ಹಳ್ಳಿಗಾಡಿನ ರೈತ ಸಮುದಾಯಕ್ಕೆ ಕುವೆಂಪುರವರು ನೀಡಿದ ಕೊಡುಗೆಯೇ ಮಂತ್ರಮಾಂಗಲ್ಯ ಎಂ ರಾಮು
ಚನ್ನಪಟ್ಟಣ.ಏ.೨೭: ನೆನ್ನೆ ಇಲ್ಲಿನ ಗುಡ್ಡೆ ತಿಮ್ಮಸಂದ್ರದಲ್ಲಿ ಕುವೆಂಪುರವರ ಮಂತ್ರ ಮಾಂಗಲ್ಯ ಮಾದರಿಯಲ್ಲಿ ಒಂದು ಸರಳ ಮದುವೆ ಜರುಗಿತು.
ವರ, ಚನ್ನಪಟ್ಟಣ ತಾಲ್ಲೂಕಿನ ಗೌಡನಗೆರೆ ಗ್ರಾಮದ ಶ್ರೀಮತಿ ಗೌರಮ್ಮ, ತಿಮ್ಮೇಗೌಡರ ಮಗ ಸಿದ್ದರಾಮು.
ವಧು, ಇದೇ ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ, ಶ್ರೀಮತಿ ರಾಧಮ್ಮ ಲೇ|| ಪುಟ್ಟಸ್ವಾಮಿಗೌಡರ ಪುತ್ರಿ ರಕ್ಷಿತಾ.
ಇವರುಗಳ ಸರಳ ವಿವಾಹವನ್ನು ಕುರಿತು ಮಾತನಾಡಿದ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷರಾದ ಎಂ.ರಾಮು, ಹಳ್ಳಿಗಾಡಿನ ರೈತ ಸಮುದಾಯಕ್ಕೆ ಕುವೆಂಪುರವರು ನೀಡಿದ ಕೊಡುಗೆ ಇದಾಗಿದ್ದು, ಅವರ ಮಂತ್ರ ಮಾಂಗಲ್ಯದ ಮಾದರಿಯ ಮದುವೆ ಮಾಡಿಕೊಂಡು ಹಲವು ಜನ ಈಗ ಸುಖೀಜೀವನ ನಡೆಸುತ್ತಿದ್ದಾರೆ ಎಂದರು.
ರಾಮನಗರ ಜಿಲ್ಲಾ ರೈತ ಸಂಘ ಹಸಿರು ಸೇನೆಯ ಅಧ್ಯಕ್ಷರಾದ ಕೆ.ಮಲ್ಲಯ್ಯ ಮಾತನಾಡಿ, ರೈತ ಸಂಘದ ಅಡಿಯಲ್ಲಿ ಇಂತಹ ಸಾವಿರಾರು ಮದುವೆಗಳು ನಡೆಯುತ್ತಿದ್ದು ಇವು ಎಲ್ಲಾ ರೀತಿಯಲ್ಲಿಯೂ ಉಪಯುಕ್ತವಾಗಿವೆ ಎಂದರು.
ವಿವಾಹ ಸಂಹಿತೆಯನ್ನು ಬೋಧನೆ ಮಾಡಿದ ಪತ್ರಕರ್ತ ಸು.ತ ರಾಮೇಗೌಡ, ಕುವೆಂಪುರವರೇ ತಮ್ಮ ಮಗ ಪೂರ್ಣಚಂದ್ರ ತೇಜಸ್ವಿಯವರ ಅಂತರ್ ಜಾತಿ ಮದುವೆಯನ್ನು ಮಾಡಿದ್ದರು, ಅವರ ಬದುಕು ಹಾಲು ಜೇನಿನಂತೆ ಇತ್ತು ಎಂದು, ಗೊತ್ತಿಲ್ಲದ ಶಾಸ್ತ್ರ ಕಂದಚಾರಗಳನ್ನು ಹೊರತುಪಡಿಸಿ ತಮಗೆ ಅನ್ನಿಸಿದಂತೆ ಈ ರೀತಿಯ ಮದುವೆ ಮಾಡಿಕೊಂಡು ಹೊಂದಾಣಿಕೆಯ ಬದುಕು ನಡೆಸಿ, ಸಮಾಜಕ್ಕೆ ಈ ಜೋಡಿ ಮಾದರಿಯಾಗಿದೆ ಎಂದರು.
ಸಂದರ್ಭದಲ್ಲಿ ರೈತ ಸಂಘದ ಕೆಲವೇ ಕೆಲವರು ಭಾಗವಹಿಸಿದ್ದರು. ವಧೂ ವರರ ಕಡೆಯವರೂ ಸಹ ಸೀಮಿತ ಸಂಖ್ಯೆಯಲ್ಲಿದ್ದರು.
ಕೊರೊನಾ ಕಾಟ ಇದ್ದು ಆದಷ್ಟೂ ಅಂತರ ಕಾಯ್ದುಕೊಂಡಿದ್ದೂ ಸಹ ವಿಶೇಷವಾಗಿತ್ತು. ಬಂದಿದ್ದವರು ಒಬ್ಬೊಬ್ಬರಾಗಿಯೇ ಬಂದು ಆಶೀರ್ವದಿಸಿದರು.
*ಅಧಿಕಾರಿಗಳ ಸರಳ ವಿವಾಹ*
ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳಿಬ್ಬರು ಸರಳವಾಗಿ ಮದುವೆ ಮಾಡಿಕೊಂಡು ಉಳ್ಳವರಿಗೆ ಮಾದರಿಯಾದರು.
ನಗರದ ಮಂಗಳವಾರಪೇಟೆ ಯ ಕಂಬೇಗೌಡ ರ ಕುಟುಂಬದ ಪಶು ವೈದ್ಯೆ ಡಾ ಪಿ ರಕ್ಷಿತಾ ರವರು ದೊಡ್ಡರಸನಕೆರೆ ಗ್ರಾಮದಲ್ಲಿ ಸೇವೇ ಸಲ್ಲಿಸುತ್ತಿದ್ದು, ಮಂಡ್ಯ ಜಿಲ್ಲೆ/ತಾಲ್ಲೂಕಿನ ಜವನೇಗೌಡನದೊಡ್ಡಿಯ ಎಂಎಸ್ಸಿ, ಪಿಹೆಚ್ಡಿ ಪದವೀಧರ ಡಾ ಬೊಮ್ಮೇಶ್ ರವರು ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಸಹಾಯಕ ತೋಟಗಾರಿಕಾ ಇಲಾಖೆಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಬಿ ಎರಹಳ್ಳಿ ಗ್ರಾಮದ ಶ್ರೀ ಬೊಮ್ಮಲಿಂಗೇಶ್ವರ ದೇವಾಲಯದಲ್ಲಿ ಸರಳ ಮದುವೆಯಾಗುವುದರ ಮೂಲಕ ಅದ್ದೂರಿತನಕ್ಕೆ ಸೆಡ್ಡು ಹೊಡೆದು ಸರಳ ವಿವಾಹವಾಗಿದ್ದು ಇಂದಿನ ಅದ್ದೂರಿ ಮದುವೆಯಾಗುವ ಜೋಡಿಗಳಿಗೆ ಮಾದರಿಯಾದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು