ಟೇ ಮಾಹಿತಿ ನೀಡಿ ಭರ್ಜರಿ ವ್ಯಾಪಾರ ಮಾಡಿದ್ದಾರೆ.
ಕೋಳಿ ಮಾಂಸದ ದರ ಪತ್ರಿಕೆಯಲ್ಲಿರುವುದಕ್ಕಿಂತ ಹತ್ತರಿಂದ ಇಪ್ಪತ್ತು ರೂಪಾಯಿಗಳಿಗೂ ಹೆಚ್ಚು ದರ ನಿಗದಿ ಪಡಿಸಿದರೆ, ಮೀನು ಮಾರಾಟದ ಅಂಗಡಿಗಳ ಮುಂದೆ ಜನ ಸಂದಣಿಯೇ ನೆರೆದಿತ್ತು. ಮೇಕೆ ಮತ್ತು ಕುರಿ ಮಾಂಸದಂಗಡಿಗಳ ಮಾಲೀಕರು ಗ್ರಾಹಕರ ಮುಖ ನೋಡಿ ದರ ನಿಗದಿಪಡಿಸಿ ವ್ಯಾಪಾರ ಮಾಡಿದ್ದು, ೫೫೦ ರೂಪಾಯಿಗಳಿಂದ ೭೦೦ ರೂಪಾಯಿವರೆಗೂ ದರ ನಿಗದಿಪಡಿಸಿದ್ದು ಭರ್ಜರಿ ಲಾಭ ಮಾಡಿಕೊಂಡಿದ್ದಾರೆ ಎಂದು ಮಾಂಸ ಖರೀದಿಸಿದ, ಹೆಸರೇಳಲಿಚ್ಚಿಸದ ಗ್ರಾಹಕರುಗಳು ಮಾಹಿತಿ ನೀಡಿದ್ದಾರೆ.
*ನಗರಸಭೆಯ ಅಧಿಕಾರಿಗಳು ಹಲವಾರು ವಿಷಯಗಳಲ್ಲಿ ನೋಟೀಸಿಗಷ್ಟೇ ಸೀಮೀತವಾಗಿದ್ದು, ಪರೀಕ್ಷಿಸಲು ಮುಂದಡಿ ಇಡುವುದೇ ಇಲ್ಲ. ದೂರುಗಳು ಬಂದಾಗಲಷ್ಟೇ ಪರೀಕ್ಷಿಸುವ ಶಾಸ್ತ್ರ ಮಾಡಿ ಕೈತೊಳೆದುಕೊಳ್ಳುತ್ತಾರೆ. ಎಷ್ಟೋ ಅಂಗಡಿಗಳಿಗೆ ಕನಿಷ್ಠ ಪರವಾನಗಿಯೂ ಇಲ್ಲದಿರುವುದು ದುರದೃಷ್ಟಕರ.*
ನಗರಸಭೆಯಿಂದ ಮಾಂಸದಂಗಡಿಗಳಿಗೆ ನೋಟೀಸ್ ಜಾರಿ ಮಾಡಿದ್ದೇವೆ. ಇಂದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
ನಾಳೆ ತಹಶಿಲ್ದಾರ್ ರವರ ಸಮ್ಮುಖದಲ್ಲಿ ಮಾಂಸದಂಗಡಿಗಳ ಮಾಲೀಕರನ್ನು ಕರೆದು ಸಭೆ ನಡೆಸಿ ದರ ನಿಗದಿಪಡಿಸಿ, ಅಂಗಡಿಯ ಮುಂದೆ ಬರೆಯುವಂತೆ ಸೂಚಿಸುತ್ತೇವೆ.
*ಶಿವನಂಕಾರಿಗೌಡ, ಪೌರಾಯುಕ್ತರು. ನಗರಸಭೆ ಚನ್ನಪಟ್ಟಣ.*
ನಾವು ನಗರದ ಎಲ್ಲಾ ಮಾಂಸದಂಗಡಿಗಳ ಮಾಲೀಕರಿಗೆ ನೋಟೀಸ್ ನೀಡಿದ್ದು, ಯಾವುದೇ ಅಂಗಡಿಗಳು ತೆರೆದಿಲ್ಲ. ಒಂದು ಮೀನು ಮಾರಾಟದ ಅಂಗಡಿ ತೆರೆದಿದ್ದು ತೂಕದ ತಕ್ಕಡಿಯನ್ನು ವಶಪಡಿಸಿಕೊಂಡಿದ್ದೇವೆ. ಮತ್ತೆ ಕಂಡುಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು.
*ವರಲಕ್ಷ್ಮಿ ಆರೋಗ್ಯಾಧಿಕಾರಿ, ನಗರಸಭೆ.*
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು